ಮೀನುಗಾರರ ಸಂಕಷಕ್ಕೆ ಸಕಾಲಿಕ ಸ್ಪಂದನೆ
Team Udayavani, Jul 26, 2021, 5:43 PM IST
ರಾಜ್ಯದಲ್ಲಿ ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮೀನುಗಾರರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರಿಗೆ ಪರಿಹಾರ ನೀಡುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ.
ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವ ಕರಾವಳಿ ಜಿಲ್ಲೆಗಳ ಮೀನುಗಾರರಲ್ಲಿಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿತ 18,746ಮೀನುಗಾರರಿಗೆ ತಲಾ 3 ಸಾವಿರ ರೂ.ಗಳಂತೆ ಪರಿಹಾರ ನೀಡಲು 5.62 ಕೋಟಿ ರೂ.ಅನುದಾನವನ್ನು ಮತ್ತು 7,668 ನಾಡದೋಣಿ ಹೊಂದಿರುವ ಮೀನುಗಾರರಿಗೆ ತಲಾ 3ಸಾವಿರ ರೂ.ಗಳಂತೆ ಪರಿಹಾರ ನೀಡಲು 2.30 ಕೋಟಿ ಅನುದಾನ ಸೇರಿ ಒಟ್ಟು 7.92ಲಕ್ಷ ಅನುದಾನವನ್ನು ಮೀಸಲಿಟ್ಟಿದೆ.
ಈ ಅನುದಾನವು ಫಲಾನುಭವಿ ಮೀನುಗಾರರಿಗೆ ಮೀನುಗಾರಿಕಾ ಇಲಾಖೆಯಮೂಲಕ ನೇರ ಖಾತೆಗೆವರ್ಗಾವಣೆಯಾಗಲಿದೆ.ಯಾಂತ್ರೀಕೃತ ಮೀನುಗಾರಿಕೆದೋಣಿಗಳು ಬಳಸಿದ ಡೀಸೆಲ್ಮೇಲಿನ ಮಾರಾಟ ಕರಕ್ಕೆಸಮನಾದ ಮೊತ್ತವನ್ನುಸಹಾಯಧನವಾಗಿ ದೋಣಿಮಾಲೀಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.
2019-20 ಸಾಲಿನಿಂದ ಇಲ್ಲಿಯವರೆಗೆ 264.55 ಕೋಟಿಗಳನ್ನು 2.34 ಲಕ್ಷ ಕಿಲೋ ಮೀಟರ್ ಡೀಸೆಲ್ಪೂರೈಸಲು ಸಹಾಯಧನವಾಗಿ 3,141 ದೋಣಿಗಳ ಮಾಲೀಕರ ಬ್ಯಾಂಕ್ ಖಾತೆಗೆನೇರವಾಗಿ ಪಾವತಿಸಲಾಗಿದೆ.
ಕರರಹಿತ ದರದಲ್ಲಿ ವಿತರಣೆ: ಮೀನುಗಾರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವನಿಟ್ಟಿನಲ್ಲಿ ಕರ ರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ.ಯಾಂತ್ರೀಕೃತ ದೋಣಿಗಳಿಗೆ ಡಿಲವರಿ ಪಾಯಿಂಟ್( ಬಂದರು ಪ್ರದೇಶದಲ್ಲಿಯಾಂತ್ರಿಕೃತ ದೋಣಿಗಳಿಗೆ ಡೀಸೆಲ್ ತುಂಬಿಸಲು ನಿಗದಿಪಡಿಸಿರುವ ಜಾಗ) ನಲ್ಲಿಡೀಸೆಲ್ ಭರ್ತಿ ಮಾಡಲಾಗುತ್ತದೆ.
ಡಿಸೇಲ್ ಕರ ಪಾವತಿ ಮಾಡಬೇಕಿದ್ದರಿಂದ ದೋಣಿಮಾಲೀಕರಿಗೆ ಹೊರೆಯಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು 2021-22ನೇ ಸಾಲಿನಿಂದ 1.5 ಲಕ್ಷ ಕಿಲೋ ಮೀಟರ್ ಡೀಸೆಲ್ಅನ್ನುಯಾಂತ್ರೀಕೃತ ದೋಣಿಗಳಿಗೆ ಡೆಲಿವರಿ ಪಾಯಿಂಟ್ನಲ್ಲಿಯೇ ಕರರಹಿತ ದರದಲ್ಲಿವಿತರಿಸಲಾಗುತ್ತದೆ.
ಬಂದರುಗಳ ಅಭಿವೃದ್ಧಿ: ಮಲ್ಪೆ, ಮಂಗಳೂರು, ಕಾರವಾರದ ಪ್ರಮುಖ ಬಂದರೂಸೇರಿದಂತೆ ಗಂಗೊಳ್ಳಿ, ಹೆಜಮಾಡಿ, ಭಟ್ಕಳ ಸಹಿತವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿರುವ ಬಂದರು, ಕಿರು ಬಂದರು, ದೋಣಿ ಇಳಿದಾಣ ಕೇಂದ್ರ, ಹೊರಬಂದರು ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಘೋಷಣೆಯ ಜತೆಗೆ ಕಾಮಗಾರಿಯನ್ನು ವೇಗವಾಗಿ ನಡೆಸುತ್ತಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರನ್ನು 180.84 ಕೋಟಿಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುದಾನ ಮಂಜೂರುಮಾಡಲಾಗಿದೆ. ಇದಕ್ಕಾಗಿ ಪ್ರಥಮ ಕಂತಿನ ಅನುದಾನ 13.86 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.
ಯೋಜನೆಗೆ ಅವಶ್ಯವಿರುವ ಖಾಸಗಿ ಭೂಮಿಯನ್ನು ಖರೀದಿಸುವ ಪ್ರಕ್ರಿಯೆಜಾರಿಯಲ್ಲಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಅಳ್ವೆಕೋಡಿ-ತೆಂಗಿನಗುಂಡಿಮೀನುಗಾರಿಕೆ ಇಳಿದಾಣ ಕೇಂದ್ರದ ಅಲೆ ತಡೆಗೋಡೆ ನಿರ್ಮಾಣವನ್ನು 86.08ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಡೆಸಲು ರಾಜ್ಯ ಸರ್ಕಾರ ಆಡಳಿತಾತ್ಮಕಮಂಜೂರಾತಿ ನೀಡಿದೆ. ಹಾಗೆಯೇ ಈ ಯೋಜನೆಗೆ ಕೇಂದ್ರ ಸರ್ಕಾರವುಶೇ.50ರಷ್ಟು (43.04 ಕೋಟಿ) ನೆರವು ನೀಡುತ್ತಿದ್ದು, ಪ್ರಸ್ತುತ 1.47 ಕೋಟಿಅನುದಾನ ಬಿಡುಗಡೆಯಾಗಿರುತ್ತದೆ.
ಇಳಿದಾಣ ಕೇಂದ್ರದ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯೂ ಈಗಾಗಲೇ ಆರಂಭವಾಗಿದೆ. 22 ಕೋಟಿ ರೂ.ವೆಚ್ಚದಲ್ಲಿ ಮಂಗ ಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ಕಾಮಗಾರಿಗಳನ್ನುಕೈಗೊಳ್ಳಲು ಮಂಜೂರಾತಿ ನೀಡಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಮರವಂತೆಯಲ್ಲಿ ಹೊರಬಂದರಿನ 2ನೇ ಹಂತದ ಕಾಮಗಾರಿಗಳನ್ನು 85. ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಇದರಿಂದ ತಾಲೂಕು ವ್ಯಾಪ್ತಿಯ ನಾಡದೋಣಿ ಮೀನುಗಾರರಿಗೆ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಸಾವಿರಾರುಮೀನುಗಾರರಿಗೆ ಅನುಕೂಲವಾಗಿದೆ. 2ನೇ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಹಾಗೆಯೇ ತಾಲೂಕಿನ ಕೊಡೇರಿಕಿರು ಬಂದರು ಪ್ರದೇಶದ ಅಭಿವೃದ್ಧಿ ಕಾಮಗಾರಿಗಾಗಿ 2 ಕೋಟಿ ರೂ.ಗಳನ್ನು ಒದಗಿಸಿ,ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಇದರಿಂದ ಕೊಡೇರಿ ಕಿರು ಬಂದರುವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ