ಬಿಜೆಪಿ ಮಾಡುತ್ತಿರುವುದು ಅಸಹ್ಯದ ಕೆಲಸ: ಎಚ್ಡಿಡಿ
Team Udayavani, Jan 16, 2019, 3:20 AM IST
ಬೆಂಗಳೂರು: ರಾಷ್ಟ್ರೀಯ ಪಕ್ಷವೊಂದು ಹೀಗೆ ಮಾಡುವುದು ಮರ್ಯಾದೆ ತರುತ್ತಾ? ಮರ್ಯಾದೆ ಏನಾದ್ರೂ ಅವರಿಗೆ ಇದೆಯಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಮಾಡುತ್ತಿರುವುದು ಅಸಹ್ಯದ ಕೆಲಸ. ಐವತ್ತು ಕೋಟಿ ರೂ., ನೂರು ಕೋಟಿ ರೂ., ಹಣದ ಆಮಿಷದ ಬಗ್ಗೆ ಮಾತನಾಡುವುದು ಮರ್ಯಾದೆ ತರುತ್ತಾ? ಯಾವ ರೀತಿಯ ರಾಜಕೀಯ ಇದು. ದಿನವೂ ಭಾಷಣ ಮಾಡುವ ಮೋದಿಯವರು ತನ್ನ ಪಕ್ಷ ಹೀಗೆ ಮಾಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆಂದು ಪ್ರಶ್ನಿಸಿದರು.
ನಾನೇನೂ ಭ್ರಮಾ ಲೋಕದಲ್ಲಿಲ್ಲ. ನಿಮಗೂ(ಮಾಧ್ಯಮ) ಯಡಿಯೂರಪ್ಪ ಅವರಿಗೂ ಭ್ರಮೆ ಇದೆ. ಸರ್ಕಾರಕ್ಕೆ ಏನೂ ತೊಂದರೆ ಇಲ್ಲ, ದೇವರ ಚಿತ್ತ ಇದ್ದಂತಾಗುತ್ತದೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ಸುದ್ದಿ ನೋಡಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಂದಿದ್ದಾರೆ. ಆತಂಕದಿಂದ ಬಂದಿರಬಹುದು. ಆದರೆ, ನಾವು ಯಾವುದೇ ಶಾಸಕರ ಸಭೆ ಕರೆದಿಲ್ಲ, ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಇದ್ದಾರೆ, ಸಂಕ್ರಾಂತಿ ಆಚರಿಸುತ್ತಿದ್ದಾರೆ ಎಂದರು.
ಜ.17 ರಂದು ಅಲ್ಪಸಂಖ್ಯಾತರ ಸಮಾವೇಶ ಮಾಡುತ್ತಿದ್ದೇವೆ. ಎಲ್ಲ ಶಾಸಕರು ಬರಬೇಕು ಎಂದು ಹೇಳಿದ್ದೇನೆ. ಈ ಬೆಳವಣಿಗೆಗಳಿಂದ ಯಾರೂ ವಿಚಲಿತರಾಗಬೇಡಿ, ನಾವು ನಿಮ್ಮ ಜತೆ ಇದ್ದೇವೆ ಎಂದು ಧೈರ್ಯ ತುಂಬುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!