ಚೆಕ್‌ ತಿರುಚುತ್ತಿದ್ದ ಖದೀಮರ ಸೆರೆ


Team Udayavani, Mar 11, 2019, 6:30 AM IST

check.jpg

ಬೆಂಗಳೂರು: ಕೊರಿಯರ್‌ ಬಾಯ್‌ಗಳ ಗಮನ ಬೇರೆಡೆ ಸೆಳೆದು ಅಸಲಿ ಚೆಕ್‌ಗಳನ್ನು ಕಳವು ಮಾಡಿ, ರಾಸಾಯನಿಕ ವಸ್ತು ಬಳಿಸಿ, ಚೆಕ್‌ನಲ್ಲಿ ನಮೂದಿಸಿದ ಮೊತ್ತ ಬದಲಿಸಿ ವಂಚನೆ ಮಾಡುತ್ತಿದ್ದ ನಿವೃತ್ತ ಸರ್ಕಾರಿ ನೌಕರ, ಆತನ ಪುತ್ರ ಹಾಗೂ ಮೂವರು ರೌಡಿಶೀಟರ್‌ ಸೇರಿ ಆರು ಮಂದಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತ್ಯಾಗರಾಜನಗರ ನಿವಾಸಿ, ನಿವೃತ್ತ ಸರ್ಕಾರಿ ನೌಕರ ಜಿ.ಎಸ್‌.ಶ್ರೀಪಾದ, ಆತನ ಪುತ್ರ ಆನಂದ್‌ತೀರ್ಥ ಮತ್ತು ಖಾಸಗಿ ಕಂಪನಿ ಉದ್ಯೋಗಿ ಹರೀಶ್‌, ರೌಡಿಶೀಟರ್‌ಗಳಾದ ಪ್ರಶಾಂತ್‌, ಪ್ರತಾಪ್‌, ವೆಂಕಟೇಶ್‌ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್‌ ನವೀನ್‌ ಹಾಗೂ ಆತನ ಸಹಚರ ರಾಜೇಶ್‌ ಶೆಟ್ಟಿ  ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಕೊರಿಯರ್‌ ಬಾಯ್‌ಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ ರೌಡಿಶೀಟರ್‌ ಪ್ರಶಾಂತ್‌, ಪ್ರತಾಪ್‌, ವೆಂಕಟೇಶ್‌, ರಾಜೇಶ್‌ ಶೆಟ್ಟಿ  ಸಂಸ್ಥೆಗಳ ಮುಂದೆ ಕೆಲ ಹೊತ್ತು ಕಾಯುತ್ತಿದ್ದರು. ನಂತರ ಕೊರಿಯರ್‌ ಬಾಯ್‌ಗಳನ್ನು ಬೈಕ್‌ಗಳಲ್ಲಿ ಹಿಂಬಾಲಿಸಿ, ವಿತರಣೆ ಸಂದರ್ಭದಲ್ಲಿ ಅವರ ಗಮನ ಬೇರೆಡೆ ಸೆಳೆದು ಬ್ಯಾಗ್‌ಗಳಲ್ಲಿರುವ ಅಸಲಿ ಚೆಕ್‌ಗಳನ್ನು ಕಳವು ಮಾಡಿ,

ಅವುಗಳನ್ನು ನವೀನ್‌ಗೆ ಕೊಡುತ್ತಿದ್ದರು. ನವೀನ್‌ ರಾಸಾಯನಿಕ ವಸ್ತು ಬಳಸಿ ಚೆಕ್‌ಗಳಲ್ಲಿರುವ ಮೊತ್ತ, ದಿನಾಂಕಗಳನ್ನು ಬದಲಾಯಿಸಿ ಅಸಲಿ ಚೆಕ್‌ ರೀತಿ ತಿದ್ದುಪಡಿ ಮಾಡುತ್ತಿದ್ದ. ನಂತರ ಬ್ಯಾಂಕ್‌ನಿಂದ ಲಕ್ಷಾಂತರ ರೂ. ಹಣ ಡ್ರಾ ಅಥವಾ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಜೈಲಿನಲ್ಲೇ ಸಂಚು: ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ನವೀನ್‌, ಹರೀಶ್‌, ಪ್ರತಾಪ್‌, ಪ್ರಶಾಂತ್‌ ಹಾಗೂ ವೆಂಕಟೇಶ್‌,ರಾಜೇಶ್‌ ಶೆಟ್ಟಿ ಜೈಲು ಸೇರಿದ್ದರು. ಈ ವೇಳೆ ಎಲ್ಲರಿಗೂ ಪರಸ್ಪರ ಪರಿಚಯವಾಗಿತ್ತು. ಈ ಪೈಕಿ ನವೀನ್‌ ಈ ಮೊದಲು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಬ್ಯಾಂಕಿಂಗ್‌ ವಂಚನೆ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ.

ಜೈಲಿನಿಂದ ಹೊರಹೋಗುತ್ತಿದ್ದಂತೆ ಕೊರಿಯರ್‌ ಬಾಯ್‌ಗಳು ಕೊಂಡೊಯ್ಯುವ ಚೆಕ್‌ಗಳನ್ನು ತನಗೆ ತಂದು ಕೊಟ್ಟರೆ, ಅವುಗಳನ್ನು ರಾಸಾಯನಿಕ ವಸ್ತು ಬಳಸಿ ಮೊತ್ತ, ದಿನಾಂಕ ಬದಲಿಸಿಕೊಡುತ್ತೇನೆ. ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿ ನಗದು ಪಡೆಯಬಹುದು ಎಂದು ಸಂಚಿನ ಬಗ್ಗೆ ವಿವರಣೆ ನೀಡಿದ್ದ. ಆದರೆ, ಅವುಗಳನ್ನು ನಗದು ರೂಪಕ್ಕೆ ಬದಲಾಯಿಸುವ ಹೊಣೆ ನಿಮ್ಮದು ಎಂದು ನವೀನ್‌ ಹೇಳಿದ್ದ.

ಮತ್ತೂಂದೆಡೆ ಈ ಮೊದಲು ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದ ಹರೀಶ್‌ಗೆ, ಕಳವು ಮಾಡುತ್ತಿದ್ದ ಚೆಕ್‌ ಅನ್ನು ನಗದು ರೂಪಕ್ಕೆ ಬದಲಾಯಿಸಿಕೊಟ್ಟರೆ ಕಮೀಷನ್‌ ಕೊಡುವುದಾಗಿ ಪ್ರತಾಪ್‌ ಭರವಸೆ ನೀಡಿದ್ದ. ಒಟ್ಟಾರೆ ಕೃತ್ಯಕ್ಕೆ ಜೈಲಿನಲ್ಲೇ ಕುಳಿತು ಸಂಚು ರೂಪಿಸಿªದ ಆರೋಪಿಗಳು ಪರಪ್ಪನ ಅಗ್ರಹಾರದಿಂದ ಹೊರಬರುತ್ತಿದ್ದಂತೆ ಕೃತ್ಯ ಎಸಗಲು ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ವೆಂಕಟೇಶ್‌ ಹಾಗೂ ಪ್ರಶಾಂತ್‌ ಕೆಲ ತಿಂಗಳ ಹಿಂದೆ ತಮಿಳುನಾಡಿನ ಶಾಸ್ತ್ರಿ ಭವನದ ಬಳಿ ಕೊರಿಯರ್‌ ಮೂಲಕ ಚೆಕ್‌ಗಳನ್ನು ವಿವಿಧ ಕಂಪನಿಗಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದ ಯುವಕನನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆತನನ್ನು ಹಿಂಬಾಲಿಸಿಕೊಂಡು ಹೋಗಿ, ಆತ ಕಂಪನಿಯೊಂದಕ್ಕೆ ಚೆಕ್‌ ವಿತರಣೆ ಮಾಡುವ ಸಂದರ್ಭದಲ್ಲಿ ಯುವಕನ ಗಮನ ಬೇರೆಡೆ ಸಳೆದು ಆತನ ಬ್ಯಾಗ್‌ನಲ್ಲಿದ್ದ ಹತ್ತಾರು ಚೆಕ್‌ಗಳನ್ನು  ಕಳ್ಳತನ ಮಾಡಿದ್ದರು. ನಂತರ ನವೀನ್‌ ಮೂಲಕ ಅಸಲಿ ಚೆಕ್‌ನಲ್ಲಿದ್ದ ಮೊತ್ತವನ್ನು ಬದಲಾಯಿಸಿದ್ದರು.

ಪರಾರಿಯಾಗುವಾಗ ರಸ್ತೆ ಅಪಘಾತ – ಬಂಧನ: ಅನಂತರ ತಮಿಳುನಾಡಿನ ಬ್ಯಾಂಕ್‌ ಒಂದರಲ್ಲಿ ಆ ಚೆಕ್‌ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದರು. ಆರೋಪಿಗಳು ನೀಡಿದ ಚೆಕ್‌ ಅನ್ನು ಬ್ಯಾಂಕ್‌ ಸಿಬ್ಬಂದಿ ಪರಿಶೀಲಿಸಿದಾಗ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ಕೂಡಲೇ ಮ್ಯಾನೇಜರ್‌ ಇಬ್ಬರು ಆರೋಪಿಗಳನ್ನು ತಮ್ಮ ಕೊಠಡಿಗೆ ಕರೆದು ಪ್ರಶ್ನಿಸುತ್ತಿದ್ದಾಗ, ತಮ್ಮ ಬಳಿಯಿದ್ದ ಕಾರದ ಪುಡಿಯನ್ನು ಮ್ಯಾನೇಜರ್‌ ಮುಖಕ್ಕೆ ಎರಚಿ ಪರಾರಿಯಾಗಿದ್ದರು.

ಬೈಕ್‌ನಲ್ಲಿ ಹೋಗುತ್ತಿದ್ದ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಸ್ಕೀಡ್‌ ಆಗಿ ಕೆಳಗೆ ಬಿದ್ದಿದ್ದು, ವೆಂಕಟೇಶ್‌ ಕೈಗೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ತಮಿಳುನಾಡಿನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನಂತರ ಜಾಮೀನು ಪಡೆದು ಹೊರಬಂದ ಆರೋಪಿಗಳು ಬೆಂಗಳೂರಿನಲ್ಲಿ ಅದೇ ರೀತಿಯ ಕೃತ್ಯ ಎಸಗಿ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು.

ಮಗನ ತಪ್ಪಿಗೆ ತಂದೆಗೆ ಶಿಕ್ಷೆ: ಪ್ರಕರಣದಲ್ಲಿ ಬಂಧಿತರಾಗಿರುವ ನಿವೃತ್ತ ಸರ್ಕಾರಿ ನೌಕರ ಜಿ.ಎಸ್‌.ಶ್ರೀಪಾದ ಅವರಿಗೆ ವಂಚನೆ ಜಾಲದ ಬಗ್ಗೆ ಮಾಹಿತಿಯಿಲ್ಲ. ಆದರೆ, ಶ್ರೀಪಾದ ಅವರ ಪುತ್ರ ಆನಂದತೀರ್ಥ, ಆರೋಪಿ ಹರೀಶನ ಸಂಪರ್ಕದಲ್ಲಿದ್ದ. ಆನಂದತೀರ್ಥ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ.

ಈ ವಿಚಾರ ತಿಳಿದಿದ್ದ ಹರೀಶ್‌, ಆತನಿಗೆ ನಕಲಿ ಚೆಕ್‌ ಮೂಲಕ ಹಣ ಡ್ರಾ ಮಾಡುವ ಪ್ಲಾನ್‌ ಬಗ್ಗೆ ತಿಳಿಸಿ, ಹಣದ ಆಮೀಷವೊಡ್ಡಿ ಕೃತ್ಯದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದ. ಅದರಂತೆ, ಆನಂದ ತೀರ್ಥ, ತನ್ನ ತಂದೆ ಶ್ರೀಪಾದ್‌ ಅವರಿಗೆ ನಕಲಿ ಚೆಕ್‌ ನೀಡಿ, ವಿಧಾನಸೌಧ ಶಾಖೆಯ ಎಸ್‌ಬಿಐ ಶಾಖೆಯಿಂದ ಹಣ ಡ್ರಾ ಮಾಡಿಕೊಡುವಂತೆ ಹೇಳಿದ್ದ. ಹಣ ಡ್ರಾ ಮಾಡಿದರೆ ಸ್ನೇಹಿತರೊಬ್ಬರು ಕಮೀಷನ್‌ ಕೊಡುತ್ತಾರೆ ಎಂದು ತಿಳಿಸಿದ್ದ. 

ಪುತ್ರನ ವಂಚನೆ ಜಾಲದ ಬಗ್ಗೆ ಅರಿವಿಲ್ಲದ ಶ್ರೀಪಾದ, 57.750 ರೂ. ಮೊತ್ತವನ್ನು 5.77.500 ಎಂದು ತಿರುಚಲಾಗಿದ್ದ ನಕಲಿ ಚೆಕ್‌ ಅನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಅನುಮಾನಗೊಂಡ ಬ್ಯಾಂಕ್‌ ಸಿಬ್ಬಂದಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಬ್ಯಾಂಕ್‌ ಮ್ಯಾನೇಜರ್‌ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.