ಭೂ ಪರಿಹಾರಕ್ಕೆ ಗಿಡಗಳನ್ನು ಪರಿಗಣಿಸಿ
Team Udayavani, Mar 2, 2019, 6:09 AM IST
ಬೆಂಗಳೂರು: ಭೂಸ್ವಾಧೀನ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ಆ ಜಮೀನಿನಲ್ಲಿ ಬೆಳೆದ ಮರ, ಗಿಡ ಹಾಗೂ ಬೆಳೆಯನ್ನು ಪರಿಗಣಿಸಬೇಕು. ಭೂಮಿ ಪದದ ಅರ್ಥವನ್ನು ಸಂಕುಚಿತವಾಗಿ ವ್ಯಾಖ್ಯಾನಿಸದೇ ವಿಶಾಲ ಅರ್ಥದಲ್ಲಿ ನೋಡಬೇಕು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮಕ್ಕೆ (ಕೆಐಎಡಿಬಿ) ಹೈಕೋರ್ಟ್ ಹೇಳಿದೆ.
ಭೂಸ್ವಾಧೀನಕ್ಕೆ ಪರಿಹಾರ ನೀಡುವಾಗ ತಮ್ಮ ತಮ್ಮ ಜಮೀನಿನಲ್ಲಿ ಬೆಳೆದ ಗಿಡ-ಮರಗಳ ಬೆಲೆಯನ್ನು ಪರಿಗಣಿಸಿಲ್ಲ ಎಂದು ದೂರು ತುಮಕೂರು ಜಿಲ್ಲೆಯ ಯಲೆದಡ್ಲು ಗ್ರಾಮದ ನಿವಾಸಿಗಳು ಸಲ್ಲಿಸಿದ ಅರ್ಜಿ ವಿಚಾರಣೆಯನ್ನುನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.
ಜಮೀನಿನಲ್ಲಿ ಇರುವ ಮರ, ಗಿಡ ಮತ್ತು ಬೆಳೆಯನ್ನು ಪರಿಗಣಿಸಿ ಪರಿಹಾರವನ್ನು ನಿಗದಿಪಡಿಸಿ ಪಾವತಿಸಬೇಕು. ಅದರಂತೆ, ಅರ್ಜಿದಾರರಲ್ಲಿ ಜಮೀನಿನಲ್ಲಿರುವ ನೀಲಗಿರಿ, ಅಕೇಶಿಯಾ ಮತ್ತು ಉರುವಲಿಗೆ ಬಳಸುವ ಇತರೆ ಮರಗಳನ್ನು ಗಣನೆಗೆ ತೆಗೆದುಕೊಂಡು ಮೂರು ತಿಂಗಳಲ್ಲಿ ಪರಿಹಾರ ನೀಡಬೇಕು ಎಂದು ಕೆಐಎಡಿಬಿಗೆ ನಿರ್ದೇಶನ ನೀಡಿ ನ್ಯಾಯಪೀಠ ಆದೇಶಿತು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯಿದೆ ಸೆಕ್ಷನ್ 2(11)ರಲ್ಲಿ ಭೂಮಿಯ ವ್ಯಾಖ್ಯಾನವನ್ನು ಪರಿಗಣಿಸಿರುವುದು, ಭೂ ಸ್ವಾಧೀನ ಕಾಯಿದೆ 1894(ಈಗ ತಿದ್ದುಪಡಿ ಮಾಡಲಾಗಿದೆ). ಅದರಲ್ಲಿ ಭೂಮಿಯಿಂದ ಬರುವ ಎಲ್ಲ ಸವಲತ್ತು ಅಥವಾ ಪ್ರಯೋಜನಗಳನ್ನು ಉಲ್ಲೇಖೀಸಲಾಗಿದೆ. ಹಾಗಾಗಿ ಮರಗಳನ್ನೂ ಸಹ ಪರಿಹಾರಕ್ಕೆ ಪರಿಗಣಿಸಲೇಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಕೆಐಎಡಿಬಿ 2001ರ ಜು.19ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ನೀಲಗಿರಿ, ಅಕೇಶಿಯಾ ಮತ್ತಿತರ ಸೌದೆ ಮರಗಳನ್ನು ಪರಿಹಾರಕ್ಕೆ ಪರಿಗಣಿಸಬಾರದೆಂದು ಹೇಳಲಾಗಿದೆ. ಆದ್ದರಿಂದ ಆ ಮರಗಳನ್ನು ಪರಿಹಾರಕ್ಕೆ ಪರಿಗಣಿಸಲು ಸಾಧ್ಯವಿಲ್ಲ. ಆದರೆ ಅರ್ಜಿದಾರರಿಗೆ ತಾವೇ ಮರಗಳನ್ನು ತೆರವುಗೊಳಿಸಲು ಅವಕಾಶ ನೀಡಲಾಗುವುದೆಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ