ಬತ್ತಿ ಬರಿದಾದ ಪ್ರವಾಸಿ ತಾಣ ಅಗಸ್ತ್ಯತೀರ್ಥ !


Team Udayavani, Sep 22, 2018, 7:00 AM IST

ban22091807medn.jpg

ಬಾದಾಮಿ: ವಿಶ್ವದ ಗಮನ ಸೆಳೆದಿರುವ ಪ್ರವಾಸಿ ತಾಣ, ಹಲವಾರು ಚಲನಚಿತ್ರಗಳ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿರುವ ಇಲ್ಲಿನ ಅಗಸ್ತ್ಯತೀರ್ಥ ಹೊಂಡ ಬರೋಬ್ಬರಿ 46 ವರ್ಷಗಳ ಬಳಿಕ ಬತ್ತಿ ಬರಿದಾಗಿದೆ.

ಪಟ್ಟಣದ ಸುತ್ತಲಿನ ಸಿ ಆಕಾರದ ಗುಡ್ಡಗಳ ಮಧ್ಯೆ ಇರುವ ಅಗಸ್ತ್ಯತೀರ್ಥ  ಹೊಂಡಕ್ಕೆ ಇತಿಹಾಸವಿದೆ. ಈ ಹೊಂಡದಲ್ಲೇ ಬಾದಾಮಿ ಚಾಲುಕ್ಯ ಅರಸರ ಕಾಲದ ಕಲ್ಲಿನಲ್ಲಿ ನಿರ್ಮಿಸಲಾದ ಸುಂದರ ಭೂತನಾಥ ದೇವಾಲಯವಿದ್ದು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಪಕ್ಕದಲ್ಲೇ ಮೇಣಬಸದಿ ಇದ್ದು, ಬಾದಾಮಿಗೆ ಬರುವ ಸಾವಿರಾರು ಪ್ರವಾಸಿಗರು ಅಗಸ್ತ್ಯತೀರ್ಥ ಹೊಂಡ, ಭೂತನಾಥ ದೇವಾಲಯ, ಮ್ಯೂಜಿಯಂ (ವಸ್ತು ಸಂಗ್ರಹಾಲಯ), ಮೇಣಬಸದಿ ನೋಡಿ ಆನಂದ ಪಡುತ್ತಾರೆ.

ಕ್ರಿಕೆಟ್‌ ಮೈದಾನವಾಯ್ತು: 1972ರಲ್ಲಿ ತೀವ್ರ ಬರ ಆವರಿಸಿದ್ದಾಗ ಅಗಸ್ತ್ಯತೀರ್ಥ  ಹೊಂಡ ಬತ್ತಿತ್ತು. ಅದಾದ ಬಳಿಕ ಎಷ್ಟೇ ಮಳೆ ಕೊರತೆ ಕಂಡು ಬಂದರೂ ಹೊಂಡ ಒಮ್ಮೆಯೂ ಬತ್ತಿರಲಿಲ್ಲ. ಆದರೀಗ ಸಂಪೂರ್ಣ ಬತ್ತಿದ್ದು, ಭೂತನಾಥ ದೇವಾಲಯ ಎದುರು ಭಣಗುಡುತ್ತಿದೆ. ಅಗಸ್ತ್ಯತೀರ್ಥ ಹೊಂಡದ ಆವರಣವನ್ನು ಯುವಕರು ಕ್ರಿಕೆಟ್‌ ಮೈದಾನವನ್ನಾಗಿ ಮಾಡಿಕೊಂಡಿದ್ದಾರೆ.

ಮಳೆ ಆದ್ರೆ ನೀರು: ಅಗಸ್ತ್ಯತೀರ್ಥ  ಹೊಂಡಕ್ಕೆ ಕೆರೆ ತುಂಬುವಂತಹ ಯೋಜನೆಗಳು ಕೈಗೊಳ್ಳಲು ಸಾಧ್ಯವೇ ಇಲ್ಲ. ಈಗಾಗಲೇ ಅವಕಾಶ ಇರುವ ಬನಶಂಕರಿ ಹೊಂಡವನ್ನೇ ತುಂಬಿಸಲು ಅಧಿಕಾರಸ್ಥರು ಮುಂದಾಗಿಲ್ಲ. ಇನ್ನು ಸಣ್ಣ ಕೆಲಸಕ್ಕೂ ತಕರಾರು ತೆಗೆಯುವ ಎಎಸ್‌ಐ (ಭಾರತೀಯ ಪುರಾತತ್ವ ಇಲಾಖೆ), ಈ ಹೊಂಡಕ್ಕೆ ನೀರು ತುಂಬಿಸಲು 3 ಅಡಿಯ ಪೈಪ್‌ ಹಾಕಲು ಅನುಮತಿ ಕೊಡಲ್ಲ. ಅಲ್ಲದೇ ಗುಹಾಂತರ ದೇವಾಲಯಗಳ ಮಾರ್ಗವಾಗಿ, ಅಗಸ್ತ್ಯತೀರ್ಥ ಹೊಂಡಕ್ಕೆ  ಪೈಪ್‌ಲೈನ್‌ ಮಾಡಲು ಬೇರೆ ಮಾರ್ಗವಿಲ್ಲ. ಹೀಗಾಗಿ ಕೆರೆ ತುಂಬುವಂತಹ ಯೋಜನೆ ಅಳವಡಿಸುವುದು ದುಸ್ಸಾಹಸದ ಕೆಲಸ ಎನ್ನುತ್ತಾರೆ ಪ್ರಜ್ಞಾವಂತರು.

ಸಿ ಆಕಾರದ ಗುಡ್ಡಗಳೇ ಆಸರೆ: ಅಗಸ್ತ್ಯತೀರ್ಥ ಹೊಂಡದ ಸುತ್ತಲೂ ಸಿ ಆಕಾರದ ಗುಡ್ಡಗಳಿವೆ. ಅದರಲ್ಲಿ ಪೂರ್ವ ಭಾಗದ ಮಹಾಕೂಟ ಭಾಗದ ಗುಡ್ಡ (ಕಾರಂಜಿ)ಗಳು ಸಿ ಆಕಾರದಲ್ಲಿವೆ. ಜತೆಗೆ ಅಕ್ಕ-ತಂಗಿ ದಿಡಗು ಮೂಲಕ ಈ ಹೊಂಡಕ್ಕೆ ನೀರು ಬರುತ್ತದೆ. ಅದು ಬಾದಾಮಿ ಸುತ್ತಲಿನ ಈ ಗುಡ್ಡಗಳ ಮೇಲೆ ಮಳೆ ಆದರೆ ಮಾತ್ರ. ಅದು ಅಕ್ಕ- ತಂಗಿ ದಿಡಗು, ಮಹಾಕೂಟ ಭಾಗದ ಗುಡ್ಡಗಳ ಮೂಲಕ ಬರುವ ಕಾರಂಜಿ ನೀರು ಹೊರತುಪಡಿಸಿದರೆ ಬೇರೆ ಜಲಮೂಲಗಳೇ ಇಲ್ಲ.

ಅಗಸ್ತ್ಯತೀರ್ಥ ಹೊಂಡ ಅದ್ಭುತ ಹಾಗೂ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ. ನಮ್ಮ ಹಿರಿಯರು ಹೇಳುವಂತೆ ಇದು 1972ರಲ್ಲಿ ಬತ್ತಿತ್ತು. ಆ ಬಳಿಕ ಒಮ್ಮೆಯೂ ಬತ್ತಿರಲಿಲ್ಲ. ಈ ವರ್ಷ ಸಂಪೂರ್ಣ ಖಾಲಿಯಾಗಿದೆ. ಇದಕ್ಕೆ ಕೆರೆ ತುಂಬುವಂತಹ ಯೋಜನೆ ಕೈಗೊಳ್ಳುವುದು ದೂರದ ಮಾತು. ಹೊಂಡ ತುಂಬಲು ಮಳೆರಾಯನ ಕೃಪೆಯೇ ಬೇಕು.
– ಇಷ್ಟಲಿಂಗ ಶಿರಸಿ, ಸಾಮಾಜಿಕ ಹೋರಾಟಗಾರ, ಬಾದಾಮಿ

– ಶಶಿಧರ ವಸ್ತ್ರದ

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.