ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದವರ ಸೆರೆ


Team Udayavani, Jun 30, 2019, 3:01 AM IST

arrest2

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಮೀಟರ್‌ ಬಡ್ಡಿ ಹಾಗೂ ಅಧಿಕ ಬಡ್ಡಿ ವ್ಯವಹಾರ ನಡೆಸುತ್ತಿರುವವರ ಪತ್ತೆ ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸೂಚನೆ ಮೇರೆಗೆ ಉತ್ತರ ವಿಭಾಗದ ಮಲ್ಲೇಶ್ವರ, ಯಶವಂತಪುರ ಮತ್ತು ಜೆ.ಸಿ.ನಗರ ಉಪವಿಭಾಗದ 10 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದುಬಾರಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹತ್ತು ದಂಧೆಕೋರರ ಮನೆಗಳ ಮೇಲೆ ದಾಳಿ ನಡೆಸಿ 13,16 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳ 145 ಖಾಲಿ ಚೆಕ್‌ಗಳು,

ಐದು ಸ್ಟಾಂಪ್‌ ಪತ್ರಗಳು, ಮೂರು ಆಸ್ತಿ ಪತ್ರಗಳು, ಆರು ಬಾಂಡ್‌ ಪೇಪರ್‌ಗಳು, ಎರಡು ಜಿಪಿಎ ಪತ್ರಗಳು, ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಅಡಮಾನ ಪತ್ರಗಳು ಮತ್ತು ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ತು ಮಂದಿಯ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ.

ವೆಂಕಟೇಶ್‌ (31), ನಾಗರಾಜ್‌ (63), ಕೆ.ಎಂ.ಜಗದೀಶ್‌ (32), ಕುಮಾರ್‌ (35), ಪಿ.ಬಿ.ರಾಮಕೃಷ್ಣ (48), ಸುಜಾತಾ (46) ಬಂಧಿತರು. ಹಾಗೇ ಇತರೆ ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿದ್ದು, ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಸುಬ್ರಹ್ಮಣ್ಯನಗರದ ವೆಂಕಟೇಶ್‌ (31) ಬಳಿ 15,600 ರೂ. ನಗದು, ಸಾಲ ಪಡೆದುಕೊಂಡವರ ವಿವರದ ಎರಡು ನೋಟ್‌ ಪುಸ್ತಕಗಳು, ಮಹಾಲಕ್ಷಿಲೇಔಟ್‌ನ ಕುರುಬರಹಳ್ಳಿಯ ನಾಗರಾಜ್‌ ಬಳಿ ವಿವಿಧ ಬ್ಯಾಂಕ್‌ಗಳ 19 ಖಾಲಿ ಚೆಕ್‌ಗಳು, ಎರಡು ಖಾಲಿ ಬಾಂಡ್‌ಗಳು, ನಂದಿನಿ ಲೇಔಟ್‌ನ ಕೆ.ಎಂ.ಜಗದೀಶ್‌ ಬಳಿ ಮೂರು ಖಾಲಿ ಚೆಕ್‌ಗಳು,

ನಾಲ್ಕು ಖಾಲಿ ಬಾಂಡ್‌ ಪೇಪರ್‌ಗಳು, ರಾಜಗೋಪಾಲನಗರದ ಕುಮಾರ್‌ ಎಂಬಾತನ ಮನೆ ಮತ್ತು ಕಚೇರಿಯಲ್ಲಿ ನಾಲ್ಕು ಖಾಲಿ ಚೆಕ್‌ಗಳು, ಎರಡು ಶುದ್ಧ ಕ್ರಯ ಪತ್ರ, ಎರಡು ನೋಟ್‌ ಪುಸ್ತಕಗಳು,ಮೂರು ದ್ವಿಚಕ್ರ ವಾಹನಗಳು, ಆರ್‌ಎಂಸಿ ಯಾರ್ಡ್‌ನ ನಂದಿನಿ ಲೇಔಟ್‌ನ ಪಿ.ಬಿ.ರಾಮಕೃಷ್ಣ ಬಳಿ ಎರಡು ಖಾಲಿ ಸ್ಟಾಂಪ್‌ ಪೇಪರ್‌ಗಳು, ಹರೀಶ್‌ ಎಂಬುವರ ಹೆಸರಿನಲ್ಲಿರುವ ಎರಡು ಖಾಲಿ ಚೆಕ್‌ಗಳು,

ತ್ಯಾಗರಾಜ್‌ ಎಂಬುವರ ಹೆಸರಿನಲ್ಲಿರುವ ಒಂದು ಖಾಲಿ ಈ ಸ್ಟಾಂಪ್‌ ಪೇಪರ್‌, ಅಸಲು ಜಿಪಿಎ ಪತ್ರ, ಏಳು ವಿವಿಧ ಜನರ ಹೆಸರಿನಲ್ಲಿರುವ ಖಾಲಿ ಚೆಕ್‌ಗಳು, ತಾತ್ಕಾಲಿಕ ಹಕ್ಕು ಪತ್ರದ ಅಸಲು, ಒಂದು ಖಾಲಿ ಈ ಸ್ಟಾಂಪ್‌ ಪೇಪರ್‌, ಮೂಲ ಜಿಪಿಎ ಪತ್ರ, ನಿವೇಶನದ ಶುದ್ಧ ಕ್ರಯ ಪತ್ರದ ಅಸಲು, ಐದು ನೋಟ್‌ ಪುಸ್ತಕಗಳ ಸಿಕ್ಕಿವೆ.

ಸೋಲದೇವನಹಳ್ಳಿಯ ಹೆಸರುಘಟ್ಟದ ದಿಲೀಪ್‌ ಬಳಿ ಜನಾರ್ಧನ ಹೆಸರಿನ ಒಂದು ಖಾಲಿ ಚೆಕ್‌, ನಾಲ್ಕು ಮತ್ತು ದ್ವಿಚಕ್ರ ವಾಹನಗಳ ನಾಲ್ಕು ಅಡಮಾನ ಪತ್ರಗಳು, ಬಾಗಲಗುಂಟೆ ಟಿ.ದಾಸರಹಳ್ಳಿಯ ಸುಜಾತಾ ಎಂಬವರ ಮನೆಯಲ್ಲಿ 18 ಖಾಲಿ ಚೆಕ್‌ಗಳು, 19 ಬಾಂಡ್‌ ಪೇಪರ್‌ಗಳು ಮತ್ತು ಇತರೆ ದಾಖಲೆಗಳು,

ಜಾಲಹಳ್ಳಿಯ ಜಮುನಾ ಮತ್ತು ಪೀಣ್ಯದ ಇಂದಿರಾನಗರದಲ್ಲಿ ವೆಂಕಟೇಶ್‌ ಅಲಿಯಾಸ್‌ ಆಸಿಡ್‌ ವೆಂಕೇಟಶ್‌ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರ್‌.ಟಿ.ನಗರದ ಎಸ್‌. ಜಯರಾಮ್‌ ಅಲಿಯಾಸ್‌ ರಾಮಣ್ಣ ಎಂಬವರ ಮನೆಯಲ್ಲಿ ದಾಳಿ ನಡೆಸಿ 90 ಖಾಲಿ ಚೆಕ್‌ಗಳು, 25 ಖಾಲಿ ಬೇಡಿಕೆ ಪತ್ರ, ಪ್ರಾಮಿಸರಿ ನೋಟ್‌ ಮತ್ತು ಕನ್‌ಸಿಡರೇಷನ್‌ ರೆಸಿಪ್ಟ್ಗಳು, ಟಾಟಾ ಸಫಾರಿ ವಾಹನದ ದಾಖಲೆ ಪತ್ರ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.