ಇಂದಿನಿಂದ ಪಾಪ ಪಾಂಡು ಪ್ರಸಾರ
Team Udayavani, Jul 2, 2018, 11:44 AM IST
ಬೆಂಗಳೂರು: ಕಿರುತೆರೆ ವೀಕ್ಷಕರು ಬಹು ದಿನಗಳಿಂದ ನಿರೀಕ್ಷಿಸುತ್ತಿರುವ “ಪಾಪ ಪಾಂಡು’ ಧಾರಾವಾಹಿ ಮವಾರ
(ಜುಲೈ 2) ರಾತ್ರಿ 10 ಗಂಟೆಗೆ “ಕಲರ್ ಸೂಪರ್’ ಹಿನಿಯಲ್ಲಿ ಪ್ರಸಾರವಾಗಲಿದೆ.
ಧಾರಾವಾಹಿಯನ್ನು ಸಿಹಿಕಹಿ ಚಂದ್ರು ನಿರ್ದೇಶಿಸಿದ್ದು, ಪಾತ್ರವರ್ಗದಲ್ಲಿ ಚಿದಾನಂದ, ಶಾಲಿನಿ, ಅಂಜನ್, ನಂದನ,
ಸೌರಭ್ ಕುಲಕರ್ಣಿ, ಶ್ರುತಿ ಮುಂತಾದವರಿದ್ದಾರೆ. ಧಾರಾವಾಹಿ ಪ್ರಮೋಷನ್ಗೆ ಕಲರ್ಸ್ ಸೂಪರ್ ವಾಹಿನಿ ನಡೆಸಿದ “ಹ್ಯೂಮನ್ ಬ್ಯಾನರ್’ ಪ್ರಚಾರ ವಿಧಾನ ಜನರ ಗಮನ ಸೆಳೆಯಿತು. ಪಾಂಡು ಮುಖವಾಡ ಹಾಕಿಕೊಂಡು, ಬೆನ್ನಲ್ಲಿ “ಪಾಪ ಪಾಂಡು’ ಬ್ಯಾನರ್ ಹೊತ್ತ ಪ್ರಚಾರಕರು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿ, ಜನರ ಗಮನಸೆಳೆದರು.
ನಗರದ ಮಲ್ಲೇಶ್ವರ, ಕತ್ರಿಗುಪ್ಪೆ, ಬನಶಂಕರಿ, ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಬಸವನಗುಡಿ ಮುಂತಾದ ಕಡೆ
ಕಂಡ “ಪಾಂಡು’ ಪ್ರಚಾರಕರು, ಸಾರ್ವಜನಿಕರಿಗೆ ಕರಪತ್ರ ಹಂಚಿದರು. ಈ ವಿನೂತನ ಪ್ರಚಾರ ವಿಧಾನ ಕಳೆದ ಎರಡು ದಿನಗಳಲ್ಲಿ ಲಕ್ಷಾಂತರ ಮಂದಿಯನ್ನು ಆಕರ್ಷಿಸಿದೆ. ಹ್ಯೂ ಮನ್ ಬ್ಯಾನರ್ ಪ್ರಚಾರದ ಕಡೆಯ ದಿನವಾದ ಭಾನುವಾರ, ಸಾರ್ವಜನಿಕರು “ಪಾಪ ಪಾಂಡು’ ಮುಖವಾಡಧಾರಿಗಳ ಜತೆ ಸೆಲ್ಫೀ, ಫೋಟೋ ತೆಗೆಸಿಕೊಂಡದ್ದು ವಿಶೇಷವಾಗಿತ್ತು. ಈ ಹ್ಯೂಮನ್ ಬ್ಯಾನರ್ ಪ್ರಚಾರ ರಾಜ್ಯದ 204 ಭಾಗಗಳಲ್ಲಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ