ಬುರ್ಖಾ ಧರಿಸಿ ಓಡಾಡುತ್ತಿದ್ದವನ ಸೆರೆ
Team Udayavani, May 30, 2018, 11:53 AM IST
ಬೆಂಗಳೂರು: ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬುರ್ಖಾ ಧರಿಸಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಸಾಲಗಾರರಿಂದ ತಪ್ಪಿಸಿಕೊಳ್ಳಲು ಈ ರೀತಿಯ ವೇಷ ಧರಿಸಿ ಓಡಾಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ರಾಯಚೂರು ಮೂಲದ ಶಿವರಾಜ್(25) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಹೆಣ್ಣೂರು ಜಂಕ್ಷನ್ನ ಮಸೀದಿ ಬಳಿ ಬುರ್ಖಾ ಧರಿಸಿ, ಕೈಯಲ್ಲಿ ಮಚ್ಚು ಹಿಡಿದು ಓಡಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವರಾಜ್ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸಾಲಗಾರರಿಂದ ತಪ್ಪಿಸಿಕೊಳ್ಳಲು ಈ ರೀತಿ ಓಡಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಚೂರು ಮೂಲದ ಶಿವರಾಜ್ ಐಟಿಐ ವ್ಯಾಸಂಗ ಮಾಡಿದ್ದು, ಎರಡು ವರ್ಷಗಳಿಂದ ಹೂಡಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ 30-35 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸಲಾಗದೆ ಸಾಲಗಾರರಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದ.
ಮಂಗಳವಾರ ಬೆಳಗ್ಗೆ ಹೆಣ್ಣೂರು ಜಂಕ್ಷನ್ನ ಎಚ್ಬಿಆರ್ ಲೇಔಟ್ನಲ್ಲಿರುವ ಮಸೀದಿ ಹತ್ತಿರದ ಬಸ್ ನಿಲ್ದಾಣ ಬಳಿ ಬುರ್ಖಾ ಧರಿಸಿ ಕ್ಯಾಬ್ನಿಂದ ಇಳಿದ ಶಿವರಾಜ್, ಬಳಿಕ ಮುಖಕ್ಕೆ ಸ್ಕಾಫ್ì ಕಟ್ಟಿಕೊಂಡಿದ್ದಾನೆ. ಆತನ ಕೈಯಲ್ಲಿದ್ದ ಮಚ್ಚನ್ನು ಕಂಡ ಸ್ಥಳೀಯರು ಒಂದು ಕ್ಷಣ ಆತಂಕಗೊಂಡಿದ್ದಾರೆ. ಬಳಿಕ ಆತನನ್ನು ಹಿಡಿದು ಶಿವರಾಜ್ನನ್ನು ವಿಚಾರಣೆ ನಡೆಸಿ ಕೆ.ಜಿ.ಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ ಮೊದಲಿಗೆ ವಿಚಾರಣೆ ಸಂದರ್ಭದಲ್ಲಿ ಹೆಣ್ಣೂರಿನಲ್ಲಿರುವ ಸಹದ್ಯೋಗಿ ಜಗನ್ನಾಥ್ನನ್ನು ಭೇಟಿಯಾಗಲು ಹೋಗುತ್ತಿದೆ. 30-35 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಸಾಲಗಾರರು ವಿಪರೀತ ತೊಂದರೆ ಕೊಡುತ್ತಿದ್ದರು. ಹೋದ ಕಡೆಗಳಲ್ಲಿ ಬಂದು ಹಣ ವಾಪಸ್ ಮಾಡುವಂತೆ ಪೀಡಿಸುತ್ತಿದ್ದರು.
ಹೀಗಾಗಿ ಹೆಣ್ಣೂರಿನ ಸ್ನೇಹಿತ ಜಗನ್ನಾಥ್ ನೋಡಲು ಬುರ್ಖಾ ಧರಿಸಿದ್ದೆ, ಈತ ನನಗೆ 20 ಲಕ್ಷ ರೂ. ಸಾಲ ಕೊಟ್ಟಿದ್ದ ಎಂದು ಹೇಳಿದ್ದಾನೆ. ಆದರೆ, ಕೈಯಲ್ಲಿ ಮಚ್ಚು ಯಾಕೆ ಹಿಡಿದಿದ್ದೆ ಎಂಬುದಕ್ಕೆ ಉತ್ತರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಬಾರಿ ಆತ್ಮಹತ್ಯೆಗೆ ಯತ್ನ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಶಿವರಾಜ್ ಯತ್ನಿಸಿದ್ದ. ಈ ವೇಳೆ ಸಹದ್ಯೋಗಿ ಜಗನ್ನಾಥ್, ಶಿವಾರಾಜ್ಗೆ ಧೈರ್ಯ ಹೇಳಿ ಮತ್ತೂಮ್ಮೆ ಈ ರೀತಿ ಮಾಡಿಕೊಳ್ಳದಂತೆ ಸಲಹೆ ನೀಡಿದ್ದರು. ಜತೆಗೆ 20 ಲಕ್ಷ ರೂ. ಹಣ ಸಾಲ ಕೂಡ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಯತ್ನ?: 20 ಲಕ್ಷ ರೂ. ಸಾಲ ನೀಡಿದ್ದ ಜಗನ್ನಾಥ್ನನ್ನು ಹತ್ಯೆ ಮಾಡಲು ಮಚ್ಚು ಕೊಂಡೊಯ್ಯುತ್ತಿದ್ದನೇ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ. ಜಗನ್ನಾಥ್ ಪೊಲೀಸರ ಬಳಿ ಹೇಳಿಕೆ ಕೊಡುವಾಗ ಈ ಹಿಂದೆ ಶಿವರಾಜ್ ತಾನು ಇಲ್ಲದ ವೇಳೆ ಮನೆಗೆ ಬಂದು ಪತ್ನಿ ಜತೆ ಮಾತನಾಡಿಕೊಂಡು ಹೋಗಿದ್ದ ಎಂದು ಹೇಳಿದ್ದಾರೆ. ಹೀಗಾಗಿ, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?