ಸಿಸಿಬಿ ಆಪರೇಶನ್ “ಯಾಬಾ’ ಡ್ರಗ್ಸ್ ವಶ
Team Udayavani, Jun 16, 2019, 3:02 AM IST
ಬೆಂಗಳೂರು: ಮಯನ್ಮಾರ್ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ “ಯಾಬಾ’ ಹೆಸರಿನ ಡ್ರಗ್ಸ್ ಮಾತ್ರೆಗಳು ಬೆಂಗಳೂರಿನಲ್ಲಿಯೂ ಮಾರಾಟವಾಗುತ್ತಿರುವ ಸಂಗತಿ ಬಯಲಾಗಿದೆ.
ಪಶ್ಚಿಮ ಬಂಗಾಳದಿಂದ “ಯಾಬಾ’ ಮಾತ್ರೆಗಳನ್ನು ರೈಲುಪ್ರಯಾಣದ ಮೂಲಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ “ಯಾಬಾ’ ಮಾತ್ರೆಗಳನ್ನು ಜಪ್ತಿ ಮಾಡುವಲ್ಲಿ ಕೇಂದ್ರ ಅಪರಾಧ ಘಟಕ (ಸಿಸಿಬಿ)ಪೊಲೀಸರು ಯಶಸ್ವಿಯಾಗಿದ್ದಾರೆ. ಜಹಂಗೀರ್ (27) ಬಂಧಿತ ಆರೋಪಿ.
ಆರೋಪಿ ಜಹಂಗೀರ್ ಯಾಬಾ ಮಾತ್ರೆ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮಹಿಳೆ ಮತ್ತು ಮಾದಕ ವಸ್ತು ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ (ಎಸಿಪಿ)ಶೋಭಾ ಎಸ್ ಕಟಾವ್ಕರ್ , ಇನ್ಸ್ಪೆಕ್ಟರ್ ಕೆ. ನಾರಾಯಣಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದೆ.
ಒಂದು ಮಾತ್ರೆಗೆ 600-800 ರೂ.: ಮೂಲತಃ ಪಶ್ಚಿಮ ಬಂಗಾಳದ 12 ಪರಗಣ ಜಿಲ್ಲೆಯ ಜಹಂಗೀರ್ ಪರಪ್ಪನ ಅಗ್ರಹಾರದ ಈಶ್ವರಪ್ಪ ರೆಡ್ಡಿ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಈ ಹಿಂದೆ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಆರು ತಿಂಗಳಿನಿಂದ “ಯಾಬಾ’ಡ್ರಗ್ಸ್ ಮಾತ್ರೆ ಮಾರಾಟ ಜಾಲದಲ್ಲಿ ಸಕ್ರಿಯನಾಗಿದ್ದಾನೆ.
ರೈಲು ಪ್ರಯಾಣದ ಮೂಲದ ಪಶ್ಚಿಮ ಬಂಗಾಳದಿಂದ ಮಾತ್ರೆಗಳನ್ನು ತರಿಸಿಕೊಂಡು ಪರಿಚಯಸ್ಥ ಗ್ರಾಹಕರಿಗೆ ಒಂದು ಮಾತ್ರೆಗೆ 600 ರಿಂದ 800 ರೂ.ಗಳವರೆಗೆ ಮಾರಾಟ ಮಾಡುತ್ತಿದ್ದ ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದವರಿಗೆ ಹೆಚ್ಚು ಮಾರಾಟ: “ಯಾಬಾ’ ಮಾತ್ರೆ ಮಯನ್ಮಾರ್ ಹಾಗೂ ಬಾಂಗ್ಲಾದೇಶದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತದೆ. ಅಲ್ಲಿಂದ ಡೀಲರ್ಗಳ ಮೂಲಕ ಪಶ್ಚಿಮಬಂಗಾಳಕ್ಕೆ ತಲುಪುತ್ತದೆ. ಅಲ್ಲಿಂದ ತರಿಸಿಕೊಳ್ಳುವ ಆರೋಪಿ ಜಹಂಗೀರ್, ಪರಿಚಯಸ್ಥ ಪಶ್ಚಿಮಬಂಗಾಳ ಗ್ರಾಹಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.
ಗ್ರಾಹಕರು ಮೊದಲೇ ಬುಕ್ ಮಾಡಿದರೆ. ಅವರಿಗೆ ತಲುಪಿಸುತ್ತಿದೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದು, ಈತನ ಜತೆ ಜಾಲದಲ್ಲಿ ತೊಡಗಿಸಿಕೊಂಡಿದ್ದವರ ಬಂಧನಕ್ಕೆ ಕ್ರಮವಹಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…