ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ: ಹಿರೇಮಠ
Team Udayavani, Mar 26, 2018, 7:00 AM IST
ಬೆಂಗಳೂರು: ಅಧಿಕಾರ ಸಿಕ್ಕಿದ ಮೇಲೆ ರಾಜಕಾರಣಿಗಳು ಹೇಗೆ ಭ್ರಷ್ಟರಾಗುತ್ತಾರೆ ಅನ್ನುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಾಕ್ಷಿ ಎಂದು ಟೀಕಿಸಿರುವ ಪರಿವರ್ತನಾ ಸಂಸ್ಥೆಯ ಸಂಸ್ಥಾಪಕ ಎಸ್.ಆರ್.ಹಿರೇಮಠ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದ ಅವರು ಈಗ ಅದೇ ಅಕ್ರಮದಲ್ಲಿ ಭಾಗಿಯಾದವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಭ್ರಷ್ಟಾಚಾರ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಇಂದು ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿರುವ ಬಿಜೆಪಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಹಾಗೂ ಅವಕಾಶವಾದಿ ಜೆಡಿಎಸ್ಗೆ ವಿರುದ್ಧವಾಗಿ ಸ್ವರಾಜ್ ಇಂಡಿಯಾ, ಆಮ್ ಆದ್ಮಿ ಪಾರ್ಟಿ, ವೆಲ್ಫೆàರ್ ಪಾರ್ಟಿ ಸಹಿತ ಏಳು ಪಕ್ಷಗಳ ಮಹಾಮೈತ್ರಿ ರಚಿಸಲಾಗಿದೆ. “ಭ್ರಷ್ಟ ರಾಜಕಾರಣಿಗಳೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸುವ ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಹಾಮೈತ್ರಿ ಮಾಡಲಿದೆ ಎಂದು ತಿಳಿಸಿದರು.