ಗಾಳಿಯಲ್ಲಿ ಗುಂಡು ಹಾರಿಸಿದ ಉದ್ಯಮಿ ಬಂಧನ
Team Udayavani, Jul 24, 2018, 11:54 AM IST
ಬೆಂಗಳೂರು: ಮನೆ ಮುಂದೆ ಕಾರು ನಿಲ್ಲಿಸುವ ವಿಚಾರದ ಜಗಳ ತಾರಕಕ್ಕೇರಿ ಉದ್ಯಮಿಯೊಬ್ಬ ತನ್ನ ಸರ್ವೀಸ್ ಪಿಸ್ತೂಲ್ನಿಂದ ಎರಡು ಸುತ್ತು ಗುಂಡು ಹಾರಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಘಟನೆ ಹೆಬ್ಟಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉದ್ಯಮಿ ಸಂಜೀವ್ ಸಕ್ಸೇನಾ ಎಂಬುವವರು ಕೆಂಪಣ್ಣ ಲೇಔಟ್ನ 8ನೇ ಕ್ರಾಸ್ನಲ್ಲಿ ವಾಸವಿದ್ದಾರೆ. ಅವರ ಮನೆಯ ಮುಂದೆ ರವಿಕುಮಾರ್ ಎಂಬಾತ ಕಾರು ನಿಲ್ಲಿಸುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಈ ಹಿಂದೆ ಎರಡು ಬಾರಿ ಜಗಳವಾಗಿತ್ತು.
ಭಾನುವಾರ ರಾತ್ರಿ 9.45ಕ್ಕೆ ರವಿಕುಮಾರ್ ಕಾರು ತಂದು ನಿಲ್ಲಿಸಿದ್ದು, ಸಂಜೀವ್ ಆಕ್ಷೇಪಿಸಿ, ಕೂಡಲೇ ಕಾರು ತೆಗೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ಸಂಜೀವ್ ಕೊರಳಿನಲ್ಲಿದ್ದ ಸರ ಕಿತ್ತುಕೊಂಡು ರವಿಕುಮಾರ್ ತನ್ನ ಕೊಠಡಿಗೆ ಹೋಗಿದ್ದಾನೆ.
ಇದರಿಂದ ಕೋಪಗೊಂಡ ಸಂಜೀವ್ ತನ್ನ ಸರ್ವೀಸ್ ಪಿಸ್ತೂಲ್ ತಂದು ರವಿಕುಮಾರ್ಗೆ ಹೆದರಿಸಲು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಭಯಗೊಂಡ ರವಿಕುಮಾರ್ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿ ಇಬ್ಬರನ್ನೂ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ