ವಿಚ್ಛೇದನದಿಂದ ದೂರಾದ ಮಕ್ಕಳ ಹಕ್ಕಿಗಾಗಿ ಧರಣಿ
Team Udayavani, Jun 16, 2019, 3:05 AM IST
ಬೆಂಗಳೂರು: ಪೋಷಕರ ವಿಚ್ಛೇದನದಿಂದ ದೂರವಾಗುವ ಮಕ್ಕಳ ಸಮಾನ ಪೋಷಣೆ ಹಕ್ಕಿನ ಕಾನೂನನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ಕ್ರಿಸ್ಪ ಸಂಸ್ಥೆಯ ನೇತೃತ್ವದಲ್ಲಿ ಟೌನ್ಹಾಲ್ನ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಹಲವು ಮಕ್ಕಳು ಅಪ್ಪ ಬೇಕು, ನಮಗೆ ಅಪ್ಪಬೇಕು ಎಂದು ಘೋಷಣೆ ಕೂಗಿದರು. ವಿಚ್ಛೇದನದಿಂದ ಮಕ್ಕಳಿಂದ ದೂರವಾಗಿರುವ ತಂದೆಯಾದವರು ಸಮಾನ ಪೋಷಣೆ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ರಿಸ್ಪ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಕುಮಾರ್ ಜಹಗೀದಾರ್, ಪೋಷಕ ಇಚ್ಛಾಶಕ್ತಿ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಾರದು. ಮಕ್ಕಳಿಗೆ ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯೂ ಸಮಾನವಾಗಿರಬೇಕು. ಮಕ್ಕಳಿಗೆ ತಾಯಿಯಷ್ಟೇ ತಂದೆಯ ಪ್ರೀತಿಯೂ ಮುಖ್ಯ.
ಈಗಿರುವ ಕಾನೂನಿನಲ್ಲಿ ತಂದೆಯನ್ನು ಆರೋಪಿಯಂತೆ ಬಿಂಬಿಸಲಾಗುತ್ತಿದೆ. ತಾಯಿಯ ಸುರ್ಪದಿಯಲ್ಲೇ ಬೆಳೆಯುವ ಮಕ್ಕಳಲ್ಲಿ ತಂದೆಯ ಬಗ್ಗೆ ಉದ್ದೇಶ ಪೂರ್ವಕವಾಗಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಇದು ನಿಲ್ಲಬೇಕಾದರೆ ಕಾನೂನಿನಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಹರ್ಷ ಸ್ವರೂಪ್ ಮಾತನಾಡಿ, ವಿಚ್ಛೇದನವಾದಾಗ ಮಕ್ಕಳ ಸಮಾನ ಪೋಷಣೆಗೆ ಅವಕಾಶ ನೀಡಬೇಕು. ಮಕ್ಕಳು ಹಾಗೂ ಮಹಿಳಾ ಸಚಿವಾಲಯವನ್ನು ವಿಭಜಿಸಿ ಮಕ್ಕಳಿಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಬೇಕು.
ಕೆಲವರು ಉದ್ದೇಶಪೂರ್ವಕವಾಗಿ ವರದಕ್ಷಣೆ, ವೈವಾಹಿಕ ದೌರ್ಜನ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದು ನಿಲ್ಲಬೇಕು ಎಂದು ಆಗ್ರಹಿಸಿದರು. ವಿಚ್ಛೇದನಪಡೆದು ಮಕ್ಕಳಿಂದ ದೂರವಾಗಿರುವ ಪೋಷಕರು(ತಂದೆ) ಅನಾಥ ಮಕ್ಕಳೊಂದಿಗೆ ಫಾದರ್ಸ್ ಡೇ ಆಚರಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ