ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ತೆರೆ
Team Udayavani, Jan 28, 2019, 6:36 AM IST
ಬೆಂಗಳೂರು: ಗಣರಾಜೋತ್ಸವ ಅಂಗವಾಗಿ ಲಾಲ್ಬಾಗ್ನಲ್ಲಿ ಹಮ್ಮಿಕೊಂಡಿದ್ದ 209ನೇ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿತ್ತು. ಮಹಾತ್ಮ ಗಾಂಧೀಜಿಯವರಿಗೆ ಸಮರ್ಪಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಭಾನುವಾರ 70,000ಕ್ಕೂ ಹೆಚ್ಚು ಮಂದಿ ಸೇರಿದಂತೆ 10 ದಿನ ಪ್ರದರ್ಶನವನ್ನು 4 ಲಕ್ಷ ಮಂದಿ ಕಣ್ತುಂಬಿಕೊಂಡಿದ್ದು, 1.5 ಕೋಟಿ ರೂ. ಸಂಗ್ರಹವಾಗಿದೆ.
ಭಾನುವಾರ ಕೊನೆಯ ದಿನವಾದ ಹಿನ್ನೆಲೆ ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಪುಷ್ಪ ಸೊಬಗನ್ನು ಸವಿದರು. ಉದ್ಯಾನದ ಗಾಜಿನ ಮನೆಯ ಸುತ್ತ ಮುತ್ತ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೂ ಜನಜಂಗುಳಿ ಕಂಡುಬಂತು.
ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಲಾಲ್ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ನಾಲ್ಕು ಪ್ರವೇಶ ದ್ವಾರಗಳ ಮುಂಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಜೆ ಪ್ರದರ್ಶನ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಸಾವಿರಾರು ಮಂದಿ ಒಮ್ಮೆಗೆ ಹೊರಗೆ ಬಂದಿದ್ದರಿಂದ ಆ ಸಂದರ್ಭದಲ್ಲಿ ಕೆಲಕಾಲ ದಟ್ಟಣೆ ಉಂಟಾಗಿತ್ತು. ಕೆ.ಎಚ್.ರಸ್ತೆ, ಲಾಲ್ಬಾಗ್ ಮುಖ್ಯದ್ವಾರ ಹಾಗೂ ಪಶ್ವಿಮ ದ್ವಾರದ ಬಳಿಯೂ ದಟ್ಟಣೆ ಕಂಡುಬಂತು.
ಒಂದೂವರೆ ಕೋಟಿ ಸಂಗ್ರಹ: ಕೊನೆಯ ದಿನವಾದ ಭಾನುವಾರ 78,150 ಮಂದಿ ಭೇಟಿ ನೀಡಿದ್ದರು. ಈ ಪೈಕಿ 55,500 ವಯಸ್ಕರು ಮತ್ತು 22,650 ಮಂದಿ ಮಕ್ಕಳು ಆಗಮಿಸಿದ್ದು, ಒಟ್ಟು 29.22 ಲಕ್ಷ ಹಣ ಸಂಗ್ರಹವಾಗಿದೆ. ಜ.18 ರಿಂದ 27ರವರೆಗೆ ಒಟ್ಟಾರೆ 4.02 ಲಕ್ಷಕ್ಕೂ ಅಧಿಕ ಮಂದಿ (2.64 ಲಕ್ಷ ಮಂದಿ ವಯಸ್ಕರು, 1.38 ಲಕ್ಷಕ್ಕೂ ಹೆಚ್ಚು ಮಕ್ಕಳು) ಭೇಟಿ ನೀಡಿದ್ದು, 1.55 ಕೋಟಿ ಹಣ ಸಂಗ್ರಹವಾಗಿದೆ. ಈ ಬಾರಿಯ ಪ್ರದರ್ಶನಕ್ಕೆ ಒಟ್ಟಾರೆ 1.8 ಕೋಟಿ. ರೂ. ವೆಚ್ಚವಾಗಿದೆ ಎಂದು ಲಾಲ್ಬಾಗ್ ಉದ್ಯಾನ ಉಪನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ಗಣ್ಯರ ಭೇಟಿ: ಕೊನೆಯ ದಿನದ ಪ್ರದರ್ಶನಕ್ಕೆ ರಾಷ್ಟ್ರೀಯ ಗಾಂಧಿ ಸ್ಮಾರಕ ಅಧ್ಯಕ್ಷ ಅಣ್ಣಾಮಲೈ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಭೇಟಿ ನೀಡಿದ್ದರು. ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿದ ಅಣ್ಣಾಮಲೈ, ಈ ಬಾರಿಯ ಫಲಪುಷ್ಪ ಪ್ರದರ್ಶನ ಗಾಂಧೀಜಿಗೆ ಅರ್ಹ ಸಮರ್ಪಣೆಯಾಗಿದೆ. ನಾನು ಕೂಡಾ ದೇಶಾದ್ಯಂತ ಓಡಾಡಿದ್ದೇನೆೆ. ಆದರೆ, ಗಾಂಧಿಯನ್ನು ನೆನಪಿಸುವ ಇಂತಹ ಪುಷ್ಪ ನಮನ ಕಂಡಿಲ್ಲ. ವ್ಯವಸ್ಥಿತ ಹಾಗೂ ಆಕರ್ಷಕ ಪ್ರದರ್ಶನಕ್ಕೆ ಕರ್ನಾಟಕ ಜನತೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಷ್ಟ್ರೀಯ ಗಾಂಧಿ ಮ್ಯೂಸಿಯಂನಿಂದ ಗಾಂಧೀಜಿಯವರಿಗೆ ಸಂಬಂಧಿಸಿದ ವಸ್ತುಗಳನ್ನು ವಿಶ್ವದಾದ್ಯಂತ ಸಾಕಷ್ಟು ಜನರಿಗೆ ನೀಡಲಾಗಿದೆ. ಆದರೆ, ಇಲ್ಲಿ ಅವುಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಇಲ್ಲಿರುವ ಕಲಾಕೃತಿಗಳಲ್ಲಿ ಸಬರಮತಿ ಆಶ್ರಮ ಹಾಗೂ ಸೇವಾ ಗ್ರಾಮ ಆಶ್ರಮ ಮಾದರಿ ಕಲಾಕೃತಿಗಳು ನಿಜಕ್ಕೂ ಉತ್ತಮವಾಗಿದ್ದು, ಒಟ್ಟಾರೆ, ಈ ಫಲಪುಷ್ಪ ಪ್ರದರ್ಶನವು ಗಾಂಧಿ ಕುರಿತಾದ ಶಿಕ್ಷಣವನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾ ಸಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಈ ಬಾರಿಯ ಪ್ರದರ್ಶನದ ಕಲಾಕೃತಿಗಳು, ಗಾಂಧೀಜಿ ಸಂದೇಶಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ಸಹಕಾರಿಯಾಗಿವೆ. ಲಕ್ಷಾಂತರ ಜನರಿಗೆ ಗಾಂಧೀಜಿ ಬದುಕನ್ನು ಹೂಗಳ ಮೂಲಕ ತೆರೆದಿಡುವ ಕೆಲಸ ಮಾಡಿರುವುದಕ್ಕೆ ತೋಟಗಾರಿಕೆ ಇಲಾಖೆಗೆ ಅಭಿನಂದನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ