ಬಿಎಸ್ಪಿ ಎನ್. ಮಹೇಶ್ ರಾಜೀನಾಮೆ ಅಂಗೀಕಾರ
Team Udayavani, Oct 16, 2018, 6:40 AM IST
ಬೆಂಗಳೂರು: ಶಿಕ್ಷಣ ಸಚಿವ ಎನ್.ಮಹೇಶ್ ಅವರ ರಾಜೀನಾಮೆ ಅಂಗೀಕಾರವಾಗಿದೆ. ಸಿಎಂ ಕುಮಾರಸ್ವಾಮಿ, ಮಹೇಶ್ ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲ ವಿ.ಅರ್. ವಾಲಾ ಅವರಿಗೆ ಶಿಫಾರಸು ಮಾಡಿದ್ದರು. ಅದರಂತೆ ಅಂಗೀಕರಿಸಿದ್ದಾರೆ.
ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಹೇಶ್ ರಾಜೀನಾಮೆ ಅಂಗೀಕಾರಕ್ಕೆ ಕಳುಹಿಸಿದ್ದೇನೆ. ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಸೂಚನೆ ಮೇರೆಗೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಬಿಎಸ್ಪಿಯ ಆಂತರಿಕ ತೀರ್ಮಾನ ಹಿನ್ನೆಲೆಯಲ್ಲಿ ಮಹೇಶ್ ರಾಜೀನಾಮೆ ನೀಡಿದ್ದರು. ಅಂತಿಮವಾಗಿ ರಾಜೀನಾಮೆ ಅಂಗೀಕಾರಕ್ಕೆ ಕಳುಹಿಸಲಾಯಿತು ಎಂದರು.
ಅನಗತ್ಯ ಸಿಬ್ಬಂದಿ ನೇಮಕವಾಗಿಲ್ಲ
ಮುಖ್ಯಮಂತ್ರಿಯವರ ಕಚೇರಿಯಲ್ಲಿ ಅನಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂಬ ವರದಿಯಲ್ಲಿ ಸತ್ಯಾಂಶವಿಲ್ಲ. ನಮ್ಮ
ಕಚೇರಿಯಲ್ಲಿ 450 ಮಂದಿ ನೇಮಕಗೊಂಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಇದ್ದಷ್ಟೇ ಸಿಬ್ಬಂದಿ ಈಗಲೂ ಇದ್ದಾರೆ. ಪ್ರಸ್ತುತ ನನ್ನ ಕಚೇರಿಯಲ್ಲಿ 282 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಆರು ಮಂದಿ ಅಬಲೆಯರು, ಅಂಧರು, ವಿಕಲಚೇತನರು ಇದ್ದಾರೆಂದು ಸ್ಪಷ್ಟಪಡಿಸಿದರು.