ಸಿದ್ದು ಜಾರಿಗೊಳಿಸಿದ ಯೋಜನೆ ಮುಂದುವರಿಕೆ
Team Udayavani, Aug 10, 2018, 7:00 AM IST
ಬೆಂಗಳೂರು: ಶಾದಿಭಾಗ್ಯ, ಮಾತೃಪೂರ್ಣ ಸೇರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ ಎಲ್ಲ ಯೋಜನೆಗಳೂ ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರಿಯಲಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಅನ್ನಭಾಗ್ಯದಡಿ ಅಕ್ಕಿ ವಿತರಣೆ ಸೇರಿ ಎಲ್ಲ ಗೊಂದಲಗಳೂ ಬಗೆಹರಿದಿದ್ದು
ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳೂ ಮುಂದುವರಿಯಲಿವೆ ಎಂದು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಯಾವುದೇ ಯೋಜನೆಗೆ ಅನುದಾನ ಕಡಿತ ಮಾಡಿಲ್ಲ ಎಂದು ಹೇಳಿದ್ದಾರೆ. ಶಾದಿಭಾಗ್ಯ
ಯೋಜನೆ ಅನುದಾನ ಕಡಿತ ಆಗಿಲ್ಲ. 2013-14ರಲ್ಲಿ 10 ಕೋಟಿ ರೂ. ನೀಡಲಾಗಿತ್ತು. 2014-15 ರಲ್ಲಿ 38ಕೋಟಿ ರೂ. ನೀಡಲಾಯಿತು. 2016-17ರಲ್ಲಿ 137 ಕೋಟಿ ರೂ. ನೀಡಲಾಗಿತ್ತು. ಆಗ ಹೆಚ್ಚು ಅರ್ಜಿ ಬಂದಿದ್ದರಿಂದ ಹೆಚ್ಚು
ಅನುದಾನ ದೊರೆತಿತ್ತು. ಹೀಗಾಗಿ, ಕಡಿತ ಪ್ರಶ್ನೆಯಿಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ