ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!


Team Udayavani, Feb 28, 2021, 11:46 AM IST

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ಬೆಂಗಳೂರು: ಸಾಮಾನ್ಯವಾಗಿ ವಾಹನಗಳ ನೋಂದಣಿ ಸಂಖ್ಯೆಯ ಫ್ಯಾನ್ಸಿ ನಂಬರ್‌ಗಳು ಲಕ್ಷಾಂತರ ರೂ.ಗೆ ಬಿಕರಿಯಾಗುವುದು ಸಹಜ. ಅದೇ ಇತ್ತೀಚಿನ ದಿನಗಳಲ್ಲಿ ಸಾರಿಗೆ ಇಲಾಖೆಗೆ ಲಕ್ಷಾಂತರ ರೂ. ಆದಾಯ ತಂದುಕೊಡುತ್ತಿದೆ. ಈಗ ಇದರ ಮುಂದುವರಿದ ಭಾಗವಾಗಿ ಬಿಡಿಎನಲ್ಲಿಯ ನಿವೇಶನಗಳ ಫ್ಯಾನ್ಸಿ ಸಂಖ್ಯೆಗೂ ಬೇಡಿಕೆ ಬರುತ್ತಿದ್ದು, ಹರಾಜಿನಲ್ಲಿ ಕೋಟಿಗಟ್ಟಲೆ ಸುರಿಯುತ್ತಿರುವುದು ಕಂಡುಬರುತ್ತಿದೆ.

ಹೌದು, ಈಚೆಗೆ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ 6ನೇ ಹಂತದ ಇ-ಹರಾಜಿನಲ್ಲಿ ನಿವೇಶನವೊಂದು ದಾಖಲೆ ಮೊತ್ತ 15,500 ರೂ.ಗೆ ಚದರಡಿ ಮಾರಾಟ ಆಗಿದೆ. ಇಷ್ಟೊಂದು ಗರಿಷ್ಠ ಮೊತ್ತದ ಹರಾಜಿನ ಹಿಂದಿನ ಗುಟ್ಟು ಆ ನಿವೇಶನದ ಫ್ಯಾನ್ಸಿ ನಂಬರ್‌ “1000′! ಸರ್‌ ಎಂ.ವಿಶ್ವೇಶ್ವರಯ್ಯಬಡಾವಣೆಯ 3ನೇ ಬ್ಲಾಕ್‌ನಲ್ಲಿ ಬರುವ “1000’ನೇ ನಂಬರ್‌ನ ನಿವೇಶನದ ಒಟ್ಟು ವಿಸ್ತೀರ್ಣ ಸುಮಾರು 78 ಚದರ ಮೀಟರ್‌ (ಸುಮಾರು 840 ಚದರಡಿ) ಆಗಿದ್ದು, ಪೂರ್ವ-ಉತ್ತರದ ಈ ನಿವೇಶನದ ವಾಸ್ತು ಕೂಡ ಉತ್ತಮವಾಗಿದೆ ಅಂತೆ. ಇದೇ ಕಾರಣಕ್ಕೆ ಖರೀದಿಗಾಗಿ ಗರಿಷ್ಠ ಸಂಖ್ಯೆಯಲ್ಲಿ ಬಿಡ್‌ದಾರರು ಮುಗಿಬಿದ್ದಿದ್ದರು. ಲಕ್ಷದವರೆಗೂ ಅವರೆಲ್ಲಾ ಹರಾಜು ಕೂಗಿದ್ದಾರೆ. ಆದರೆ, ಅಂತಿಮವಾಗಿ ಭೂಪನೊಬ್ಬ ಚದರ ಮೀಟರ್‌ಗೆ 1.67 ಲಕ್ಷ ರೂ. ಸುರಿಯಲು ಮುಂದೆಬಂದಿದ್ದಾರೆ.

ಗರಿಷ್ಠ ಬಿಡ್‌ದಾರರು ಭಾಗಿ; ಗರಿಷ್ಠ ಮೊತ್ತಕ್ಕೆ ಬಿಕರಿ ಬಿಡಿಎ ನಡೆಸುವ ಹರಾಜಿನಲ್ಲಿ ಪ್ರತಿ ನಿವೇಶನಕ್ಕೆ ಅಬ್ಬಬ್ಟಾ ಎಂದರೆ 20ರಿಂದ 30 ಜನ ಭಾಗವಹಿಸುತ್ತಾರೆ. ಆಯಾ ಪ್ರದೇಶಗಳಲ್ಲಿನ ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಹರಾಜು ಕೂಗುತ್ತಾರೆ. ಅವು ಒಂದರಿಂದಒಂದೂವರೆಪಟ್ಟು ಹೆಚ್ಚು ದರಕ್ಕೆ ಬಿಕರಿ ಆಗುತ್ತವೆ. ಆದರೆ, ವಿಶ್ವೇಶ್ವರಯ್ಯ ಬಡಾವಣೆಯ 1000ನೇ ನಿವೇಶನ ಖರೀದಿಗೆ 92 ಜನ ಭಾಗವಹಿಸಿದ್ದರು. ಅದರ ಮೂಲ ಬೆಲೆ ಇದ್ದದ್ದು 30.42 ಲಕ್ಷ ರೂ. ಮಾರಾಟಆಗಿದ್ದು 1.30 ಕೋಟಿ ರೂ.ಗಳಿಗೆ. ಕೆಲವರು ಒಂದು ಕೋಟಿವರೆಗೂ ಕೂಗಿ ಹಿಂದೆಸರಿದರು. ಚೆಲುವರಾಜು ಎಂಬುವರು ಗರಿಷ್ಠ ಬಿಡ್‌ಗೆ ತಮ್ಮದಾಗಿಸಿಕೊಂಡರು.

“ನಿವೇಶನ ಅಥವಾ ಮನೆ ಖರೀದಿ ಮಧ್ಯಮ ವರ್ಗದ ಪ್ರತಿ ವ್ಯಕ್ತಿಯ ಕನಸು. ಅದು ಉಳಿದವರಿಗಿಂತ ಭಿನ್ನ ಮತ್ತು ಯಾವುದೇ ವಾಸ್ತು ದೋಷ ಇರಬಾರದು ಎಂಬ ನಿರೀಕ್ಷೆ ಇದ್ದೇಇರುತ್ತದೆ. ಹಾಗಾಗಿ, ಖರೀದಿಗೂ ಮುನ್ನ ಬಹುತೇಕ ಎಲ್ಲರೂ ವಾಸ್ತು ಕೇಳುವುದು ಸಹಜ. ಅದೇರೀತಿ, ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯ 3ನೇಬ್ಲಾಕ್‌ನ ನಿವೇಶನದ ಹರಾಜಿನಲ್ಲಿ ಭಾಗವಹಿಸುವ ಮುನ್ನ ನಾವೂ ಪೂರ್ವಾಪರ ತಿಳಿದುಕೊಂಡುಭಾಗವಹಿಸಿದ್ದೆವು. ನಿವೇಶನದ ಸಂಖ್ಯೆ ಫ್ಯಾನ್ಸಿ ನಂಬರ್‌ಆಗಿತ್ತು. ಜತೆಗೆ ವಾಸ್ತು ಕೂಡ ಹೇಳಿಮಾಡಿಸಿದಂತಿತ್ತು.ಆದರೆ, ಭಾರಿ ಬೇಡಿಕೆ ಬಂದಿದ್ದರಿಂದ ಹಿಂದೆಸರಿಯಬೇಕಾಯಿತು’ ಎಂದು ಚದರ ಮೀಟರ್‌ಗೆ ಲಕ್ಷ ರೂ. ವರೆಗೂ ಹರಾಜು ಕೂಗಿದ ಬಿಡ್‌ದಾರರೊಬ್ಬರು ತಿಳಿಸಿದರು.

“ಯೋಚನೆ ಮಾಡ್ತೀನಿ’: ಚೆಲುವರಾಜು :

ಗರಿಷ್ಠ ಮೊತ್ತ ಕೂಗಿದ ಚೆಲುವರಾಜು, “ನಿವೇಶನ ಇಷ್ಟ ಆಯಿತು. ಹಾಗಾಗಿ, ಪಡೆಯಲೇಬೇಕು ಎಂಬ ಪ್ರತಿಷ್ಠೆಯಿಂದ ಕೂಗಿದೆ. ಆದರೆ, ಈಗ ಆ ಮೊತ್ತ ಭರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಏನು ಮಾಡಬೇಕು ಎನ್ನುವುದೂ ಗೊತ್ತಾಗುತ್ತಿಲ್ಲ. ಈ ಖರೀದಿಯಲ್ಲಿ ಮುಂದುವರಿಯುವ ಬಗ್ಗೆ ಪುನರ್‌ ಆಲೋಚನೆ ಮಾಡುತ್ತಿದ್ದೇನೆ’ ಎಂದು “ಉದಯವಾಣಿ’ಗೆ ತಿಳಿಸಿದರು. “ಇ-ಹರಾಜು’ ಪ್ರಕ್ರಿಯೆ ಶುರುವಾದ ನಂತರ

ಫ್ಯಾನ್ಸಿ ನಂಬರ್‌ನ ನಿವೇಶನಗಳಿಗೆ ಬೇಡಿಕೆ ಬರುತ್ತಿರುವುದು ನಿಜ. ಕೆಲವೊಮ್ಮೆ ವಾಸ್ತು ಕೂಡ ಜನ ನೋಡುತ್ತಾರೆ. ಇವೆರಡೂ ಹೊಂದುವುದರ ಜತೆಗೆ “ಲೇಕ್‌ ವೀವ್‌’, ಸುತ್ತಲಿನ ಅಭಿವೃದ್ಧಿ, ನಗರಕ್ಕೆ ಕನೆಕ್ಟಿವಿಟಿ ಇಂತಹ ಅಂಶಗಳನ್ನೂ ಪರಿಗಣಿಸುತ್ತಾರೆ. ಹಾಗಾಗಿ, ಗರಿಷ್ಠ ಮೊತ್ತದ ಬಿಡ್‌ಗೆ ಈ ರೀತಿಯ ಅಂಶಗಳು ಕೂಡ ಕಾರಣವಾಗಬಹುದು ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.