ಅತ್ತೆ, ಮಾವನ ಕೊಂದ್ರೆ ಹೆಂಡತಿ ಸಿಗ್ತಾಳೆ ಅಂದ್ಕೊಂಡೆ
Team Udayavani, Mar 5, 2017, 11:35 AM IST
ಬೆಂಗಳೂರು: ಅತ್ತೆ, ಮಾವನನ್ನು ಕೊಲೆ ಮಾಡಿದ್ರೆ, ಹೆಂಡತಿ ನನ್ನೊಂದಿಗೆ ಬರ್ತಾಳೆ ಅಂತಾ ಕೊಲೆ ಮಾಡಿದೆ. ಕೋಣನಕುಂಟೆಯ ಅನ್ನಪೂಣೇಶ್ವರಿ ಲೇಔಟ್ನಲ್ಲಿ ಶುಕ್ರವಾರ ಅತ್ತೆ ಮುರುಗಮ್ಮ (55) ಮಾವ ಕುಮಾರ್ (60) ಅವರನ್ನು ಹತ್ಯೆಗೈದು ಹೆಂಡತಿ ಮತ್ತು ನೆರೆ ಮನೆಯ ನಿವಾಸಿಗೆ ಚಾಕುವಿನಿಂದ ಇರಿದು ಪರಾರಿಯಾಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಸೆಂಥಿಲ್ ಕುಮಾರ್ ಪೊಲೀಸರ ವಿಚಾರಣೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾನೆ.
ಕಳೆದ ಐದಾರು ತಿಂಗಳಿಂದ ಪತ್ನಿಯಿಂದ ದೂರ ಇದ್ದೇನೆ. ಸಾಕಷ್ಟು ಬಾರಿ ಮನೆಗೆ ಬಂದು ಪತ್ನಿ ಮತ್ತು ಮಗುವನ್ನು ಕಳುಹಿಸುಂತೆ ಮಾವ ಕುಮಾರ್ ಮತ್ತು ಅತ್ತೆ ಮುರುಗುಮ್ಮನನ್ನು ಕೋರಿಕೊಂಡಿದ್ದೆ. ಆದರೆ ಅವರು ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಲಿಲ್ಲ. ಶುಕ್ರವಾರ ಕೂಡ ಪತ್ನಿಯನ್ನು ನನ್ನೊಂದಿಗೆ ಕಳುಹಿಸುವಂತೆ ಪರಿಪರಿಯಾಗಿ ಮನವಿ ಮಾಡಿದೆ.
ಇದಕ್ಕೆ ಅತ್ತೆ-ಮಾವ ಇಬ್ಬರು ಜಗಳ ತೆಗೆದರು. ಇವರಿಬ್ಬರುನ್ನು ಹತ್ಯೆ ಮಾಡಿದರೆ, ಪತ್ನಿ ನನ್ನೊಂದಿಗೆ ಬರುತ್ತಾಳೆ ಎಂದು ಕೊಲೆ ಮಾಡಲು ಸಂಚು ರೂಪಿಸಿದೆ. ಹೀಗಾಗಿ ರಾತ್ರಿ 8 ಗಂಟೆ ಸುಮಾರಿಗೆ ಮದ್ಯ ಸೇವಿಸಿ ಬಂದು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇಬ್ಬರನ್ನು ಕೊಲೆ ಮಾಡಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ರಕ್ಷಣೆಗೆ ಧಾವಿಸಿದ್ದ ಪತ್ನಿ ಮತ್ತು ನೆರೆ ಮನೆಯ ನಿವಾಸಿ ಮಂಜುನಾಥ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು. ಮಗಳನ್ನು ವಾಪಸ್ ಕಳುಹಿಸುವಂತೆ ಕೇಳಿಕೊಂಡಿದ್ದ ಸೆಂಥಿಲ್ಗೆ, ತಮ್ಮ ಮನೆಯಲ್ಲಿ ಬಂದು ಇರುವಂತೆ ಅತ್ತೆ-ಮಾವ ತಿಳಿಸಿದ್ದರು.
ಹೀಗಾಗಿ ಆರೋಪಿ ಸೆಂಥಿಲ್ನನ್ನು ಕಳೆದ ಒಂದೂವರೆ ತಿಂಗಳಿಂದ ಕುಮಾರಸ್ವಾಮಿ ಲೇಔಟ್ನಲ್ಲಿರುವ ಮೀನು ಮಾರಾಟ ಅಂಗಡಿಯೊಂದರಲ್ಲಿ ಮಾವ ಕುಮಾರ್ ಅವರೆ ಕೆಲಸಕ್ಕೆ ಸೇರಿಸಿದ್ದರು ಎಂದು ಪೊಲೀಸರು ವಿವರಿಸಿದರು. ಕೃತ್ಯವೆಸಗಿದ ಬಳಿಕ ಸೆಂಥಿಲ್ ನೆಲಮಂಗಲದ ಬಳಿ ಇರುವ ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿದ್ದ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಪತ್ನಿ ಸತ್ಯಾವತಿ (30) ಮತ್ತು ನೆರೆ ಮನೆ ನಿವಾಸಿ ಮಂಜುನಾಥ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಷಕರಿಲ್ಲದ ವೇಳೆ ಕರೆದೊಯ್ದು ವಿವಾಹ
ಬಂಧಿತ ಆರೋಪಿ ಸೆಂಥಿಲ್ ಸತ್ಯಾವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಪೋಷಕರ ವಿರೋಧವಿತ್ತು. ಮನೆಯಲ್ಲಿ ಸತ್ಯಾವತಿ ಪೋಷಕರು ಇಲ್ಲದ ವೇಳೆ ಆಕೆಯನ್ನು ಕರೆದುಕೊಂಡು ಹೋಗಿ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದ. ವಿವಾಹವಾದ ಬಳಿಕ ಸತ್ಯಾವತಿಯನ್ನು ತಮಿಳುನಾಡಿನ ತಿರುಪತ್ತೂರಿಗೆ ಕರೆದೊಯ್ದು ತನ್ನ ಪೋಷಕರೊಂದಿಗೆ ವಾಸವಿದ್ದ.
ಬಟ್ಟೆ ಅಂಡಿಯೊಂದರಲ್ಲಿ ಕೆಲಸಕಿದ್ದ ಸೆಂಥಿಲ್ ಮದ್ಯ ವ್ಯಸನಿಯಾಗಿದ್ದ. ಕುಡಿದು ಬಂದು ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಸತ್ಯಾವತಿ ಪೋಷಕರು ಆಕೆಯನ್ನು ಕರೆತಂದು ತಮ್ಮ ಬಳಿ ಇರಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ