ವೈರಸ್‌ ಆರ್ಭಟದ ಎದುರು ಲೋಹದ ಹಕ್ಕಿಗಳಹಾರಾಟ ಸಾಧ್ಯವೇ?

2021ರ ಫೆಬ್ರವರಿಯಲ್ಲಿ ಏರೋ ಇಂಡಿಯಾ ಶೋ 13ನೇ ಆವೃತ್ತಿಗೆ ರಾಜಧಾನಿಯಲ್ಲಿ ಸಿದ್ಧತೆ

Team Udayavani, Aug 31, 2020, 11:32 AM IST

ವೈರಸ್‌ ಆರ್ಭಟದ ಎದುರು ಲೋಹದ ಹಕ್ಕಿಗಳಹಾರಾಟ ಸಾಧ್ಯವೇ?

ಸಾಮಾನ್ಯವಾಗಿ ಪ್ರತಿ ಬಾರಿ ಏರೋ ಇಂಡಿಯಾ ಶೋ ಎಂದಾಕ್ಷಣ ಸ್ಥಳಾಂತರ ಚರ್ಚೆ ನಡೆಯುತ್ತಿತ್ತು. ಆದರೆ, ಸಲ ಸ್ವಾವಲಂಬನೆ ಚರ್ಚೆ ಮುನ್ನೆಲೆಗೆ ಬಂದಿದೆ. ಕೊರೊನಾ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಏರೋಸ್ಪೇಸ್‌ ಇಂಡಸ್ಟ್ರಿಗಳಿಗೆ ಪ್ರದರ್ಶನವು ಚೇತರಿಕೆ ಎಂಜಿನ್‌ ಆಗಬಹುದೇ? ಸ್ಥಳೀಯ ಉದ್ಯಮಗಳಿಗೆ ಹೇಗೆ ನೆರವಾಗಲಿದೆ? ಜಾಗತಿಕ ಮಟ್ಟದಲ್ಲಿ ಕಂಪನಿಗಳ ಪಾಲ್ಗೊಳ್ಳುವಿಕೆ ಹೇಗಿರಲಿದೆ? ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ಪ್ರದರ್ಶನ ಮಂಕಾಗಲಿ ದೆಯೇ? ಎಲ್ಲಲೆಕ್ಕಾಚಾರ ಗಳ ಸುತ್ತ ಸಲದ ಸುದ್ದಿ ಸುತ್ತಾಟ…

ಒಂದೆಡೆ ಜಾಗತಿಕ ಮಾರಿ ಕೋವಿಡ್ ವೈರಸ್‌, ಮತ್ತೂಂದೆಡೆ ನೆರೆಯ ಚೀನಾದೊಂದಿಗೆ ಯುದ್ಧದ ಸನ್ನಿವೇಶ, ಇನ್ನೊಂದೆಡೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ. ಈ ಸವಾಲುಗಳ ನಡುವೆ ಮತ್ತೂಂದು ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ 13ನೇ ಆವೃತ್ತಿಗೆ ಬೆಂಗಳೂರು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋ ಮಹತ್ವ ಪಡೆದು ಕೊಂಡಿದೆ.

ಕೋವಿಡ್ ಹಾವಳಿಯಿಂದ ವೈಮಾನಿಕ ಕ್ಷೇತ್ರದಲ್ಲಿನ ದೈತ್ಯ ಕಂಪನಿಗಳು ಭಾಗವಹಿಸುವುದು ಅನುಮಾನ. ಹಾಗಾಗಿ, ಹಿಂದಿನ ಆವೃತ್ತಿಗಳಲ್ಲಿ ಕಂಡು ಬರು ತ್ತಿದ್ದ ವ್ಯಾಪಾರ-  ಒಪ್ಪಂದ ಗಳು, ಲೋಹದ ಹಕ್ಕಿಗಳ ಹಾರಾಟ ಈ ಬಾರಿ ಕಾಣದಿರಬಹುದು. ಆದರೆ, ನಮ್ಮಲ್ಲಿನ ಕೊರತೆ ಹಾಗೂ ಅದನ್ನು ನೀಗಿಸಲು ಅಗತ್ಯ ಸಿದ್ಧತೆಗಳಿಗೆ ವೇದಿಕೆ ಆಗಲಿದೆ. ಈ ನಿಟ್ಟಿನಲ್ಲಿ ನಿರ್ದಿಷ್ಟ ಉಪಕರಣಗಳ ಮೇಲೆ ಈ ಪ್ರದರ್ಶನ ಫೋಕಸ್‌ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ದೇಶೀಯ ರಕ್ಷಣಾ ಉದ್ಯಮದ ಬೆಳವಣಿಗೆ ಹಾಗೂ ಆ ಮೂಲಕ ಆರ್ಥಿಕ ಪ್ರಗತಿಗೆ ದಿಕ್ಸೂಚಿ ಆಗಲಿದೆ.

ಸ್ಥಳಾಂತರದಿಂದ ಸ್ವಾವಲಂಬನೆಯತ್ತ… ಸಾಮಾನ್ಯವಾಗಿ ಪ್ರತಿ ಬಾರಿ ಏರೋ ಇಂಡಿಯಾ ಶೋ ಎಲ್ಲಿ ನಡೆಯಲಿದೆ ಎಂಬುದು ಚರ್ಚಾ ವಸ್ತು ಆಗಿರುತ್ತಿತ್ತು. ನಂತರ ಅದು ರಾಜಕೀಯ ಪ್ರತಿಷ್ಠೆ ರೂಪ ಪಡೆದುಕೊಳ್ಳುತ್ತಿತ್ತು.ಸರ್ಕಾರ ಕೂಡ ಈ ಚರ್ಚೆಯನ್ನು ಕೊನೆ ಕ್ಷಣದವರೆಗೂ ಜೀವಂತವಾಗಿರುವಂತೆ ಕಾಯ್ದುಕೊಳ್ಳುತ್ತಿತ್ತು. ಆದರೆ, ಈ ಸಲ ಅಂತಹ ಅಪಸ್ವರಗಳಿಗೆ ಆಸ್ಪದ ಇಲ್ಲ. ಮುಂಚಿತವಾಗಿಯೇ ಗೊಂದಲ ನಿವಾರಿಸಿದೆ. ಸ್ಥಳಾಂತರದ ಬದಲಿಗೆ ಸ್ವಾವಲಂಬನೆ ಚರ್ಚೆ ಮುನ್ನೆಲೆಗೆ ಬಂದಿದೆ. ವಾತಾವರಣವೂ ಇದಕ್ಕೆ ಪೂರಕವಾಗಿದೆ. ಜತೆಗೆ ಪ್ರಧಾನಿ ಅವರ ಆತ್ಮನಿರ್ಭರ ಭಾರತದ ಪರಿಕಲ್ಪನೆ ಮತ್ತಷ್ಟು ಪುಷ್ಟಿ ನೀಡಲಿದೆ. ಹಾಗೆ ನೋಡಿದರೆ, ಕಳೆದ ಬಾರಿಯೂ ಮೇಕ್‌ ಇನ್‌ ಇಂಡಿಯಾ ಇತ್ತು. ಆಗಲೂ ಸ್ವದೇಶಿ ಮಂತ್ರದ ಜಪ ನಡೆದಿತ್ತು. ಆದರೆ, ಈ ಸಲ ಸರ್ಕಾರ ಒಂದು ಹೆಜ್ಜೆ ಮುಂದೆಹೋಗಿ ನೀತಿ

ರೂಪಿಸಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ 101 ಉಪಕರಣಗಳ ತಯಾರಿಕೆ ಮತ್ತು ಪೂರೈಕೆಕಡ್ಡಾಯವಾಗಿ ದೇಶೀಯ ಕಂಪನಿಗಳಿಗೇ ನೀಡಲು ನಿರ್ಧರಿಸಲಾಗಿದೆ. ಇದು ಹೆಚ್ಚು-ಕಡಿಮೆ ನಾಲ್ಕು ಲಕ್ಷ ಕೋಟಿ ಮೊತ್ತದ್ದಾಗಿದೆ. ಮುಂದಿನ 5ರಿಂದ 7 ವರ್ಷಗಳಲ್ಲಿ ಹಂತ-ಹಂತವಾಗಿ ಪೂರೈಕೆ ಆಗಲಿದೆ. ಇದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಲಘು ಯುದ್ಧವಿಮಾನ, ಲಘು ಯುದ್ಧ ಹೆಲಿಕಾಪ್ಟರ್‌ಗಳು, ಮಾನವರಹಿತ ಯುದ್ಧ ವಿಮಾನದಂತಹ ಮುಂದುವರಿದ ತಂತ್ರಜ್ಞಾನ ಗಳ ಉಪಕರಣಗಳೂ ಇವೆ.

ವೈಮಾನಿಕ ಕ್ಷೇತ್ರದಲ್ಲಿ ಸರ್ಕಾರದ ಈ ಸ್ವಾವಲಂಬಿ ಹೆಜ್ಜೆ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬಂದರೆ, ಭವಿಷ್ಯದಲ್ಲಿ ಬೆಂಗಳೂರಿಗೆ ವರವಾಗಲಿದೆ. ಯಾಕೆಂದರೆ, ಅತಿ ಹೆಚ್ಚು ಉದ್ಯಮಗಳು ಇರುವುದು ಇಲ್ಲಿಯೇ. ಜತೆಗೆ ಎಚ್‌ ಎಎಲ್‌, ಎನ್‌ಎಎಲ್‌, ಡಿಆರ್‌ಡಿಒ, ಇಸ್ರೋ ಸೇರಿದಂತೆ ಪ್ರತಿಷ್ಠಿತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳೂ ಇಲ್ಲಿವೆ. ಸರ್ಕಾರ ದೊಡ್ಡ ದೊಡ್ಡ ಉಪಕರಣಗಳ ತಯಾರಿಕೆ ಮತ್ತು ಪೂರೈಕೆಗೆ ಒತ್ತುಕೊಟ್ಟಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಕೈಗಾರಿಕೆಗಳು ಇರುವುದು ಬಿಡಿಭಾಗಗಳನ್ನು ತಯಾರಿಸುವ ಉದ್ದಿಮೆಗಳು. ಹೀಗಾಗಿ, ಒಂದು ಹೆಲಿಕಾಪ್ಟರ್‌ ನಿರ್ಮಿಸುವಂತೆ ಸರ್ಕಾರ ಹೇಳಬಹುದು. ಆದರೆ, ಅದರ ಬಗ್ಗೆ ನಾವು ಯೋಚನೆ ಮಾಡಲಿಕ್ಕೂ  ಆಗುವುದಿಲ್ಲ. ಇದರ ಬದಲಿಗೆ ಹೆಲಿಕಾಪ್ಟರ್‌ನ ಯಾವ ಭಾಗದ ಉಪಭಾಗ ಎಂದು ಹೇಳಿದರೆ, ಅದನ್ನು ತಯಾರಿಸಿಕೊಡಬಹುದು. ಅದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೂ ಅನುಕೂಲ ಆಗಲಿದೆ ಎಂದು ವೈಮಾನಿಕ ಕ್ಷೇತ್ರದ ಉದ್ಯಮಿ ವಿ.ಕೆ. ದೀಕ್ಷಿತ್‌ ಅಭಿಪ್ರಾಯಪಡುತ್ತಾರೆ.

ಅವಕಾಶಗಳ ಹೆಬ್ಟಾಗಿಲು ತೆರೆಯಿತು : 40ರ ದಶಕದಲ್ಲಿ ಜಪಾನ್‌ ಮತ್ತು ಇಂಗ್ಲೆಂಡ್‌ ನಡುವೆ ಯುದ್ಧ ನಡೆದಾಗ, ಕಾದಾಡುವ ಯುದ್ಧ ವಿಮಾನಗಳ ರಿಪೇರಿ, ನಿರ್ವಹಣೆ ಮತ್ತು ಅವುಗಳನ್ನು ಎಲ್ಲಿ ನಿಲ್ಲಿಸುವುದು ಎಂಬ ಚಿಂತೆ ಬ್ರಿಟಿಷರನ್ನು ಕಾಡುತ್ತಿತ್ತು. ಆಗ ಅವರು ಆಯ್ಕೆ ಮಾಡಿಕೊಂಡಿದ್ದು ಭಾರತವನ್ನು. ಅದರಲ್ಲೂ ಬೆಂಗಳೂರು ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. ಇದಕ್ಕೂ ಮುನ್ನ ಮದ್ರಾಸ್‌ ಆಯ್ಕೆಯಾಗಿತ್ತು. ಆದರೆ, ಅಲ್ಲಿ ಹಡಗುಗಳಿಂದ ವಿಮಾನವೊಂದನ್ನು ಸ್ಫೋಟಿಸಿದ ಘಟನೆ ನಡೆಯಿತು. ಆದ್ದರಿಂದ ಕಡಲ ತೀರಗಳಲ್ಲದ ಹಾಗೂ ರೆಸಿಡೆಂಟ್‌ ಮತ್ತು ಕಂಟೋನ್ಮೆಂಟ್‌ ಇರುವ ಬೆಂಗಳೂರು ಬೆಸ್ಟ್‌ ಎಂಬ ನಿರ್ಣಯಕ್ಕೆ ಬರಲಾಯಿತು. ಯುದ್ಧ ಮುಗಿಸಿದ ವಿಮಾನಗಳು ಈಗಿನ ಎಚ್‌ಎಎಲ್‌ನಲ್ಲಿ ಬಂದು ನಿಲ್ಲುತ್ತಿದ್ದವು. ಹೀಗೆ ಬಂದು ನಿಲ್ಲುವ ವಿಮಾನಗಳ ರಿಪೇರಿಗೆ ಜನರೂ ಬೇಕಾಯಿತು. ಆಗ ಸ್ಥಳೀಯರಿಗೆ ಆಹ್ವಾನ ಬಂತು. ಈ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಟಾಗಿಲು ತೆರೆಯಿತು.

ಸಂಬಂಧ ಬೆಸುಗೆಗೆ ವೇದಿಕೆ : ಸಾಮಾನ್ಯವಾಗಿ ಏರೋಸ್ಪೇಸ್‌ ಇಂಡಸ್ಟ್ರಿ ವಿದೇಶಿ ಕಂಪನಿಗಳೊಂದಿಗೆ ವ್ಯಾಪಾರ- ವಹಿವಾಟು ಹೆಚ್ಚು. ಕೋವಿಡ್ ದಿಂದ ಇಡೀ ಉದ್ಯಮ ಮಂಕಾಗಿದೆ. ನಗರದಲ್ಲಿರುವ ಕೈಗಾರಿಕೆ ಗಳಲ್ಲಿ ಶೇ. 50ರಷ್ಟು ಮಖಾಡೆ ಮಲಗಿವೆ. ಇವು ಮತ್ತೆ ಚೇತರಿಸಿಕೊಳ್ಳಲು ಕನಿಷ್ಠ ಆರೆಂಟು ತಿಂಗಳು ಬೇಕು. ಈ ಮಧ್ಯೆ ಏರೋ ಇಂಡಿಯಾ ಶೋ ಬರುತ್ತಿರುವುದರಿಂದ ಮತ್ತೆ ಸಂಬಂಧ ಬೆಸೆಯಲು ವೇದಿಕೆ ಆಗಲಿದೆ ಎಂದೂ ಅವರು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಅಥವಾ ಈ ನಿಟ್ಟಿನಲ್ಲಿ ನಮ್ಮ ಸಾಮರ್ಥ್ಯ ಸಾಬೀತುಪಡಿಸಿ ಕೊಳ್ಳಬೇಕಿದೆ. ಇದಕ್ಕೆ ಪೂರಕವಾಗಿ ಸರ್ಕಾರ ದೇಶೀಯ ಉದ್ದಿಮೆಗಳಿಗೆ ಉತ್ತೇಜನ ನೀಡುತ್ತಿದ್ದು, ಆಯ್ದ 101 ಉಪಕರಣಗಳನ್ನು ದೇಶೀಯ ಕಂಪನಿಗಳಿಂದಲೇ ಬರಬೇಕು ಎಂದು ಹೇಳಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಭಾರತಕ್ಕೆ ಇದೊಂದು ಸವಾಲಿನ ಜತೆಗೆ ಅವಕಾಶವೂ ಆಗಿದೆ ಎಂದು ಬೆಲ್ಜಿಯಂ ಟ್ರೇಡ್‌ ಕಮೀಷನರ್‌ ಜಯಂತ್‌ ನಾಡಿಗೇರ್‌ ತಿಳಿಸುತ್ತಾರೆ.

2021 ಫೆಬ್ರವರಿಗೆ ಏರ್‌ ಇಂಡಿಯಾ ಶೋ : 13ನೇ ಏರೋ ಇಂಡಿಯಾ ಶೋ 2021ರ ಫೆಬ್ರವರಿ 3ರಿಂದ 5ರವರೆಗೆ ನಡೆಯಲಿದೆ. ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳ ಕಾಲ ನಡೆಯುತ್ತಿದ್ದ ಶೋ, ಈ ಬಾರಿ ಮೂರು ದಿನಗಳಿಗೆಸೀಮಿತಗೊಳಿಸಲಾಗಿದೆ.

 

ವಿಜಯಕುಮಾರ್‌ ಚಂದರಗಿ

 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.