ಓಟ್ ಮಾಡಿದವರಿಗೆ ಕಾಫಿ, ಟೀ ಫ್ರೀ!
Team Udayavani, Apr 18, 2019, 3:00 AM IST
ಕೆಂಗೇರಿ: ಓಟ್ ಮಾಡಿ, ಆಹಾರದ ಬೆಲೆಯಲ್ಲಿ ರಿಯಾಯಿತಿ ಪಡೆಯಿರಿ! ಇದು ಕೆಂಗೇರಿ ಉಪನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಕೃಷ್ಣ ಗ್ರಾಂಡ್ ಹೋಟೆಲ್ ಮಾಲೀಕರು ಮತದಾನ ಪ್ರಮಾಣ ಹೆಚ್ಚಳಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು ನೀಡಿರುವ ಆಫರ್.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ (ಇಂದು) ನಡೆಯುತ್ತಿದ್ದು, ಓಟ್ ಹಾಕಿದ ಮತದಾರರು ಹೋಟೆಲ್ಗೆ ಬಂದು ಶಾಯಿಯ ಗುರುತು ತೋರಿಸಿದರೆ, ಕಾಫಿ, ಚಹಾ ಉಚಿತವಾಗು ನೀಡಲಾಗುತ್ತದೆ. ಅಲ್ಲದೆ, ತಿಂಡಿ, ಊಟದ ದರದಲ್ಲಿ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಹೋಟೆಲ್ ಮಾಲೀಕ ಪ್ರತಾಪ್ ಶೆಟ್ಟಿ ತಿಳಿಸಿದ್ದಾರೆ.
ಹೋಟೆಲ್ ಪ್ರಾರಂಭವಾದ ದಿನದಿಂದಲೂ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವಿಕಲಚೇತನರಿಗೆ ಶೇ.5ರಷ್ಟು ಹಾಗೂ ಮಾಜಿ ಯೋಧರಿಗೆ ಶೇ.10ರಷ್ಟು ರಿಯಾಯಿತಿ ನೀಡುತ್ತಿರುವುದು ಶ್ರೀ ಕೃಷ್ಣ ಗ್ರಾಂಡ್ ಹೋಟೆಲ್ನ ವಿಶೇಷ.
“ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ಸರ್ಕಾರ ರಚನೆಗಾಗಿ ಮತದಾನದ ಹಕ್ಕು ಚಲಾಯಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಮತದಾನಕ್ಕೆ ಪ್ರೋತ್ಸಾಹ ನೀಡಲು ಈ ಕೊಡುಗೆ ನೀಡುತ್ತಿದ್ದೇವೆ,’ ಎನ್ನುತ್ತಾರೆ ಹೋಟೆಲ್ ಮಾಲೀಕ ಪ್ರತಾಪ್ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ