ನಿರ್ಮಾಪಕ ದಂಪತಿ, ಉದ್ಯಮಿ ವಿಚಾರಣೆ
Team Udayavani, Oct 22, 2020, 11:55 AM IST
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಜಗದೀಶ್ ಮತ್ತು ಅವರ ಪತ್ನಿ ಸೌಂದರ್ಯ ಹಾಗೂ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಪುತ್ರ ಮತ್ತು ರಾಯಲ್ ಮೀನಾಕ್ಷಿ ಮಾಲ್ಮಾಲೀಕ ವಿ.ಗಣೇಶ್ರಾವ್ ಅವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ.
ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಗಲ್ರಾನಿ ಜತೆ ಮೂವರು ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇಲೆ ಕೆಲ ದಿನಗಳಹಿಂದೆ ನೋಟಿಸ್ ನೀಡಲಾಗಿತ್ತು.ಈ ಹಿನ್ನೆಲೆಯಲ್ಲಿವಿಚಾರಣೆಗೆ ಹಾಜರಾಗಿದ್ದಾರೆ. ಮೂವರಿಂದ ಲಿಖೀತ ರೂಪದಲ್ಲಿ ಮಾಹಿತಿ ಪಡೆಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಅಪರಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ನಿರ್ಮಾಪಕ ಜಗದೀಶ್ ಮತ್ತು ಅವರ ಪತ್ನಿ ಸೌಂದರ್ಯ ಜಗದೀಶ್ ಅವರನ್ನುಮಧ್ಯಾಹ್ನ ಮೂರು ಗಂಟೆವರೆಗೆ ವಿಚಾರಣೆ ನಡೆಸಲಾಗಿದೆ. ದಂಪತಿ ರಾಮ್ಲೀಲಾ, ಅಪ್ಪ-ಪಪ್ಪು ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಅಲ್ಲದೆ, ಯಶವಂತಪುರ ಬಳಿ ಜೆಟ್ಲಾಗ್ ಎಂಬ ಪಬ್ ಮಾಲೀಕರಾಗಿದ್ದಾರೆ. ಈ ಪಬ್ನಲ್ಲಿ ಸೆಲೆಬ್ರಿಟಿಗಳ ದೊಡ್ಡ-ದೊಡ್ಡ ಪಾರ್ಟಿಗಳು ನಡೆಯುತ್ತಿದ್ದು, ಪ್ರಕರಣದಲ್ಲಿ ಬಂಧನವಾಗಿರುವ ದೆಹಲಿಯ ವಿರೇನ್ ಖನ್ನಾ, ವೈಭವ್ ಜೈನ್, ಶ್ರೀ ಅಲಿಯಾಸ್ ಶ್ರೀಸುಬ್ರಹ್ಮಣ್ಯ, ನಟಿ ಸಂಜನಾ ಗಲ್ರಾನಿ, ರಾಗಿಣಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ, ವಿರೇನ್ ಖನ್ನಾ, ವೈಭವ್ ಜೈನ್ ಪಾರ್ಟಿ ಆಯೋಜಿಸುತ್ತಿದ್ದರು ಎಂದು ಹೇಳಲಾಗಿತ್ತು. ಜತೆಗೆ ಅವರ ನಿರ್ಮಾಣದ ರಾಮ್ಲೀಲಾ ಸಿನಿಮಾದಲ್ಲಿ ನಟಿ ಸಂಜನಾ ಗಲಾÅನಿ ನಟಿಸಿದ್ದರು. ಈ ಎಲ್ಲ ವಿಚಾರಗಳ ಕುರಿತಿ ಮಾಹಿತಿ ಪಡೆಯಲಾಗಿದೆ.
ವಿಚಾರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೌಂದರ್ಯ ಜಗದೀಶ್, ಡ್ರಗ್ಸ್ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಪತಿ ನಿರ್ಮಾಣದ ರಾಮ್ಲೀಲಾ ಚಿತ್ರದಲ್ಲಿ ಸಂಜನಾ ನಟಿಸಿದ್ದರು. ಈ ಸಿನಿಮಾ ಹಾಗೂ ಆಕೆಗೆ ನೀಡಿದ ಸಂಭಾವನೆ ಬಗ್ಗೆ ಮಾಹಿತಿ ಕೇಳಿದರು. ಜತೆಗೆ ತಮ್ಮ ಪಬ್ನಲ್ಲಿ ನಡೆಯುತ್ತಿದ್ದ ಪಾರ್ಟಿಗಳು, ಆಯೋಜಕರ ಬಗ್ಗೆ ಮಾಹಿತಿ ಕೇಳಿದರು. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ ಎಂದು ಹೇಳಿದರು.
ಸಿಸಿಬಿಯಿಂದ ರ್ಯಾಪಿಡ್ ಫೈರ್ : ತಮ್ಮ ಪಬ್ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಯಾರೆಲ್ಲ ಬರುತ್ತಿದ್ದರು? ಪಾರ್ಟಿ ಆಯೋಜನೆ ಯಾರು ಮಾಡುತ್ತಿದ್ದರು? ವಿರೇನ್ ಖನ್ನಾ ಹಾಗೂ ಇತರೆ ಆರೋಪಿಗಳು ತಮ್ಮ ಕ್ಲಬ್ನಲ್ಲಿ ಪಾರ್ಟಿ ಆಯೋಜಿಸುತ್ತಿದ್ದರಾ? ಸಂಜನಾ ಗಲ್ರಾನಿಗೆ ಚೆಕ್ ಅಥವಾ ನಗದು ರೂಪದಲ್ಲಿ ಸಂಭಾವನೆ ನೀಡಿದ್ದಿರಾ? ಎಂಬೆಲ್ಲ ಪ್ರಶ್ನೆಗಳನ್ನು ನಿರ್ಮಾಪಕ ಜಗದೀಶ್ ಮತ್ತು ಅವರ ಪತ್ನಿ ಸೌಂದರ್ಯ ಜಗದೀಶ್ಗೆ ಕೇಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಸಂಜನಾ ಜತೆ ವ್ಯಾವಹಾರಿಕ ಸಂಬಂಧವೇನು? : ಕಾಂಗ್ರೆಸ್ ವಿಧಾನಸಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಪುತ್ರ ವಿ.ಗಣೇಶ್ರಾವ್ ಕೂಡ ವಿಚಾರಣೆ ನಡೆಸಲಾಗಿದೆ. ಗಣೇಶ್ರಾವ್ ಬನ್ನೇರುಘಟ್ಟ ರಸ್ತೆಯಲ್ಲಿ ರಾಯಲ್ ಮಿನಾಕ್ಷಿ ಮಾಲ್ ನಡೆಸುತ್ತಿದ್ದು, ರೆಸ್ಟೋರೆಂಟ್ ಹೊಂದಿದ್ದಾರೆ. ಈ ರೆಸ್ಟೋರೆಂಟ್ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಪ್ರಕರಣದ ಆರೋಪಿಗಳು ಭಾಗಿಯಾಗುತ್ತಿದ್ದರು ಎಂದು ಹೇಳಲಾಗಿತ್ತು.ಅಲ್ಲದೆ, ನಟಿ ಸಂಜನಾ ಗಲ್ರಾನಿ ಖಾತೆಯಿಂದ ಗಣೇಶ್ರಾವ್ ಖಾತೆಗೆ ಲಕ್ಷಾಂತರ ರೂ. ಹಣ ವರ್ಗಾವಣೆ ಯಾಗಿರುವ ಮಾಹಿತಿಇತ್ತು.ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದ್ದು,ಯಾವ ಕಾರಣಕ್ಕೆ ಸಂಜನಾ ಖಾತೆಯಿಂದ ನಿಮ್ಮ ಖಾತೆಗೆ ಲಕ್ಷಾಂತರ ರೂ.ವರ್ಗಾವಣೆಯಾಗಿದೆ? ಅವರ ಜತೆಗಿನ ವ್ಯವಹಾರಿಕ ಸಂಬಂಧ ಏನು? ಪ್ರಶ್ನಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ