ಅಳುತ್ತಿದ್ದ ಮಗುವನ್ನು ಕಾಲಿನಿಂದ ಒದ್ದು ಕೊಂದ ಮಹಿಳೆ!
Team Udayavani, Jan 15, 2017, 11:45 AM IST
ಬೆಂಗಳೂರು: ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡಲಾಗದ ಮಹಿಳೆಯೊಬ್ಬಳು ಹಲ್ಲೆ ನಡೆಸಿ ಕೊಲೆಗೈದಿರುವ ಹೃದಯ ವಿದ್ರಾವಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೀಲಸಂದ್ರದ ಆರ್ಮುಗಂ ಮತ್ತು ಶಾರದಾ ದಂಪತಿಯ 2 ವರ್ಷದ ವಿಜಯ್ ಕೊಲೆಯಾದ ಹಸುಳೆ. ಜ. 9ರಂದು ಮಗು ಮೃತಪಟ್ಟಿತ್ತು.
ಪಾಲಕರು ಮಗು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಭಾವಿಸಿದ್ದರು. ಆದರೆ, ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಗುವಿನ ಮೇಲೆ ತೀವ್ರ ಹಲ್ಲೆ ನಡೆದಿರುವುದು ಬಯಲಿಗೆ ಬಂದಿದ್ದು, ವಿಚಾರಣೆ ನಡೆಸಿದಾಗ ಆರ್ಮುಗಂ ಅವರ ಹಿರಿಯ ಮಗ ಕೆಲಸ ಮಾಡುತ್ತಿದ್ದ ಪ್ರಿಟಿಂಗ್ ಪ್ರಸ್ನ ಮಾಲೀಕನ ಪತ್ನಿಯಾದ ನೀಲಸಂದ್ರದ ಎಂ.ಜಿ. ಗಾರ್ಡನ್ ನಿವಾಸಿ ಕಸ್ತೂರಿ ಬಾಯಿ (42) ಮಗುವಿನ ಮೇಲೆ ಮಾರಕ ಹಲ್ಲೆ ನಡೆಸಿದ್ದಳು ಎಂಬುದು ಗೊತ್ತಾಗಿದೆ. ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಟ್ಟಡ ಕಾರ್ಮಿಕರ ಪುತ್ರ
ನೀಲಸಂದ್ರದ ಆರ್ಮುಗಂ ಮತ್ತು ಶಾರದಾ ದಂಪತಿಯು ನಿರ್ಮಾಣ ಹಂತದ ಕಟ್ಟಡ ಕಾರ್ಮಿಕರಾಗಿದ್ದು, ಇವರಿಗೆ ಮೂವರು ಗಂಡು ಮಕ್ಕಳು. ಆರೋಪಿ ಮಹಿಳೆ ಇವರ ಮನೆ ಬಳಿ ಪ್ರಿಟಿಂಗ್ ಪ್ರಸ್ ಹೊಂದಿದ್ದು, ಈಕೆಯ ಬಳಿ ದಂಪತಿಯ ಮೊದಲ ಮಗ ಪ್ರಿಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದ.
ಜ.9ರಂದು ದಂಪತಿಯ ಎರಡನೇ ಮಗ, ತನ್ನ ಎರಡು ವರ್ಷದ ಮಗುವನ್ನು ಕರೆದುಕೊಂಡು ಪ್ರಿಂಟಿಂಗ್ ಪ್ರಸ್ಗೆ ತೆರಳಿದ್ದ. “ನಿಮ್ಮ ಅಣ್ಣ ಕೆಲಸಕ್ಕೆ ಬಂದಿಲ್ಲ, ಎಲ್ಲಿ ಹೋಗಿದ್ದಾನೋ ನೋಡಿಕೊಂಡು ಬಾ’ ಎಂದು ಹೇಳಿ ಆತನನ್ನು ಕಳುಹಿಸಿದ್ದಳು. ಆ ವೇಳೆ ಮಗುವು ಕಸ್ತೂರಿಬಾಯಿ ಅವರ ಸುಪರ್ದಿಯಲ್ಲಿತ್ತು. ಈ ಸಂದರ್ಭದಲ್ಲಿ ಮಗು ತುಂಬಾ ಅತ್ತಿದ್ದರಿಂದ ಸಿಟ್ಟಾದ ಆಕೆ ಮಗುವಿಗೆ ಕಾಲಿನಿಂದ ಒದ್ದಿದ್ದಳು. ಬಳಿಕ ಪುಟ್ಟ ಕಡೆಗೋಲಿನಿಂದ ಮಗುವಿನ ಮೇಲೆ ಹÇÉೆ ನಡೆಸಿದ್ದಳು. ತೀವ್ರವಾಗಿ ಗಾಯಗೊಂಡ ಮಗು ಪ್ರಜ್ಞಾಹೀನವಾಗಿತ್ತು. ಮಗುವಿನ ಅಣ್ಣ ಮನೆಗೆ ವಾಪಸ್ ಬಂದಾಗ ಕಸ್ತೂರಿ ಮಗುವನ್ನು ಕೊಂಡೊಯ್ಯುವಂತೆ ಹೇಳಿದ್ದಳು.
ಮನೆಗೆ ಹೋದ ಕೂಡಲೇ ಮಗು ಮಲ ವಿಸರ್ಜನೆ ಮಾಡಿಕೊಂಡಿತ್ತು. ಏನೂ ತಿಳಿಯದ ಮಕ್ಕಳು ಮಗುವನ್ನು ಶುಚಿಗೊಳಿಸಿ ಮಲಗಿಸಿದ್ದರು. ಬಳಿಕ ಸಂಜೆಯಾದರೂ ಮಗು ಎಚ್ಚರಗೊಂಡಿಲ್ಲ. ಮನೆಗೆ ಬಂದ ಪೋಷಕರು ಮಗುವನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಮಗುವನ್ನು ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದರು. ಮರುದಿನ ಬೌರಿಂಗ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದಾಗ ವರದಿಯಲ್ಲಿ ಹಲ್ಲೆಯಿಂದಾಗಿ ಮಗು ಮೃತಪಟ್ಟಿದೆ ಎಂಬ ಸತ್ಯ ಹೊರ ಬಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಮಹಿಳೆ ಕೊಲೆ ಮಾಡಿರುವುದು ತಿಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ
Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ
Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್