ರಾಜಧಾನಿಯಲ್ಲಿ ವರುಣನ ಆರ್ಭಟ
Team Udayavani, Nov 22, 2021, 10:42 AM IST
ಬೆಂಗಳೂರು: ಭಾನುವಾರ ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆ ವೇಳೆಗೆ ಮತ್ತೆ ತನ್ನ ರುದ್ರ ನರ್ತನ ಪ್ರದರ್ಶಿಸಿತು. ಸಂಜೆ ಆರು ಗಂಟೆ ಸುಮಾರಿಗೆ ಆರಂಭವಾದ ಮಳೆ ರಾತ್ರಿ 10 ಗಂಟೆವರೆಗೆ ಸುರಿಯಿತು.
ಯಲಹಂಕ, ಯಶವಂತಪುರ, ನಾಗಸಂದ್ರ, ಟಿ.ದಾಸರಹಳ್ಳಿ, ಚಿಕ್ಕಬಾಣವಾರ, ಹಲಸೂರು, ಶಿವಾಜಿನಗರ, ಹೆಬ್ಟಾಳ, ರೇಸ್ ಕೋರ್ಸ್ ರಸ್ತೆ, ಯಲಹಂಕ ಕೋಗಿಲು ಕ್ರಾಸ್, ನೆಲಮಂಗಲ, ಶಿವಾನಂದ ಸರ್ಕಲ್ ಹಾಗೂ ಇತರೆಡೆ ಭಾರೀ ಮಳೆ ಆಯಿತು. ಪರಿಣಾಮ ನಗರದ ರಸ್ತೆಗಳಲ್ಲಿ ನೀರು ನಿಂತಿದ್ದು, ಬಿಡಿಎ ಅಂಡರ್ ಪಾಸ್, ಶಿವಾನಂದ ವೃತ್ತ ಅಂಡರ್ ಪಾಸ್ ಹಾಗೂ ಇತರೆಡೆ ನೀರು ನಿಂತಿತ್ತು.
ಅಲ್ಲದೆ, ತಗ್ಗು ಪ್ರದೇಶಗಳಲ್ಲಿ ಮನೆಗಳು, ಅಪಾರ್ಟ್ಮೆಂಟ್ ಗಳಿಗೆ ನೀರು ನುಗ್ಗಿತ್ತು. ಯಶವಂತಪುರದ ಮೋಹನ್ಕುಮಾರ್ ನಗರದಲ್ಲಿ ರೈಲ್ವೆ ಕಾಂಪೌಂಡ್ ಕುಸಿದು, ಮೂರು ಆಟೋಗಳು, ಒಂದು ಬೈಕ್ ಜಖಂಗೊಂಡಿತು. ಇದೇ ವೇಳೆ ಒಬ್ಬರ ಕಾಲಿಗೆ ಗಾಯವಾಗಿದ್ದು, ಆಸ್ಪ ತ್ರೆಗೆ ದಾಖಲಿಸಲಾಗಿದೆ.
ಮತ್ತೂಂದೆಡೆ ಟಿ.ದಾಸರಹಳ್ಳಿಯಲ್ಲೂ ಸುರಿದ ಮಳೆಗೆ ಮನೆ, ಕಟ್ಟಡಗಳ ಒಳಗೆ ನೀರು ನುಗ್ಗಿತ್ತು. ಯಲಹಂಕದಲ್ಲಿ ಸಂಜೆ 7 ಗಂಟೆ ನಂತರ ಸುಮಾರು 12 ಸೆಂ.ಮೀಟರ್ ಮಳೆಯಾಗಿದ್ದು, ರಸ್ತೆಗಳಲ್ಲಿ ಮೊಳಕಾಲಿನವರೆಗೆ ನೀರು ನಿಂತಿತ್ತು. ಹೀಗಾಗಿ ವಾಹನ ಸವಾರರು ಸಂಚರಿಸಲು ಪರದಾಟ ನಡೆಸಿ ದರು. ಬಿಡಿಎ ಅಂಡರ್ಪಾಸ್ನಲ್ಲಿ ಬೈಕ್ ಸವಾರ ಇಬ್ಬರು ಮಕ್ಕಳ ಜತೆ ನೀರಿನಲ್ಲಿ ಸಿಲುಕ್ಕಿದ್ದರು, ಬಳಿಕ ಸ್ಥಳೀಯರು ರಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ