ಕೊರೊನಾ ಮುಕ್ತ ತಾಲೂಕು ನಮ್ಮ ಗುರಿ
Team Udayavani, May 29, 2021, 5:16 PM IST
ಅನೇಕ ಸಭೆಗಳನ್ನು ಮಾಡಿ ತಾಲೂಕ ಅನ್ನು ಕೊರೊನಾಮುಕ್ತ ತಾಲೂಕು ಮಾಡುವುದೇ ನಮ್ಮ ಗುರಿಯಾಗಿದೆ.ಇದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ,ಪಂಚಾಯಿತಿ ಅಧಿಕಾರಿಗಳ ಸಭೆ ಕರೆದು ಕೊರೊನಾಕಡಿವಾಣಕ್ಕೆ ಸಭೆ ನಡೆಸಲಾಗುತ್ತಿದೆ.
ತಾನುಸೋಂಕಿತನಾಗಿದ್ದಾಗಲೂ ವರ್ಚುಯಲ್ ಸಭೆಗಳಮೂಲಕ ಸೋಂಕಿತರ ರಕ್ಷಣೆ ಶ್ರಮಿಸಲಾಗಿದೆ ಎಂದುಶಾಸಕ ಎಲ್. ಎನ್. ನಾರಾಯಣಸ್ವಾಮಿ ಉಯವಾಣಿಕಿರು ಸಂದರ್ಶನದಲ್ಲಿ ಹಂಚಿಕೊಂಡರು.
ಕೊರೊನಾ ಪರಿಸ್ಥಿತಿ ನಿಮ್ಮ ಕ್ಷೇತ್ರದಲ್ಲಿ ಹೇಗಿದೆ?
ದೇವನಹಳ್ಳಿ ಕ್ಷೇತ್ರದಲ್ಲಿ ಬೆಂಗಳೂರಿಗೆಹತ್ತಿರವಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿಇರುವವರಿಗೆ ಹೆಚ್ಚಿನ ಹಾಸಿಗೆಗಳು ಆಕಾಶ್ ಇನ್ನಿತರೆಆಸ್ಪತ್ರೆಗಳಲ್ಲಿ ದೊರೆಯುತ್ತಿದೆ. ಆದರೂ ಜನರುದೂರವಾಣಿ ಮೂಲಕ ಹಾಸಿಗೆಗಳನ್ನು ಕೊಡಿಸಿಎಂದಾಗ ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆ ಕೊಡಿಸುವಕೆಲಸ ಮಾಡಲಾಗಿದೆ. ತಾಲೂಕಿನಲ್ಲಿ ಕೊರೊನಾಪ್ರಕರಣಗಳು ಹೆಚ್ಚಾಗಿತ್ತು. ತಕ್ಷಣ ಅಧಿಕಾರಿಗಳ ಸಭೆಕರೆದು ಎಲ್ಲಿ ಎಡವಿದ್ದೇವೆಂದು ಮಾಹಿತಿ ಪಡೆದುಅಗತ್ಯ ಕ್ರಮಗಳನ್ನು ರೂಪಿಸಲಾಗಿದೆ.
ಕೋವಿಡ್ ವಿಚಾರದಲ್ಲಿ ನಿಮ್ಮ ಕೊಡಿಗೆ ಏನು ?
ಶಾಸಕರಾಗಿ ಸೋಂಕಿತರಿಗೆ ಅಗತ್ಯವಾದ ಸೌಲಭ್ಯಗಳನ್ನುಕಲ್ಪಿಸುವುದು ನಮ್ಮ ಜವಾಬ್ದಾರಿ ಯಾಗಿದೆ. ಕೋವಿಡ್ನಿರ್ವಹಣೆಗೆ ಶಾಸಕರ ನಿಧಿಯಿಂದ 50 ಲಕ್ಷ ವನ್ನುನೀಡಲಾಗುತ್ತಿದೆ. ಈಗಾಗಲೇ ಸಂಘ ಸಂಸ್ಥೆಗಳುಒಂದಲ್ಲ ಒಂದು ರೀತಿ ಸಹಕಾರ ನೀಡುತ್ತಿದ್ದಾರೆ.ವೈದ್ಯರು ಸಲಹೆ ಸ್ವೀಕರಿಸಿ ಗುಣಮುಖರಾಗಬೇಕು.
ಸೋಂಕಿಗೆ ತತ್ತಾಗಿ ಕೊರೊನಾ ನಿರ್ವಹಿಸಿದ್ದು ಹೇಗೆ ?
– ಕೊವಿಡ್ನಿಂದ ನಾನು, ಮನೆ ಪೂರ್ತಿಸೋಂಕಿತರಾಗಿದ್ದೆವು, ಆರೋಗ್ಯದಲ್ಲಿ ಏರುಪೇರಾದಾಗವೈದ್ಯರು ಸಮಯಕ್ಕೆ ಸರಿಯಾಗಿ ನೆರವಾದರು. ಅಗತ್ಯಚಿಕಿತ್ಸೆ ಮೂಲಕ ಮನೆ ಮಂದಿಯೆಲ್ಲರೂ ಚೇತರಿಕೆಕಂಡು ಹೊರಬಂದೆವು. ಆಸ್ಪತ್ರೆಯಲ್ಲಿದ್ದರೂ ಸಹಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿರೋಗಿಗಳಿಗೆ ತೊಂದರೆ ಆಗದಂತೆನೋಡಿಕೊಳ್ಳಲಾಗಿತ್ತು.
ಕೇರ್ ಸೆಂಟರ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಾ?
ಬೈರಾಪುರ ಮತ್ತು ಕುಂದಾಣ ಗಳಲ್ಲಿ ಕೋವಿಡ್ಕೇರ್ ಸೆಂಟರ್ ಪ್ರಾರಂಭವಾಗಿದೆ. ಪ್ರತಿ ದಿನಅಧಿಕಾರಿಗಳ ಜೊತೆ ಸಂಪರ್ಕವಿದ್ದು ಕೊರೊನಾಕಡಿವಾಣ ಹಾಕಲು ಸಲಹೆ ಮಾರ್ಗದರ್ಶವನ್ನುನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಹಳ್ಳಿಗಳಲ್ಲಿಕೊರೊನಾ ಪರೀಕ್ಷೆ ಮಾಡಿಸುತ್ತಿರುವುದರಿಂದಗ್ರಾಮಗಳಲ್ಲಿ ಸೋಂಕು ತಡೆಗಟ್ಟಲು ಸಾಧ್ಯವಾಗುತ್ತಿದೆ.ಗ್ರಾಮೀಣ ಭಾಗದಲ್ಲಿ ಹೋಂ ಐಸೋಲೇಷನಲ್ಲಿರುವರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ಮನಒದಲಿಸುವಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳಿಗೆ ಸೂಚಿಸಲಾಗಿದೆ.
ಎಸ್. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು