ಸ್ಟಾರ್ಟ್‌ಅಪ್‌ಗಳಿಗೆ ಬೆಂಗಳೂರು ಅಚ್ಚುಮೆಚ್ಚು


Team Udayavani, Dec 18, 2019, 3:06 AM IST

star5t-app

ಬೆಂಗಳೂರು: ಕಳೆದ ದಶಕದಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು 31 ಬಿಲಿಯನ್‌ ಡಾಲರ್‌ ಹೂಡಿಕೆ ಸಂಗ್ರಹಿಸಿದ್ದು, ಇದು ದೇಶದ ಸ್ಟಾರ್ಟ್‌ಅಪ್‌ ವ್ಯವಸ್ಥೆಯಲ್ಲಿನ ಒಟ್ಟು ಹೂಡಿಕೆಯ ಶೇ.45ರಷ್ಟಿದೆ ಎಂದು ಸ್ಟಾರ್ಟ್‌ ಅಪ್‌ ವಿಷನ್‌ ಗ್ರೂಪ್‌ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ. ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ನೇತೃತ್ವದಲ್ಲಿ ಸಿದ್ಧಪಡಿಸಿದ ಆವಿಷ್ಕಾರ್‌ ವರದಿ-2019 ಅನ್ನು ಗುರುವಾರ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಐಟಿ-ಬಿಟಿ ಇಲಾಖೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದರು.

2016ರ ನಂತರ ದೆಹಲಿ ಮತ್ತು ಮುಂಬೈ ನಗರಗಳ ಒಟ್ಟು ಬಂಡವಾಳ ಸಂಗ್ರಹಕ್ಕಿಂತ 20 ಬಿಲಿಯನ್‌ ಡಾಲರ್‌ ಬಂಡವಾಳವನ್ನು ಬೆಂಗ ಳೂರು ಆಕರ್ಷಿಸಿದೆ. ನಗರ ಹೂಡಿಕೆಗೆ ಆದ್ಯತಾ ತಾಣವಾಗಿದ್ದು ದೇಶದ ಶೇ.55 ರಷ್ಟು ಸರಡಿ ಡಿ ಪ್ಲಸ್‌ ಹೂಡಿಕೆ ಸ್ಥಳೀಯ ಸ್ಟಾರ್ಟ್‌ಅಪ್‌ಗಳ ಪಾಲಾಗುತ್ತಿವೆ ಎಂದು ವರದಿಯಲ್ಲಿ ತಿಳಿಸಿದೆ.

ಡಿಜಿಟಲ್‌ ವಹಿವಾಟಿನಲ್ಲಿ ಅಗ್ರಸ್ಥಾನ: ಡಿಜಿಟಲ್‌ ವಹಿವಾಟಿನಲ್ಲಿ ದೇಶದಲ್ಲಿಯೇ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಪ್ರತಿ ವ್ಯಕ್ತಿ ತಿಂಗಳಿಗೆ ಡಿಜಿಟಲ್‌ ರೂಪದಲ್ಲಿ ಸರಾಸರಿ 8,600 ರೂ. ಪಾವತಿಸುತ್ತಿದ್ದಾನೆ. ಡಿಜಿಟಲ್‌ ವಹಿವಾಟಿಗೆ ಬೆಂಗಳೂರಿಗರು ಹೆಚ್ಚು ಒಲವು ತೋರಿದ್ದು, ಅಧಿಕ ವಹಿವಾಟಿಗೆ ಕಾರಣರಾಗಿದ್ದಾರೆ. ದೇಶದಲ್ಲಿ ನಡೆದಿರುವ ಒಟ್ಟು ಡಿಜಿಟಲ್‌ ವಹಿವಾಟಿನಲ್ಲಿ ಬೆಂಗಳೂರಿನಲ್ಲಿ ಶೇ.38.10 ರಷ್ಟು ನಡೆದಿದೆ. ಹೈದರಾಬಾದ್‌ನಲ್ಲಿ ಶೇ.12.50, ದೆಹಲಿಯಲ್ಲಿ ಶೇ.10.22, ಪುಣೆಯಲ್ಲಿ ಶೇ.9.50 ಹಾಗೂ ಮುಂಬೈನಲ್ಲಿ ಶೇ.6.78 ನಂತರದ ಸ್ಥಾನದಲ್ಲಿವೆ. ಬೆಂಗ ಳೂರು ನವೋದ್ಯಮದಲ್ಲಿ ಅಗ್ರ ಸ್ಥಾನದಲ್ಲಿದೆ. ಇಲ್ಲಿ ಅತಿ ಹೆಚ್ಚು ಉದ್ಯೋಗ ಅರ್ಹತೆ ದರವಿದ್ದು, ಈ ನಗರ ಉದ್ಯೋಗ ಆಯ್ಕೆಗೆ ಮಹಿಳೆಯರಿಗೆ ಪ್ರಥಮ ಆಯ್ಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಂತ್ರಜ್ಞಾನ ಕೌಶಲ್ಯ: ಆನ್‌ಲೈನ್‌ ಶಾಪಿಂಗ್‌ನಲ್ಲಿಯೂ ನಗರ ಅಗ್ರಸ್ಥಾನ ಕಾಯ್ದುಕೊಂ ಡಿದ್ದು, ಶೇ.69 ಆನ್‌ಲೈನ್‌ ಖರೀದಿ ನಡೆದಿದೆ. ಈ ಪಟ್ಟಿಯಲ್ಲಿ ಮುಂಬೈ ಶೇ.65 ಮತ್ತು ದೆಹಲಿ ಶೇ.61ರಷ್ಟಿದ್ದು ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿವೆ. ನಗರದ ಶೇ.44 ಮಂದಿ ತಂತ್ರಜ್ಞಾನ ಕೌಶಲ್ಯ ಹೊಂದಿದ್ದಾರೆ. ಈ ಪ್ರಮಾಣ ಚೆನ್ನೈನಲ್ಲಿ ಶೇ.38, ದೆಹಲಿಯಲ್ಲಿ ಶೇ.38 ಹಾಗೂ ಮುಂಬೈನಲ್ಲಿ ಶೇ.11 ರಷ್ಟು ಇದೆ ಎಂದು ವಿವರಿಸಲಾಗಿದೆ.

ವಿಶ್ವದ 780 ಪ್ರಮುಖ ನಗರಗಳಲ್ಲಿ ದೇಶದ 20ರಲ್ಲಿ 17 ನಗರ ಅತ್ಯಂತ ವೇಗವಾಗಿ ಬೆಳೆಯುವ ನಗರವಾಗಿ ಗುರುತಿಸಿಕೊಂಡಿದೆ. ಅದರಲ್ಲಿ ಬೆಂಗಳೂರು, ಹೈದರಾಬಾದ್‌, ಚೆನ್ನೈಗೆ ಹೆಚ್ಚಿನ ಅವಕಾಶಗಳಿವೆ. 2020- 2035ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಶೇ.8.50, ಡಾಕಾದಲ್ಲಿ ಶೇ.7.60, ಮುಂಬೈನಲ್ಲಿ ಶೇ.6.60, ದೆಹಲಿಯಲ್ಲಿ ಶೇ.6.50 ಮತ್ತು ವಿಶ್ವದ ಒಟ್ಟು ಸರಾಸರಿ ಶೇ.2.80 ಜಿಡಿಪಿ ಬೆಳ ವಣಿಗೆ ಆಗಲಿದೆ ಎಂದು ಅಂದಾಜಿಸಲಾಗಿದೆ.

800ಕ್ಕೂ ಅಧಿಕ ಕಾಲೇಜುಗಳ ತವರು: ಬೆಂಗಳೂರು ಸುಮಾರು 100ಕ್ಕೂ ಅಧಿಕ ಕಾಲೇಜು ಸೇರಿ 800ಕ್ಕೂ ಅಧಿಕ ಕಾಲೇಜುಗಳ ತವರು ಮನೆಯಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ನಿರ್ವಹಣಾ ಶಾಸ್ತ್ರ ಸಂಸ್ಥೆ, ಐಐಐಟಿ-ಜಿ ಮೊದಲಾದ ಶೈಕ್ಷಣಿಕ ಸಂಸ್ಥೆಗಳ ಆಗರ. 90 ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್‌ ಪದವೀಧ ರರು ಪ್ರತಿ ವರ್ಷ ಈ ನಗರದಲ್ಲಿ ಸಿಗುತ್ತಿದ್ದಾರೆ.

ಬೆಂಗಳೂರಿಲ್ಲಿನ 25 ವರ್ಷದ ಶೇ.10, 25ರಿಂದ 30 ವರ್ಷದ ಶೇ.30, 30ರಿಂದ 40 ವರ್ಷದ ಶೇ.35ರಷ್ಟು ಹಾಗೂ ಶೇ.40ರಿಂದ 50 ವರ್ಷದ ಶೇ.12ರಷ್ಟು ನವೋದ್ಯಮಿ ಗಳಿದ್ದಾರೆ. ನವೋದ್ಯಮ ಸ್ಥಾಪನೆ ಮಾಡಿದವರಲ್ಲಿ ಶೇ.17 ಮಂದಿಗೆ 5 ವರ್ಷಗಳ ಅನುಭವ, ಶೇ.33ರಷ್ಟು ಮಂದಿಗೆ 5-10 ವರ್ಷ, ಶೇ.23ರಷ್ಟು ಮಂದಿಗೆ 10ರಿಂದ 15 ವರ್ಷ ಹಾಗೂ ಶೇ.15ರಷ್ಟು ಮಂದಿಗೆ 15ರಿಂದ 20 ವರ್ಷ ಅನುಭವವಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.