ಇಂಡಿಯನ್ ಬ್ಯಾಂಕ್ನಿಂದ ಬ್ಯಾಂಕರ್ ಅಭಿಯಾನ ಸಭೆ
Team Udayavani, Aug 19, 2019, 3:02 AM IST
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಣಕಾಸು ಸಚಿವಾಲಯ ನೀಡಿರುವ ನಿರ್ದೇಶನದ ಮೇರೆಗೆ ಇಂಡಿಯನ್ ಬ್ಯಾಂಕ್, ಬ್ಯಾಂಕರ್ಗಳ ಅಭಿಪ್ರಾಯ ಸಂಗ್ರಹ ಅಭಿಯಾನ ಸಭೆ ಆಯೋಜಿಸಿತ್ತು.
ರಹೇಜಾ ಟವರ್ಸ್ನ ವೃತ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಂಡಿಯನ್ ಬ್ಯಾಂಕಿನ ಮಹಾಪ್ರಬಂಧಕ (ಕ್ರೆಡಿಟ್ ಮಾನಿಟರಿಂಗ್) ಎಸ್.ಚೇಳಿಯನ್ ಮಾತನಾಡಿ ಮುಂಬರುವ ವರ್ಷಗಳಲ್ಲಿ ದೇಶೀಯ ಆರ್ಥಿಕತೆ ಬೆಳೆವಣಿಗೆಯ ಹಾದಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಸಕ್ರಿಯ ಭಾಗವಹಿಸಬೇಕು ಎನ್ನುವುದು ಈ ಅಭಿಪ್ರಾಯ ಸಂಗ್ರಹ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ದೇಶದ ಆರ್ಥಿಕತೆ ಗಾತ್ರ 5 ಟ್ರಿಲಿಯನ್ ಡಾಲರ್ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಬ್ಯಾಂಕ್ ಶಾಖೆಗಳ ಮಟ್ಟದಲ್ಲಿ ಹೊಸ ಆಲೋಚನೆಗಳನ್ನು ಕ್ರೋಡೀಕರಣಗೊಳಿಸುವ ಪ್ರಕ್ರಿಯೆಗೆ ದೇಶಾದ್ಯಂತ ಚಾಲನೆ ದೊರೆಯಲಿದೆ. ನಮ್ಮ ಬ್ಯಾಂಕಿನ ಉನ್ನತ ಆಡಳಿತ ಶಾಖಾ ಪ್ರಬಂಧಕರ ಜೊತೆಗೂಡಿ ದೇಶದ ವಿವಿಧ ಭಾಗಗಳಲ್ಲಿ ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ.
ಅದರ ಪ್ರಕಾರ ಬ್ಯಾಂಕಿನ ಅಭಿವೃದ್ಧಿ, ಗ್ರಾಹಕರ ಅಗತ್ಯಗಳಿಗೆ ಹಾಗೂ ಬ್ಯಾಂಕಿಂಗ್ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವ ಕುರಿತು ಚಿಂತನ, ಮಂಥನ ನಡೆಸಿ ಎಂಎಸ್ಎಂಇ, ಕೃಷಿ, ಸ್ಟಾರ್ಟ್ಅಪ್, ಮುದ್ರಾ ಸಾಲ, 59 ನಿಮಿಷದಲ್ಲಿ ಪಿಎಸ್ಬಿ ಸಾಲ, ಸ್ವಸಹಾಯ ಸಂಘ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ