ಬಿಜೆಪಿ, ಆರ್ಎಸ್ಎಸ್ ನಿಷೇಧಿಸಬೇಕು: ದಿನೇಶ್
Team Udayavani, Jan 11, 2018, 7:00 AM IST
ಬೆಂಗಳೂರು: ಮೊದಲು ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ನಿಷೇಧ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮೂಡಿಗೆರೆ ಯುವತಿ ಧನ್ಯಶ್ರೀ ಸಾವಿನ ಪ್ರಕರಣ ಖಂಡಿಸಿ ಎನ್ಎಸ್ಯುಐ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರು ದ್ವಿಮುಖ ನೀತಿ ಹೊಂದಿದವರು.
ದೀಪಕ್ ರಾವ್, ಪ್ರವೀಣ್ ಪೂಜಾರಿ ಹತ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ ಧನ್ಯಶ್ರೀ ಆತ್ಮಹತ್ಯೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಧನ್ಯಶ್ರೀ ಹಿಂದೂ ಅಲ್ಲವೇ ಎಂದು ಪ್ರಶ್ನಿಸಿದರು. ಧನ್ಯಶ್ರೀ ಆತ್ಮಹತ್ಯೆ ಹಿಂದೆ ಭಜರಂಗದಳದ
ಮುಖಂಡ ಇದ್ದಾನೆ. ಹೀಗಾಗಿ ಬಿಜೆಪಿಯವರು ಮಾತನಾಡುತ್ತಿಲ್ಲ. ದೀಪಕ್ ಬಗ್ಗೆ ಒಂದು ಧನ್ಯಶ್ರೀ ಬಗ್ಗೆ ಮತ್ತೂಂದು
ಅಭಿಪ್ರಾಯ ಬಿಜೆಪಿಯವರದು. ಇಂತಹ ಮನಸ್ಥಿತಿಯ ಆರೆಸ್ಸೆಸ್, ಬಿಜೆಪಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು. ಎನ್ಎಸ್ಯುಐ ರಾಜ್ಯಾಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು