ಇಂದಿರಾ ಐವಿಎಫ್ನಿಂದ ರಕ್ತದಾನ ಶಿಬಿರ
Team Udayavani, Jul 7, 2019, 3:02 AM IST
ಬೆಂಗಳೂರು: ವಿಶ್ವ ವೈದ್ಯರ ದಿನ ಅಂಗವಾಗಿ ಇಂದಿರಾ ಐವಿಎಫ್ ಆಸ್ಪತ್ರೆ ಸಮೂಹದ ಜೆಪಿ ನಗರ ಶಾಖೆ ಜಯನಗರ ವಾಲಂಟರಿ ಬ್ಲಿಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು.
ಜು.1ರ ವೈದ್ಯರ ದಿನದಂದು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ವೈದ್ಯರು, ಶುಶ್ರೂಷಾ ಸಿಬ್ಬಂದಿ, ಇತರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಇಂದಿರಾ ಐವಿಎಫ್ ಆಸ್ಪತ್ರೆ ಜೆಪಿ ನಗರ ಶಾಖೆಯ ಸ್ತ್ರೀರೋಗ ತಜ್ಞ ಮತ್ತು ಐವಿಎಫ್ ತಜ್ಞ ಡಾ. ವಿನೋದ್ ಕುಮಾರ್ ಅವರು ಮಾತನಾಡಿ, ರಕ್ತದಾನ ಮಹಾದಾನ. ದೇಶದಲ್ಲಿ ರಕ್ತದ ಕೊರತೆ ಇದೆ ಮತ್ತು ಜನರು ರಕ್ತದಾನ ಮಾಡುವುದರೊಂದಿಗೆ ಅಗತ್ಯವಿರುವ ರೋಗಿಗಳ ಜೀವ ಉಳಿಸಬಹುದು ಎಂದರು.
ಇಂತಹ ಮಹತ್ಕಾರ್ಯದಲ್ಲಿ ನಮ್ಮ ಇಂದಿರಾ ಐವಿಎಫ್ ಆಸ್ಪತ್ರೆ ತೊಡಗಿಸಿಕೊಂಡಿದ್ದು, ಕಾಲಕಾಲಕ್ಕೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದೆ. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ರಕ್ತದಾನಿಗಳೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.