ಅನ್‌ಲಾಕ್‌ನಿಂದ ರಾಜಧಾನಿಯಲ್ಲೀಗ ಲವಲವಿಕ


Team Udayavani, Jul 6, 2021, 10:20 AM IST

Untitled-1

ಬೆಂಗಳೂರು: ಕೋವಿಡ್‌ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ಬಹುತೇಕ ಹೋಟೆಲ್‌ಗ‌ಳಲ್ಲಿ ಜನರು ಕುಳಿತು ಉಪಹಾರ ಸೇವಿದರು. ಗ್ರಾಹಕರಿಲ್ಲದೆ ಸೊರಗಿದ್ದ ಚಿಕ್ಕಪೇಟೆ ಬಟ್ಟೆ ಅಂಗಡಿಗಳ ಗಲ್ಲಿಗಳಲ್ಲೂ ಜನರಿದ್ದರು. ಗಾರ್ಮೆಂಟ್‌, ಕೈಗಾರಿಕೆಗಳು ಅಧಿಕ ಸಂಖ್ಯೆಯ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಿದವು.ಹೀಗಾಗಿ ಎಲ್ಲ ಕಡೆಗಳಲ್ಲಿ ಲವಲವಿಕೆಯ ವಾತಾವರಣ ಕಂಡು ಬಂತು.

ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದ್ದ ಜನರು ಅನ್‌ಲಾಕ್‌ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತರ,ಕುಟುಂಬದವರ ಜತೆಗೆ ಹೋಟೆಲ್‌ಗ‌ಳಿಗೆ ಭೇಟಿ ನೀಡಿ ಕಾಫಿ, ಟೀ ಸವಿದರು. ಸುಮಾರು ಎರಡು ತಿಂಗಳು ಕಾಲ ಮನೆಯಲ್ಲೇ ಇದ್ದವರಿಗೆ ನಿರ್ಬಂಧ ಸಡಿಲಿಕೆ ಸ್ವಾತಂತ್ರ್ಯ ಸಿಕ್ಕಂತಾಗಿತ್ತು.

ಕೊರೊನಾ ಮಾರ್ಗ ಸೂಚಿಯಂತೆ ಹೋಟೆಲ್‌ಗ‌ಳು ಕಾರ್ಯನಿರ್ವಹಿಸಿದ್ದು, ಮಾಸ್ಕ್ಯಿಲ್ಲದೆ ಬರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಮಾಲೀಕರ ಸಂಘದ ಪಿ.ಸಿ. ರಾವ್‌,ಈಹಿಂದೆ ಜನತಾಕರ್ಫ್ಯೂವೇಳೆಪಾರ್ಸಲ್‌ ಸೇವೆನೀಡಿದ್ದ ಗ್ರಾಹಕರಿಗೆ ನೆರವಾಗಿದ್ದ ಹೋಟೆಲ್‌ಗ‌ಳು ಇದೀಗ ಪೂರ್ಣ ಪ್ರಮಾಣದ ಆತಿಥ್ಯ ನೀಡುತ್ತಿವೆ. ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ಚಿಕ್ಕಪೇಟೆಯಲ್ಲಿ ಜವಳಿ ವಹಿವಾಟು: ಹೋಲ್‌ಸೇಲ್‌ ಜವಳಿ ವ್ಯಾಪಾರಕ್ಕೆ ಹೆಸರಾಗಿರುವ ಚಿಕ್ಕಪೇಟೆಯಲ್ಲಿ ಕೋವಿಡ್‌ ಮಾರ್ಗ ಸೂಚಿಯಂತೆ ವ್ಯಾಪಾರ ಪ್ರಕ್ರಿಯೆ ಆರಂಭವಾಗಿದೆ.ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳಭಾಗಗಳಿಂದ ಬಟ್ಟೆ ಖರೀದಿ ದಾದರರು ಚಿಕ್ಕಪೇಟೆಯಿಂದಲೇ ಖರೀದಿ ಆರಂಭಿಸುತ್ತಾರೆ.

ಆದರೆ ಈಗ ಕೇರಳ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಇನ್ನೂ ಲಾಕ್‌ಡೌನ್‌ ತೆರವಾಗಿಲ್ಲ.ಆ ಹಿನ್ನೆಲೆಯಲ್ಲಿ ಇನ್ನೂ ಕೆಲವು ತಿಂಗಳು ಕಾಯುವುದು ಅನಿವಾರ್ಯ ಎಂದು ಬೆಂಗಳೂರು ಹೋಲ್‌ ಸೇಲ್‌ ಕ್ಲಾತ್‌ ಮರ್ಚೆಂಟ್‌ ಅಸೋಸಿ ಯೇಷನ್‌ ಅಧ್ಯಕ್ಷ ಪ್ರಕಾಶ ಪೀರ್ಗಲ್‌ ಹೇಳಿದ್ದಾರೆ.

ಕಾರ್ಮಿಕರು ವಾಪಸ್‌ ಬರಬೇಕಾಗಿದೆ: ಈ ಹಿಂದೆ ಸರ್ಕಾರ ಕೈಗಾರಿಕೆಗಳಲ್ಲಿ ಶೇ.50 ಕಾರ್ಮಿಕರು ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಶೇ.45ಕಾರ್ಮಿಕರುಕೆಲಸಕ್ಕೆ ಹಾಜರಾಗಿದ್ದರು. ಈಗ ಸಂಪೂರ್ಣ ವಿನಾಯ್ತಿ ನೀಡಿರುವ ಹಿನ್ನೆಲೆಯಲ್ಲಿಊರಿಗೆಹೋಗಿರುವಕಾರ್ಮಿಕರುಮತ್ತಷ್ಟು ಸಂಖ್ಯೆ ಯಲ್ಲಿ ಬರಬೇಕಾಗಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಸುಂದರ್‌ ಹೇಳಿದ್ದಾರೆ. ಎಂಜಿನಿಯರ್‌, ಆಟೋಮೊಬೈಲ್‌, ಗಾರ್ಮೆಂಟ್‌ನಲ್ಲಿ ಕಾರ್ಯನಿರ್ವಹಣೆ ಆರಂಭವಾಗಿದೆ. 3ನೇ ಅಲೆಯ ಭಯಕೈಗಾರಿಕಾ ವಲಯವನ್ನುಕಾಡುತ್ತಿದೆ.

ಅಲ್ಲದೆ ಆಭರಣ ಮಳಿಗೆಗಳು, ಪ್ಯಾನ್ಸಿ ಸ್ಟೋರ್‌ಗಳು, ಎಂಪೋರಿಯಂಗಳು, ಶೋ ರೂಂಗಳು,ಕಂಪ್ಯೂಟರ್‌ ಸೇರಿದಂತೆ ಉಪಕರಣ ಮಳಿಗೆಗಳು, ಪುಸ್ತಕದ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳು ಕೋವಿಡ್‌ ಮಾರ್ಗಸೂಚಿಯೊಂದಿಗೆಕಾರ್ಯಚಟುವಟಿಕೆ ಆರಂಭಿಸಿದ್ದು ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗಳ ಮುಂದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದು ಕಂಡು ಬಂತು.

 

ದೇಗುಲಗಳಲ್ಲಿ ದರ್ಶನಾವಕಾಶ:

ಕೋವಿಡ್‌ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ನಗರದ ಹಲವು ದೇವಾಲಯ, ಪ್ರಾರ್ಥನಾಮಂದಿರ ಮತ್ತು ಚರ್ಚೆಗಳಲ್ಲಿ ಭಕ್ತರು

ಕೋವಿಡ್‌ ಮಾರ್ಗ ಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು. ಕೋವಿಡ್‌ನಿರ್ಬಂಧದ ಹಿನ್ನೆಲೆಯಲ್ಲಿ ಬಂದ್‌ಆಗಿದ್ದ ಬನಶಂಕರಿ ದೇವಾಲಯ, ಮಲ್ಲೇಶ್ವರದ ನರಸಿಂಹ ಸ್ವಾಮಿದೇವಾಲಯ ಮತ್ತು ತಿರುಮಲ ಗಿರಿ ದೇವಾಲಯ ಸೇರಿದಂತೆ ನಗರದ ದೇಗುಲಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಾಜಿನಗರ ಸೆಂಟ್‌ ಮೇರಿ ಚರ್ಚ್‌ನಲ್ಲಿ ಭಕ್ತರು ಪಾರ್ಥನೆ ನಡೆಸಿದರು. ಜತೆಗೆಕೆ.ಆರ್‌.ಮಾರುಕಟ್ಟೆಯ ಜಾಮೀಯಾ ಮಸೀದಿಯಲ್ಲಿ ಹಲವು ಸಂಖ್ಯೆಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸಿದರು.

ಹಲವುಕೈಗಾರಿಕೆಗಳುಕಾರ್ಯಾರಂಭ ಮಾಡಿವೆ. ಶೇ.60 ರಷ್ಟು ಮಾತ್ರ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ. ಇನ್ನೂ ಶೇ.40ರಷ್ಟು ಕಾರ್ಮಿಕರು ಕೆಲಸಕ್ಕೆ ಬರಬೇಕಾಗಿದೆ.ಕೆ.ಬಿ.ಅರಸಪ್ಪ, ಕಾಸಿಯಾ ಅಧ್ಯಕ್ಷ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.