ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದ ದಿಶಾ ರವಿ: ಕೋರ್ಟ್ ನಲ್ಲಿ ಕಣ್ಣೀರು!
Team Udayavani, Feb 15, 2021, 10:17 AM IST
ಬೆಂಗಳೂರು: ಚಿಕ್ಕಬಾಣಾವರದಲ್ಲಿ ಪೋಷಕರೊಂದಿಗೆ ನೆಲೆಸಿದ್ದ ದಿಶಾ ನಗರದ ಪ್ರತಿ ಷ್ಠಿತ ಕಾಲೇಜಿ ನಲ್ಲಿ ವ್ಯಾಸಂಗ ಮುಗಿಸಿದ್ದು, ಅವರ ತಂದೆ ಅಥ್ಲೆಟಿಕ್ ತರಬೇತುರರಾಗಿದ್ದು, ತಾಯಿ ಗೃಹಿಣಿ. ಕೆಲ ಸಂದರ್ಭ ದಲ್ಲಿ ದಿಶಾ ಒಬ್ಬರೇ ರಸ್ತೆಯಲ್ಲಿ ಕುಳಿತು ಘೋಷಣಾ ಫಲಕ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ, ನಗರ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಡೆಯುತ್ತಿದ್ದ ಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ದಿಶಾ ಬಂಧನದ ವೇಳೆ ಮನೆಯಲ್ಲಿ ತಂದೆ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ತಾಯಿ ಒಬ್ಬರೇ ಇದ್ದರು ಎಂದು ಪೊಲೀಸರು ಹೇಳಿದ್ದರು.
ಪುತ್ರಿ ಬಂಧನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ತಾಯಿ, ಕಾನೂನು ತಜ್ಞರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಂಡು ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಇದನ್ನೂ ಓದಿ:ಗ್ರೇಟಾ ಥನ್ ಬರ್ಗ್ ಟೂಲ್ ಕಿಟ್ ವಿವಾದ: ಬೆಂಗಳೂರು ಯುವತಿಯನ್ನು ಬಂಧಿಸಿದ ದಿಲ್ಲಿ ಪೊಲೀಸರು
ಚಿಕ್ಕಬಾಣಾವಾರ ನಿವಾಸಿ ದಿಶಾ ಅವರನ್ನು ದೆಹಲಿ ಪೊಲೀಸರು ಬಂಧಿಸುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಕರಣದ ಹಿನ್ನೆಲೆ ಬಗ್ಗೆ ಮಾಹಿತಿ ಇಲ್ಲ.:- ಧರ್ಮೇಂದ್ರ ಕುಮಾರ್ ಮೀನಾ, ಉ.ವಿಭಾಗದ ಡಿಸಿಪಿ
ಯಾರೀ ದಿಶಾ ರವಿ?: ದಿಶಾ ರವಿ(21) ಅವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ಸಸ್ಯಾಧಾರಿತ ಆಹಾರ ತಯಾರಿಕಾ ಕಂಪನಿಯೊಂದರಲ್ಲಿ ಕ್ಯುಲಿನರಿ ಎಕ್ಸ್ಪೀರಿ ಯೆನ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಅವರಿಂದ ಪ್ರೇರಣೆ ಪಡೆದು, ಹವಾಮಾನ ವೈಪರೀತ್ಯದ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನೂ ದಿಶಾ ಮಾಡುತ್ತಿದ್ದರು. ಜತೆಗೆ, ವಿವಿಧ ಯುವಜನ ಆಧಾರಿತ ಪರಿಸರ ಸಂಘಟನೆಗಳಲ್ಲೂ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಪರಿಸರ ಸಂರಕ್ಷಣೆಗಾಗಿ ರೂಪಿಸಲ್ಪಟ್ಟ “ಫ್ರೈಡೆ ಫಾರ್ ಫ್ಯೂಚರ್’ ಎಂಬ ಕ್ಯಾಂಪೇನ್ನ ಸ್ಥಾಪಕರಲ್ಲಿ ದಿಶಾ ಕೂಡ ಒಬ್ಬರು.
ಇದನ್ನೂ ಓದಿ: ಟೂಲ್ಕಿಟ್ ಎಂದರೇನು?
ಕೋರ್ಟ್ನಲ್ಲಿ ಕಣ್ಣೀರಿಟ್ಟ ದಿಶಾ: ಭಾರತ ಸರ್ಕಾರದ ವಿರುದ್ಧದ ದೊಡ್ಡ ಸಂಚಿನಲ್ಲಿ ಆಕೆ ಭಾಗಿಯಾಗಿದ್ದು, ಖಲಿಸ್ತಾನಿ ಪ್ರತ್ಯೇಕತಾವಾದಿಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಸರ್ಕಾರಿ ವಕೀಲರು ಕೋರ್ಟ್ನಲ್ಲಿ ವಾದಿಸುತ್ತಿದ್ದಂತೆ, ದಿಶಾ ಕಣ್ಣೀರಿಟ್ಟಿದ್ದಾರೆ. “ನಾನು ಯಾವುದೇ ಸಂಚು ರೂಪಿಸಿಲ್ಲ, ಯಾವ ಸಂಚಿನ ಭಾಗವೂ ಆಗಿಲ್ಲ. ನನಗೆ ಅಂಥ ಯಾವುದೇ ಸಂಘಟನೆ ಗೊತ್ತಿಲ್ಲ. ರೈತರೇ ನಮ್ಮ ಭವಿಷ್ಯ. ಅವರು ನಮಗೆ ಅನ್ನ ನೀಡುವವರು ಎಂಬ ಕಾರಣಕ್ಕಾಗಿ ನಾನು ಕೇವಲ ಅನ್ನದಾತರಿಗೆ ಬೆಂಬಲ ನೀಡುತ್ತಿದ್ದೆ. ಆ ಟೂಲ್ಕಿಟ್ ಸೃಷ್ಟಿಸಿದ್ದು ನಾನಲ್ಲ. ನಾನು ಫೆ.3ರಂದು ಟೂಲ್ ಕಿಟ್ನಲ್ಲಿ ಎರಡು ತಿದ್ದುಪಡಿಗಳನ್ನು ತಂದಿದ್ದೆ ಅಷ್ಟೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್