ಸಿಎಜಿ ಪ್ರಧಾನ ನಿರ್ದೇಶಕಿ ವಿರುದ್ಧ ಸಿಬಿಐ ಎಫ್ಐಆರ್‌


Team Udayavani, Sep 11, 2017, 6:35 AM IST

Coffee.jpg

ಬೆಂಗಳೂರು: ಸುಮಾರು 15 ವರ್ಷ ಹಿಂದೆ ಬೆಂಗಳೂರಿನ ಕಾಫಿ ಬೋರ್ಡ್‌ನಲ್ಲಿ ನಡೆದಿದ್ದ ಬೋರ್ಡ್‌ಗೆ ಸೇರಿದ ಕೋಟ್ಯಂತರ ರೂ. ಹೆಚ್ಚುವರಿ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಮರುಜೀವ ಬಂದಿದ್ದು, ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆ ಪ್ರಧಾನ ನಿರ್ದೇಶಕಿ ಶಾರದಾ ಸುಬ್ರಮಣಿಯಮ್‌ ಅವರಿಗೆ ಸಿಬಿಐ ತನಿಖೆಯ ಉರುಳು ಸುತ್ತಿಕೊಂಡಿದೆ.

1998ರಿಂದ 2003ರ ಅವಧಿಯಲ್ಲಿ ಕಾಫಿ ಬೋರ್ಡ್‌ನ ಹಣಕಾಸು ವಿಭಾಗದ ನಿರ್ದೇಶಕಿಯಾಗಿದ್ದ ಶಾರದಾ ಸುಬ್ರಮಣಿಯಮ್‌ ಹಾಗೂ ಇತರೆ ಇಬ್ಬರು ಅಧಿಕಾರಿಗಳು ಕಾಫೀ ಬೋರ್ಡ್‌ನಲ್ಲಿದ್ದ 16.2 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ  ಹೂಡಿಕೆ ಮಾಡಿ ಬೋರ್ಡ್‌ನ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಲ್ಲದೆ, ಸ್ವಂತಕ್ಕೆ ಲಾಭ ಪಡೆದುಕೊಂಡ ಆರೋಪ ಸಂಬಂಧ ಸಿಬಿಐ ಐವರ ವಿರುದ್ಧ ಎಫ್ಐಆರ್‌ ದಾಖಲಿಸಿದೆ.

ಈ ಕುರಿತು ದಾಖಲಾದ ದೂರಿನ ಅನ್ವಯ ಸಿಎಜಿ ಪ್ರಧಾನ ನಿರ್ದೇಶಕಿ ಶಾರದಾ ಸುಬ್ರಮಣಿಯಮ್‌, ಕೇಂದ್ರ ಹಣಕಾಸು ಇಲಾಖೆ ಅಧಿಕಾರಿಯಾಗಿದ್ದ ಅವರ ಪತಿ ಸಂದೀಪ್‌ ದಾಸ್‌,  ಕಾಫಿಬೋರ್ಡ್‌ನ ಅಂದಿನ ಹಣಕಾಸು ಅಧಿಕಾರಿಗಳಾದ ನಾಗರಾಜನ್‌ , ಜಿ.ಆನಂದ್‌,  ಖಾಸಗಿ ಮ್ಯೂಚುವಲ್‌ ಫ‌ಂಡ್‌ ಕಂಪೆನಿಯ ಆಡಳಿತ ಪಾಲುದಾರ ಎಂ.ಗುರುರಾಜ್‌ ಎಂಬುವವರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ವಂಚನೆ (ಐಪಿಸಿ 420, 120 (ಬಿ) 409, 477 (ಎ)) ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಎಫ್ಐಆರ್‌ ದಾಖಲಿಸಿರುವ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಕಾಫೀಬೋರ್ಡ್‌ಗೆ 53.25 ಲಕ್ಷ  ರೂ. ನಷ್ಟ !
ಕಾಫಿಬೋರ್ಡ್‌ನ ಅಂದಿನ ನಿರ್ದೇಶಕಿಯಾಗಿದ್ದ ಶಾರದಾ ಸುಬ್ರಮಣಿಯಮ್‌ ಹಾಗೂ ಇತರೆ ಇಬ್ಬರು ಹಣಕಾಸು ವಿಭಾಗದ ಅಧಿಕಾರಿಗಳು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ನಿಯಮಾವಳಿಗಳನ್ನು ಉಲ್ಲಂ ಸಿ ಬೋರ್ಡ್‌ನಲ್ಲಿದ್ದ  16.2 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಪ್ರಕರಣದ ನಾಲ್ಕನೇ ಆರೋಪಿ ಗುರುರಾಜ್‌ ಆಡಳಿತ ಪಾಲುದಾರರಾಗಿರುವ ಗ್ರೀನ್‌ ಹೋಮ್ಸ್‌ ಇಂಡಿಯಾ ಅಂಡ್‌  ಪ್ರೊಪ್ರೈಟರ್‌, ಜಿ.ಎಸ್‌.ಪೈನಾನ್ಷಿಯಲ್‌ ಸರ್ವೀಸಸ್‌ ಕಂಪೆನಿ ಸೇರಿದಂತೆ ಇತರೆ ಕಂಪೆನಿಗಳ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ  ಹೂಡಿಕೆ ಮಾಡಿದ್ದರು. ಈ ಅಕ್ರಮಕ್ಕೆ ಶಾರದಾ ಅವರ ಪತಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಂದಿನ ಆರ್ಥಿಕ ಸದಸ್ಯ ಸಂದೀಪ್‌ ದಾಸ್‌  ಸಾಥ್‌ ನೀಡಿದ್ದಾರೆ ಎಂದು ಸಿಬಿಐ ಶಂಕಿಸಿದೆ. ಈ ಅವ್ಯವಹಾರದಿಂದ ಕಾಫಿಬೋರ್ಡ್‌ನ ಬೊಕ್ಕಸಕ್ಕೆ ಅಧಿಕೃತವಾಗಿ 53.25 ಲಕ್ಷ ರೂ. ನಷ್ಟವುಂಟಾಗಿದೆ. ಅಲ್ಲದೆ, ಐವರೂ ಆರೋಪಿಗಳು ವೈಯಕ್ತಿಕವಾಗಿ ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಸಂದೀಪ್‌ ದಾಸ್‌ ವಿರುದ್ಧ ಹಗರಣಗಳ ಸರಮಾಲೆ!
ಶಾರದಾ ಸುಬ್ರಮಣಿಯಮ್‌ ಪತಿ ಭಾರತೀಯ ಲೆಕ್ಕಪರಿಶೋಧನಾ ಸೇವೆ (ಐಸಿಎಎಸ್‌) ಅಧಿಕಾರಿಯಾಗಿರುವ ಸಂದೀಪ್‌ ದಾಸ್‌ ವಿರುದ್ಧ ಹಗರಣಗಳ ಸರಮಾಲೆಯೇ ಇದೆ. 1994ರಿಂದ 2004ರವರೆಗೆ ಬಿಡಿಎ ಆರ್ಥಿಕ ಸದಸ್ಯರಾಗಿದ್ದ ಸಂದೀಪ್‌ ದಾಸ್‌, ಬಿಡಿಎಯಲ್ಲಿದ್ದ 2000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ತೊಡಗಿಸಿ ಅವ್ಯವಹಾರ ನಡೆಸಿದ್ದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿರುವ ಸಿಐಡಿ ಪೊಲೀಸರು, ಸಂದೀಪ್‌ ದಾಸ್‌ರನ್ನು 2015ರ ಆಗಸ್ಟ್‌ನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಆರೋಪಿ ಸಂದೀಪ್‌ ದಾಸ್‌ ಸೇರಿದಂತೆ ಇನ್ನಿತರರ ವಿರುದ್ಧ ಕಳೆದ ಫೆಬ್ರವರಿ ಅಂತ್ಯದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ  ಬೆಳವಣಿಗೆಗಳ ನಡುವೆ ಕೆಂದ್ರ ಹಣಕಾಸು ಇಲಾಖೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೀಪ್‌ ಅವರನ್ನು ಮೇ 5ರಂದು ಸೇವೆಯಿಂದ ವಜಾಗೊಳಿಸಲಾಗಿದೆ.

– ಮಂಜುನಥ್‌ ಲಗುಮೇನಹಳ್ಳಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.