ಬಹು ಅಂಗಾಂಶ ಗಟ್ಟಿ ರೋಗ ಜಾಗೃತಿಗೆ ಬೈಕ್ ರ್ಯಾಲಿ
Team Udayavani, Feb 3, 2019, 6:31 AM IST
ಬೆಂಗಳೂರು: ಬಹು ಅಂಗಾಂಶ ಗಟ್ಟಿಯಾಗುವ (ಮಲ್ಟಿಪಲ್ ಸ್ಕೆರಾಸಿಸ್) ರೋಗ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಲ್ಟಿಪಲ್ ಸ್ಕೆರಾಸಿಸ್ ಸೊಸೈಟಿ ಆಫ್ ಇಂಡಿಯ (ಎಂಎಸ್ಎಸ್ಐ) ಹಾಗೂ ಒಮೇಗಾ ಹೆಲ್ತ್ಕೇರ್ ವತಿಯಿಂದ ನಗರದಲ್ಲಿ ಶನಿವಾರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 8 ಗಂಟೆಗೆ ಎನ್ಎಎಲ್ ಎಂಡ್ ಟನೆಲ್ ರಸ್ತೆಯ ಒಮೇಗಾ ಹೆಲ್ತ್ಕೇರ್ ಕಚೇರಿಯ ಬಳಿ ಆರಂಭವಾದ ಈ ರ್ಯಾಲಿಗೆ ರಾಜ್ಯ ಅಂಗವಿಕಲರ ನಿರ್ದೇಶನಾಲಯದ ಆಯುಕ್ತರಾದ ವಿ.ಎಸ್.ಬಸವರಾಜು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರೋಗಗಳು ಮತ್ತು ಅವುಗಳ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಸದಾ ನೆರವು ನೀಡುತ್ತದೆ.
ನಿರ್ದಿಷ್ಟ ವೈಕಲ್ಯ ಹೊಂದಿರುವ ಜನರಿಗೆ ಬೆಂಬಲ ನೀಡುವುದು ನಮಗೆ ಮುಖ್ಯಗುರಿಯಾಗಿದೆ. ಇತ್ತೀಚೆಗೆ ಹೆಚ್ಚಾಗಿರುವ ಬಹು ಅಂಗಾಂಶ ಗಟ್ಟಿಯಾಗುವ ರೋಗ ಬಗ್ಗೆ ಪ್ರಚಾರ ನಡೆಸಲು ಮುಂದಾಗಿರುವ ಎಂಎಸ್ಎಸ್ಐ ಹಾಗೂ ಒಮೇಗಾ ಹೆಲ್ತ್ಕೇರ್ ಸಂಸ್ಥೆಗೆ ನಮ್ಮ ಬೆಂಬಲವಿದೆ. ಸರ್ಕಾರದ ಇಲಾಖೆಗಳು, ಎನ್ಜಿಒಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಹೆಚ್ಚಿನ ಬದಲಾವಣೆ ತರಬಹುದು ಎಂದರು.
ಎಂಎಸ್ಎಸ್ಐ ಬೆಂಗಳೂರು ಚಾಪ್ಟರ್ನ ಗೌರವ ಕಾರ್ಯದರ್ಶಿ ಪಂಕಜ್ ಗುಪ್ತಾ ಮಾತನಾಡಿ, ನರಗಳು ದೀರ್ಘಕಾಲದಲ್ಲಿ ಹಂತ ಹಂತವಾಗಿ ಕ್ಷೀಣಿಸುವಂತಹ ಸ್ಥಿತಿಯೇ ಈ ಬಹು ಅಂಗಾಂಶ ಗಟ್ಟಿಯಾಗುವ ರೋಗ (ಎಂಎಸ್). ಇದು ದೇಹದ ಕೇಂದ್ರ ನರ ವ್ಯವಸ್ಥೆಯ ಬೇರೆ ಬೇರೆ ಭಾಗಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. 20 ರಿಂದ 40 ವರ್ಷ ವಯೋಮಿತಿಯವರನ್ನು ಸಾಮಾನ್ಯವಾಗಿ ಕಾಡುತ್ತದೆ.
ದೈನಂದಿನ ಸರಳ ಚಟುವಟಿಕೆಗಳನ್ನು ಕೂಡ ಈ ರೋಗಿಗೆ ಮಾಡಲು ಸಾಧ್ಯವಾಗುವುದಿಲ್ಲ. ದೇಹದ ಹಲವಾರು ಭಾಗಗಳ ಮೇಲೆ ಇದು ಪರಿಣಾಮ ಉಂಟು ಮಾಡುತ್ತದೆ. ರೋಗಿಯ ಜೀವನದ ಗುಣಮಟ್ಟದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ ಎಂದರು.
ಇಂದು ಜಗತ್ತಿನಲ್ಲಿ ಸುಮಾರು 2.3 ದಶಲಕ್ಷ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಬಹು ಅಂಗಾಂಶ ಗಟ್ಟಿಯಾಗುವ ರೋಗದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಸುಮಾರು 1,80,000 ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು. ರ್ಯಾಲಿಯಲ್ಲಿ 200 ಬೈಕ್ ಸವಾರರು ಭಾಗವಹಿಸಿದ್ದು, ಹೊಸೂರು ರಸ್ತೆಯ ನಿಮ್ಹಾನ್ಸ್ ಆಸ್ಪತ್ರೆ ಸಮೀಪ ರ್ಯಾಲಿ ಮುಕ್ತಾಯಗೊಂಡಿತು.
ಒಮೇಗಾ ಹೆಲ್ತ್ಕೇರ್ ಮ್ಯಾನೇಜ್ಮೆಂಟ್ ಸರ್ವೀಸಸ್ ಪ್ರ„ವೇಟ್ ಲಿ. ಹಣಕಾಸು ವಿಭಾಗದ ಉಪಾಧ್ಯಕ್ಷರು ಪುರುಷೋತ್ತಮ ರೆಡ್ಡಿ, ಈ ರೋಗದಿಂದ ಬಳುತ್ತಿರುವವರು, ಒಮೇಗಾ ಹೆಲ್ತ್ಕೇರ್ನ ಉದ್ಯೋಗಿಗಳು, ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Nandini Ragi Ambali: ಮಾರುಕಟ್ಟೆಗೆ ಬಂತು ನಂದಿನಿ ರಾಗಿ ಅಂಬಲಿ: ಬೆಲೆ 10 ರೂ.!
ಕಾರು ಡಿಕ್ಕಿ: ಓಮ್ನಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ, 7 ಜನರಿಗೆ ಗಾಯ
Arrested: ನಶೆಯಲ್ಲಿ ನಿಂದನೆ; ಸ್ನೇಹಿತನ ಹತ್ಯೆಗೈದಿದ್ದ ಐವರ ಬಂಧನ
MUST WATCH
ಹೊಸ ಸೇರ್ಪಡೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್