ನಿರಂತರ ಕಾಮಗಾರಿ ಪ್ರಗತಿಯಲ್ಲಿದೆ!
Team Udayavani, Jul 12, 2019, 7:50 AM IST
ಚಿತ್ರಗಳು: ಅಕ್ರಂ ಚೌಧುರಿ
ಬೆಂಗಳೂರು: ಇವು ದುರಸ್ತಿ ರಸ್ತೆಗಳು. ಇಲ್ಲಿ ಸದಾ ಒಂದರ ಹಿಂದೊಂದು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇದರ ಬಿಸಿ ಆ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತಟ್ಟುತ್ತಿದೆ. ಸಂಚಾರದಟ್ಟಣೆ, ಅಪಘಾತಗಳ ಸರಣಿ, ವಾಯು ಮಾಲಿನ್ಯ ಇಲ್ಲಿ, ಉಳಿದ ರಸ್ತೆಗಳಿಗಿಂತ ಹೆಚ್ಚಾಗಿರುತ್ತದೆ.
ಸಜ್ಜನ ರಾವ್ ವೃತ್ತ, ಜೆ.ಸಿ ರಸ್ತೆ, ಆಂಜನೇಯಸ್ವಾಮಿ ಮತ್ತು ವಾಸವಿ ದೇವಸ್ಥಾನದ ರಸ್ತೆಗಳಲ್ಲಿ ವೈಟ್ ಟಾಪಿಂಗ್, ಕೇಬಲ್, ಒಳಚರಂಡಿ ಪೈಪ್ಲೈನ್ ಅಳವಡಿಕೆ ಸೇರಿ ‘ಕಾಮಗಾರಿ ಪ್ರಗತಿಯಲ್ಲಿದೆ’ ಎಂಬ ಫಲಕಗಳು ಎದುರಾಗುತ್ತವೆ. ಇವೆಲ್ಲವೂ ಬಂದು ಸೇರುವುದು ಸಜ್ಜನ್ರಾವ್ ವೃತ್ತದ ರಸ್ತೆಗೆ. ಈ ಮಧ್ಯೆ ರಸ್ತೆಗಿಳಿದು ವಾಹನ ಸವಾರರನ್ನು ಆಮಂತ್ರಿಸುವ ವ್ಯಾಪಾರಿಗಳ ಕಿರಿಕಿರಿ ಬೇರೆ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿಗಳು ಈ ಮಾರ್ಗದಲ್ಲೇ ಹಾದುಹೋಗುತ್ತಾರೆ. ಒಮ್ಮೆ ರಸ್ತೆ ಬದಿ ಕಣ್ಣು ಹಾಯಿಸಿದರೆ, ಚಿತ್ರಣ ಬದಲಾಗಬಹುದು. ಆದರೆ, ಈ ಪ್ರಯತ್ನ ಇದುವರೆಗೆ ಆಗಿಲ್ಲ.
ಫುಟ್ಪಾತ್ ಮಾಯ: ಸಜ್ಜನ ರಾವ್ ಸರ್ಕಲ್ ರಸ್ತೆಯ ಕಾಮಗಾರಿಯನ್ನು ಕಳೆದ ವರ್ಷ ಪ್ರಾರಂಭಿಸಲಾಗಿತ್ತು. ಈ ಹಿಂದೆ ರಸ್ತೆಗಳಲ್ಲಿ ಹಲವು ಹಂತದ ಕಾಮಾಗಾರಿಗಳು ನಡೆದಿದ್ದವು. ವೈಟ್ ಟಾಪಿಂಗ್ ಮುಗಿದ ಮೇಲಾದರೂ ಪರಿಹಾರ ಸಿಗಲಿದೆ ಎಂದು ಜನ ನಿರೀಕ್ಷೆಯಲ್ಲಿದ್ದರು. ಆದರೆ, ಈ ಕಾಮಗಾರಿ ಪ್ರಾರಂಭವಾದ ನಂತರ, ಅಲ್ಲಿದ್ದ ಪಾದಚಾರಿ ಮಾರ್ಗವೂ ಮಾಯವಾಗಿದೆ.
ಅಂದಹಾಗೆ ಬಸಪ್ಪ ಸರ್ಕಲ್ನಿಂದ ಬನಶಂಕರಿ ಬಸ್ ನಿಲ್ದಾಣದವರೆಗೆ 4.55 ಕಿ.ಮೀ. ರಸ್ತೆಯ ಎರಡನೇ ಹಂತದ ವೈಟ್ ಟಾಪಿಂಗ್ನಲ್ಲಿ ಸಜ್ಜನ ರಾವ್ ವೃತ್ತದ ರಸ್ತೆ ಸಹ ಸೇರಿದೆ. ವೈಟ್ ಟಾಪಿಂಗ್ ಕಾಮಗಾರಿಗೆ ಒಂದು ಕಿ.ಮೀ.ಗೆ 7ರಿಂದ 8 ಕೋಟಿ ರೂ. ವೆಚ್ಚವಾಗುತ್ತದೆ. ಈ ರಸ್ತೆಗಳ ಎರಡೂ ಬದಿಯಲ್ಲಿ 1.2 ಅಥವಾ 1.5 ಮೀಟರ್ ಪಾದಚಾರಿ ಮಾರ್ಗವನ್ನು ಆಯಾ ರಸ್ತೆಗಳ ವಿಸ್ರ್ತೀಣಕ್ಕೆ ಅನುಗುಣವಾಗಿ ಬಿಡಲಾಗುತ್ತದೆ. ಸಜ್ಜನ ರಾವ್ ಸರ್ಕಲ್ನಲ್ಲಿ ಇದು ತದ್ವಿರುದ್ಧ. ಇಲ್ಲಿ ಪಾದಚಾರಿಗಳು ವಾಹನ ಸವಾರರೊಂದಿಗೆ ಪೈಪೋಟಿಗಿಳಿಯುತ್ತಾರೆ.
ಕಳೆದ ಒಂದು ವರ್ಷದಿಂದ ವೈಟ್ ಟಾಪಿಂಗ್ ಮತ್ತು ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಗಳಿಗೆ ರಸ್ತೆಯನ್ನು ಅಗೆಯುವ, ಮುಚ್ಚುವ ಪ್ರಹಸನಗಳ ನಡುವೆ ಸಾರ್ವಜನಿಕರು ಹೈರಾಣಾಗುತ್ತಿ ದ್ದಾರೆ. ಪುರಭವನ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್ ಮತ್ತು ಎಂ.ಜಿ. ರಸ್ತೆಗಳಿಗೆ ಹೋಗುವವರು ಬಹುತೇಕ ಇದೇ ಮಾರ್ಗವನ್ನು ಬಳಸುತ್ತಾರೆ. ಹೀಗಾಗಿ, ಕಾಮಗಾರಿ ಪ್ರಗತಿ ಮಂದಗತಿಯಲ್ಲಿ ಸಾಗುವುದರಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
- ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ