ಮುಂದುವರಿದ ಕಾರ್ಯಕರ್ತೆಯರ ಪ್ರತಿಭಟನೆ


Team Udayavani, Feb 8, 2018, 1:18 PM IST

blore-5.jpg

ಬೆಂಗಳೂರು: “ಮನೀ ಬಿಟ್ಟು ಮೂರ್‌ ದಿನ ಆಯ್ತು. ಹೊಟ್ಟಿಗೆ ಹಿಟ್ಟಿಲ್ಲ. ಶೌಚಾಲಯಕ್ಕೆ ಹೋಗಾಕ ಸರಿಯಾದ ಜಾಗ ಇಲ್ಲ. ಮನೆಯಿಂದ ತಂದಿದ್ದ ರೊಟ್ಟಿ, ಚೆಟ್ನಿ ಖಾಲಿಯಾಗ್ಯಾವು. ನಿನ್ನೆ ರಾತ್ರಿಯಿಂದ ಹೊಟ್ಟಿàಗೆ ಹಿಟ್ಟಿಲ್ದ ಕಳ್ಳು ಚುರುಕ್‌ ಅಂತೈತಿ. ಸಾಕಾಗಿ ಹೋಗೈತ್ರೀ ಈ ಜೀವನ. ಸರ್ಕಾರದೋವ್ರು ಯಾರಾದ್ರು ಬಂದ್‌ ನಾಲ್ಕೈದು ಕಾಸು (ನಾನೂರು, ಐದುನೂರು) ಹೆಚ್ಚಿಗಿ ಕೋಡ್ತೀವಿ ಅಂತ ಹೇಳಿದ್ರೆ ಸಾಕು. ನಾವ್‌, ನಂಪಾಡಿಗೆ ನಮ್ಮೂರ್‌ ಕಡೆ ಹೊಕ್ಕೀವ್ರಿ ಇದು ಪ್ರತಿಭಟನಾ ನಿರತ ಬಿಸಿಯೂಟ ಕಾರ್ಯಕರ್ತೆ ನಾಗಮ್ಮ ಅವರ ಅಳಲು.

ಕೊರೆಯುವ ಚಳಿಯಲ್ಲಿಯೇ ಮಂಗಳವಾರ ಬೀದಿಯಲ್ಲಿ ರಾತ್ರಿ ಕಳೆದಿದ್ದ ನಾಗಮ್ಮನಿಗೆ ಒಂದು ಕಡೆ ಊಟ ಇಲ್ಲದೆ ಹೊಟ್ಟೆ ತಡಬಡಿಸುತ್ತಿತ್ತು. ಯಾರಾದ್ರೂ ಊಟ ಕೊಟ್ರೇ ಸಾಕಿತ್ತು ಎಂಬ ಮನಸ್ಥಿತಿ ಅವರದಾಗಿತ್ತು. ಫ್ರೀಡಂ ಪಾರ್ಕ್‌ ಮುಂಭಾಗದಲ್ಲಿ ಬೆಳಗ್ಗೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಹ ನಟಿಯೊಬ್ಬರು ಊಟ ನೀಡಿದಾಗ ಅವರ ಆ ಖುಷಿಗೆ ಪಾರವೇ ಇರಲಿಲ್ಲ.

ಈ ಪರಿಸ್ಥಿತಿ ಎಲ್ಲರದ್ದೂ ಆಗಿದೆ. ರಾತ್ರಿ ನಿದ್ರೆ ಇಲ್ಲದೆ, ರಸ್ತೆ ಮಧ್ಯೆ ಹಾಗೂ ಇಕ್ಕೆಲಗಳಲ್ಲಿ ತಾವು ತಂದಿದ್ದ ಕೈಚೀಲಗಳನ್ನೇ ದಿಂಬುಗಳನ್ನಾಗಿ ಮಾಡಿಕೊಂಡು ಮಲಗಿದ್ದ ಮಹಿಳೆಯರು ಊಟ, ನೀರಿಗಾಗಿ ಪರಿತಪ್ಪಿಸುತ್ತಿದ್ದ ಪರಿಸ್ಥಿತಿ ನೋವಿನಿಂದ ಕೂಡಿತ್ತು. ತಮ್ಮ ಬೇಡಿಕೆಗೆ ಸ್ಪಂದಿಸಲು ಮಂತ್ರಿಗಳು, ಸರ್ಕಾರದ ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಿದ್ದರು ಕುಸಿದು ಬಿದ್ದ ಮಹಿಳೆ
ಅನಿರ್ಧಿಷ್ಟಾವಧಿಯ ಅಹೋರಾತ್ರಿ ಹೋರಾಟದಲ್ಲಿ ರಾಜ್ಯದ ನಾಲ್ಕೂ ಮೂಲೆಗಳಿಂದ ಬಿಸಿಯೂಟ ತಯಾರಕರು ಪಾಲ್ಗೊಂಡಿ 
ದ್ದಾರೆ. ಸರಿಯಾಗಿ ಅನ್ನ, ನಿದ್ರೆ ಇಲ್ಲದೆ ಅವರೆಲ್ಲಾ ನಿತ್ರಾಣಗೊಂಡಿದ್ದಾರೆ. ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ
ರಾಣೆಬೆನ್ನೂರಿನ ಸುನಂದಾ ಎಂಬುವರು ಬುಧವಾರ ಸ್ಥಳದಲ್ಲಿಯೇ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಅವರನ್ನು
ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ನೆರವಾದರು.

ನಾವೆಲ್ಲರೂ ದೂರದೂರುಗಳಿಂದ ಬಂದಿದ್ದೇವೆ. ಸಿಎಂ ಮತ್ತು ಶಿಕ್ಷಣ ಸಚಿವ ತನ್ವೀರ್‌ ಸೇಠ್… ಧರಣಿ ನಿರತ ಸ್ಥಳಕ್ಕೆ ಬರಬೇಕು.
ಅವರು ಬಂದು ನಮ್ಮ ದುಮ್ಮಾನಗಳನ್ನು ಕೇಳುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ.
ಶೈಲಜಾ, ತೀರ್ಥಹಳ್ಳಿ ನಿವಾಸಿ.

ಈ ಹಿಂದೆ ತನ್ವೀರ್‌ ಸೇಠ್ಠ್… ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಸಿಯೂಟ ತಯಾರ ಕರಿಗೆ 3 ಸಾವಿರ ರೂ. ಹೆಚ್ಚುವರಿಯಾಗಿ ನೀಡುವ ಭರವಸೆ ನೀಡಿದ್ದರು. ಆದರೆ, ಸರ್ಕಾರ ಕ್ರಮ ಕೈಗೊಂಡಿಲ್ಲ. ಕೇಂದ್ರವೂ ನಮ್ಮನ್ನು ಕಡೆಗಣಿಸಿದೆ. ವೇತನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವು ಭಾರಿ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಈ ಬಗ್ಗೆ ಮುಂದೆ ಸರ್ಕಾರದ ವಿರುದ್ದ ಹೋರಾಟ ರೂಪಿಸಲಾಗುವುದು.
ಹೊನ್ನಪ್ಪ ಮರೇಮ್ಮನವರ, ಬಿಸಿಯೂಟ ತಯಾರಕರ ಫೆಡರೇಷನ್‌ನ ರಾಜ್ಯ ಸಮಿತಿ ಅಧ್ಯಕ್ಷ

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.