ನೆರೆ ಸಂತ್ರಸ್ತರ ಬಾಳಲ್ಲಿ ಬೆಳಕು ತನ್ನಿ


Team Udayavani, Oct 25, 2019, 11:53 AM IST

bng-tdy-3

ಬೆಂಗಳೂರು: ನೀವೂ ಪಟಾಕಿ ಹೊಡೆಯುವುದರಿಂದ ಆಕಸ್ಮಿಕವಾಗಿ ಮತ್ತೂಬ್ಬರ ಜೀವನವೇ ಕತ್ತಲಾಗಬಹುದು. ಆದರೆ, ನೀವು ಮನಸ್ಸು ಮಾಡಿದರೆ ಕೆಲವರ ಜೀವನಕ್ಕೆ ಬೆಳಕಾಗಬಹುದು. ಇದಕ್ಕಾಗಿ ನೀವು ಮಾಡಬೇಕಾಗಿದ್ದಿಷ್ಟೇ ಒಂದಿಷ್ಟು ಮಾನವೀಯ ಆಲೋಚನೆಗಳ ಮೂಲಕ ಹಬ್ಬದ ಆಚರಣೆಗೆ ಆದ್ಯತೆ ನೀಡಬೇಕು.

ದೀಪಾವಳಿ ಎಂದರೆ ಬೆಳಕಿನ ಹಬ್ಬ. ನೆರೆ ಸಂತ್ರಸ್ತರಿಗೆ ನೆರವಾಗುವ ಹಾಗೂ ಕುಂಬಾರರ ಬದುಕಿಗೆ ಬೆಳಕಾಗುವಂತಹ ಮಾನವೀಯ, ಮಣ್ಣಿನ ಹಣತೆ ಬಳಕೆಯ ಮೂಲಕ ದೀಪಾವಳಿ ಆಚರಣೆ ಮಾಡಬಹುದಾಗಿದೆ. ಪಟಾಕಿ ಸುಡುವುದನ್ನು ನಿಯಂತ್ರಿಸ ಬಹುದಾಗಿದೆ.

ನೆರೆ ಸಂತ್ರಸ್ತರಿಗೆ ನೆರವಾಗಿ: ನೆರೆ ಹಾವಳಿಯಿಂದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ 15 ಜಿಲ್ಲೆಗಳು ನೆರೆಯಿಂದ ಸಂಕಷ್ಟ ಎದುರಿಸುತ್ತಿವೆ. ಹಿಂಗಾರು ಮಳೆಗೆ ಹೀಗಾಗಲೇ 13 ಜನ ಸಾವಿಗೀಡಾಗಿದ್ದು, ಅಪಾರ ಮಂದಿ ಸಂತ್ರಸ್ತರಾಗಿದ್ದಾರೆ. ಸದ್ಯ ನೆರೆ ಸಂತ್ರಸ್ತರಿಗೆ ನೆರವು ಬೇಕಿದ್ದು, ಸರ್ಕಾರದ ಜತೆ ಕೈಜೋಡಿಬಹುದು. ಈ ಬಾರಿಯ ದೀಪಾವಳಿ ಪಟಾಕಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಅಳಿಲು ಸೇವೆ ಸಲ್ಲಿಸಬಹುದಾಗಿದೆ. ಕೆಲ ಉತ್ತರ ಕರ್ನಾಟಕದ ಸಂಘ ಸಂಸ್ಥೆಗಳು ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ಸಂಗ್ರಹಿಸುತ್ತಿದ್ದು, ಅವರ ಜತೆ ಕೈಜೋಡಿಸಬಹುದಾಗಿದೆ.

ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ವಿಧಾನಸೌಧ ಶಾಖೆ)

ಖಾತೆ ಸಂಖ್ಯೆ: 37887098605. ಅಥವಾ ಗೂಗಲ್‌ ಪೇನಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಯ ಆಯ್ಕೆ ಈಗಾಲೇ ಇದ್ದು, ಅಲ್ಲಿಯೂ ಸುಲಭವಾಗಿ ಕೈಲಾದಷ್ಟು ಹಣ ಸಂದಾಯ ಮಾಡಬಹುದು.

ಆಡಂಬರ ಬದಿಗಿಟ್ಟು; ಅವರ ಬದುಕು ಕಟ್ಟಲು ಕೈಜೋಡಿಸಿ: ಉತ್ತರ ಕರ್ನಾಟಕ ಮೂಲದ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂದು ತನ್ನೂರಿನವರು ನೆರೆಯಿಂದ ಎಲ್ಲವನ್ನು ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ದೀಪಾವಳಿ ಹಬ್ಬಕ್ಕಿಂತ ದಿನದ ಬದುಕಿನ ಚಿಂತೆಯಿದೆ. ಹೀಗಾಗಿ ರಾಜಧಾನಿಯಲ್ಲಿ ಒಂದಿಷ್ಟು ಆಡಂಬರ ಕಡಿಮೆ ಮಾಡಿ, ನೆರೆ ಸಂತ್ರಸ್ತರ ನೆರವಿಗೆ ಬರಬೇಕಿದೆ. ನೆರೆ ಸಂತ್ರಸ್ತರ ಬಹುಮುಖ್ಯ ಸಮಸ್ಯೆ ಎಂದರೆ ವಸ್ತ್ರ, ಒಳವಸ್ತ್ರಗಳ ಕೊರತೆ. ಅವುಗಳು ಬೇಕೆಂದು ಕೇಳಲು ಪುರುಷರು, ಹೆಚ್ಚಾಗಿ ಮಹಿಳೆಯರು ಮುಜುಗರಪಡುತ್ತಿದ್ದಾರೆ. ಆದರೆ, ಈ ಸಮಸ್ಯೆ ಮನಗಂಡ ಸಂಘ ಸಂಸ್ಥೆಗಳು ಹೊಸ ಒಳವಸ್ತ್ರಗಳನ್ನು ಖರೀದಿಸಿ ಸಂತ್ರಸ್ತರಿಗೆ ನೀಡಬಹುದು. ರಾಜಾಜಿನಗರ ಬಾಷ್ಯಂ ವೃತ್ತದ ಬಳಿಯ ಉತ್ತರ ಕರ್ನಾಟಕದ ಸಂಘ-ಸಂಸ್ಥೆಗಳ ಮಹಾ ಸಂಸ್ಥೆಯು ಪರಿಹಾರ ಸಾಮಗ್ರಿ ಸಂಗ್ರಹಿಸುತ್ತಿದ್ದು, ಇವರ ಜತೆ ಕೈಜೋಡಿಸಬಹುದು.

ನಿಮ್ಹಾನ್ಸ್‌ ದೀಪಾವಳಿ ವಿಶೇಷ ಕಿಟ್‌ : 

ನಿಮ್ಹಾನ್ಸ್‌ನ ಮಾನಸಿಕ ರೋಗಿಗಳ ಪುನರ್ವಸತಿ ಕೇಂದ್ರದ ರೋಗಿಗಳು ಈ ಬಾರಿ ದೀಪಾವಳಿ ಗೆಂದು ವಿಶೇಷ ಉಡುಗೊರೆ ಕಿಟ್‌ ಸಿದ್ಧಪಡಿಸಿ ದ್ದಾರೆ. ಇದರಲ್ಲಿ ಎರಡು ಆಕರ್ಷಕ ದೀಪಗಳು, ಎರಡು ವಿಶೇಷ ರಂಗೋಲಿ ವಿನ್ಯಾಸದ ಮಣೆ ಗಳು, ನಾಲ್ಕು ಬಣ್ಣದ ರಂಗೋಲಿ ಪುಡಿಗಳ ಪೊಟ್ಟಣಗಳಿವೆ. ಇವುಗಳನ್ನು ನಿಮ್ಹಾನ್ಸ್‌ ಆವರಣದ ನಂದಿನಿ ವಿಲ್ಕ್ಬೂ ತ್‌ ಪಕ್ಕದ ಒಪಿಸಿ ಸೇಲ್ಸ್‌ ಕೌಂಟರ್‌ನಲ್ಲಿ
ಮಾರಾಟಕ್ಕಿಡಲಾಗಿದೆ. ಕಿಟ್‌ ಒಂದಕ್ಕೆ 300 ರೂ. ನಿಗದಿ ಪಡೆಸಿದ್ದು, ಮಾರಾಟ ದಿಂದ ಬರುವ ಸಂಪೂರ್ಣ ಹಣವನ್ನು ನಿಮ್ಹಾನ್ಸ್‌ ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕೆ ಬಳಸಿಕೊಳ್ಳಲಿದೆ. ಮಾಹಿತಿಗೆ 080 26995336 ಸಂಪರ್ಕಿಸಬಹುದು.

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬೆಂಗಳೂರು ನಿವಾಸಿಗಳ ನೆರವು ಅಗತ್ಯವಿದೆ. ಈ ಬಾರಿ ಹಬ್ಬದ ಖರ್ಚು ಕಡಿಮೆ ಮಾಡಿ ಆ ಹಣದಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗಬಹುದು. ಆಹಾರ ಪದಾರ್ಥ ಹೊರತುಪಡೆಸಿ ಹೊಸ ಬಟ್ಟೆಗಳು, ದಿನನಿತ್ಯ ಸಾಮಗ್ರಿಗಳನ್ನು ನೀಡಿದರೆ ತಲುಪಿಸುವ ಕೆಲಸ ಮಾಡುತ್ತೇವೆ.
●ಶಿವಕುಮಾರ ಮೇಟಿ, ಅಧ್ಯಕ್ಷರು,ಉತ್ತರ ಕರ್ನಾಟಕದ ಸಂಘ-ಸಂಸ್ಥೆಗಳು

 

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.