ಸರ್ಕಾರ ಸತ್ಯಾಂಶ ಮುಂದಿಡಲಿ
Team Udayavani, May 17, 2021, 11:44 AM IST
ಬೆಂಗಳೂರು: ಕೋವಿಡ್ ಪರೀಕ್ಷೆ ಹಾಗೂ ಸೋಂಕಿತರಸಾವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಪ್ರತಿದಿನದ ಪರೀಕ್ಷೆ ಹಾಗೂ ಕೋವಿಡ್ ಸಾವುಪ್ರಕರಣಗಳ ಬಗ್ಗೆ ಸತ್ಯಾಂಶದ ಮಾಹಿತಿ ಜನರ ಮುಂದಿಡಬೇಕು. ಕೊರೊನಾ ಪರೀಕ ಪ್ರಮಾಣ ಕೂಡಲೇ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ.ಈ ಕುರಿತು ಮುಖ್ಯಮಂತ್ರಿಬಿ. ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಕೊರೊನಾಪ್ರಕ ರಣ ಕಡಿಮೆಯಾಗಿದೆಎಂದು ಹೇಳುತ್ತಿದ್ದೀರಿ, ಆದರೆಪರಿ ಣಿತರ ಪ್ರಕಾರ ಪರೀಕ್ಷೆನಡೆಸಿದಾಗ ಪಾಸಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದರೆಮಾತ್ರ ವೈರಸ್ ತೀವ್ರತೆ ಕಡಿಮೆಯಾಗಿದೆ ಎಂದು ಅರ್ಥ.
ಆದರೆ, ವಾಸ್ತವಾಂಶವೇ ಬೇರೆ ಇದೆ ಎಂದು ಹೇಳಿದ್ದಾರೆ.ಹಾಸನ, ಉñರ ¤ ಕನ್ನಡ, ದಕ್ಷಿಣ ಕನ್ನಡ, ಬಳ್ಳಾರಿ, ಹಾಸನ,ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮುಂತಾದ ಜಿಲ್ಲೆಗಳ ಪಾಸಿಟಿವಿಟಿ ದರ ಶೇ.50ಕ್ಕಿಂತಹೆಚ್ಚಾಗಿದೆ. ಹೀಗಿರುವಾಗ ಪ್ರಕರಣಗಳ ಸಂಖ್ಯೆ ಕಡಿಮೆಹೇಗೆ ಎಂದು ಪ್ರಶ್ನಿಸಿದ್ದಾರೆ.ಲಸಿಕೆ ವಿಚಾರದಲ್ಲಿ ಕಿಲೋ ಮೀಟರ್ಗಟ್ಟಲೆ ಸಾಲುನಿಲುವಂÉ ತಾ ಗಿದೆ. ಇದರಿಂದಲೂ ಕೊರೊನಾ ಹರಡುವುದಿಲ್ಲವೇ? ಸರ್ಕಾರ ಎಲ್ಲ ತಪ್ಪು ಮುಚ್ಚಿಕೊಳ್ಳಲುಪರೀಕ್ಷೆ ಕಡಿಮೆ ಮಾಡಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆಎಂದು ಸುಳ್ಳು ಹೇಳುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.