ರಸಾಯನಶಾಸ್ತ್ರ ಪರೀಕ್ಷೆ 5 ಸಾವಿರ ವಿದ್ಯಾರ್ಥಿಗಳು ಗೈರು
Team Udayavani, Apr 27, 2022, 6:25 AM IST
ಬೆಂಗಳೂರು : ರಾಜ್ಯಾ ದ್ಯಂತ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಬೇಸಿಕ್ ಮ್ಯಾಥ್ಸ್, ಮನಃಶಾಸ್ತ್ರ, ರಸಾಯನಶಾಸ್ತ್ರ ಮತ್ತು ಹಿಂದೂ
ಸ್ಥಾನಿ ಸಂಗೀತ ಪರೀಕ್ಷೆಗಳು ಯಾವುದೇ ಗೊಂದಲ ಮತ್ತು ಅಕ್ರಮಕ್ಕೆ ಅವಕಾಶವಿಲ್ಲದಂತೆ ನಡೆಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ತಿಳಿಸಿದೆ.
ಬೇಸಿಕ್ ಮಾಥ್ಸ್ ಗೆ ನೋಂದಣಿ ಮಾಡಿಕೊಂಡಿದ್ದ 6,846 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ರಸಾಯನಶಾಸ್ತ್ರ ವಿಷಯದಲ್ಲಿ 2,01,297 ವಿದ್ಯಾರ್ಥಿಗಳಲ್ಲಿ ಪ್ರಸಕ್ತ ಸಾಲಿನ 3,650 ಮತ್ತು 1,386 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ 5,036 ಮಂದಿ ಗೈರು ಹಾಜರಾಗಿದ್ದಾರೆ. ಹಿಂದೂಸ್ಥಾನಿ ಸಂಗೀತದಲ್ಲಿ 134ರಲ್ಲಿ 12 ಮಂದಿ ಗೈರಾಗಿದ್ದಾರೆ. ಮನಃಶಾಸ್ತ್ರದಲ್ಲಿ 1,881 ವಿದ್ಯಾರ್ಥಿಗಳಲ್ಲಿ 87 ಮಂದಿ ಗೈರು ಹಾಜರಾಗಿದ್ದಾರೆ. ಬೀದರ್ನಲ್ಲಿ 383, ಬೆಂಗಳೂರು ದಕ್ಷಿಣದಲ್ಲಿ 229 ಮಂದಿ ಗೈರು ಹಾಜರಾಗಿದ್ದಾರೆ.
ಇದನ್ನೂ ಓದಿ : ಬೆಂಗಳೂರಿಗೆ ಹೀನಾಯ ಸೋಲು: ಭರ್ಜರಿಯಾಗಿ ಗೆದ್ದ ರಾಜಸ್ಥಾನ್ ರಾಯಲ್ಸ್ಗೆ ಅಗ್ರಸ್ಥಾನ