ಕೋವಿಡ್ ಆರೈಕೆ ಕೇಂದ್ರಗಳನು ಸದ್ಯಕ್ಕೆ ಮುಚ್ಚಬೇಡಿ
Team Udayavani, Jun 11, 2021, 1:56 PM IST
ಬೆಂಗಳೂರು: ಕೋವಿಡ್-19 ಮೂರನೇಸಂಭಾವ್ಯ ಅಲೆಯ ಸಾಧ್ಯತೆಗಳು ಮತ್ತು ಅದನ್ನು ಎದುರಿಸುವ ಮಾರ್ಗೋಪಾಯಗಳ ಕುರಿತುತಜ್ಞರ ಸಮಿತಿ ವರದಿ ನೀಡುವ ತನಕ ಈಗತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ಹಾಗೂ ಟ್ರಯಾಜ್ ಸೆಂಟರ್ಗಳನ್ನು ಮುಚ್ಚದಂತೆಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೋವಿಡ್-19 ಚಿಕಿತ್ಸೆ ಮತ್ತು ನಿರ್ವಹಣೆಗೆಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವುಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾ.ಅರವಿಂದ ಕುಮಾರ್ ಅವರಿದ್ದವಿಭಾಗೀಯ ನ್ಯಾಯಪೀಠ ಗುರುವಾರ ಈನಿರ್ದೇಶನ ನೀಡಿತು. ಮೊದಲ ಅಲೆಸಂದರ್ಭದಲ್ಲಿ ತೆರೆಯಲಾಗಿದ್ದ ಅನೇಕ ಕೋವಿಡ್ಕೇರ್ ಸೆಂಟರ್ಗಳನ್ನು ನಂತರದಲ್ಲಿ ಮುಚ್ಚಲಾಯಿತು. ಇದರಿಂದಾಗಿ ಎರಡನೇ ಅಲೆ ಆರಂಭವಾದಾಗ ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡನಿರ್ಮಾಣ ಆಗಿತ್ತು.
ಈಗ ಮೂರನೇ ಅಲೆನಿಯಂತ್ರಣಕ್ಕೆ ಸಿದ್ಧತೆಗಳನ್ನು ಕೈಗೊಳುವುದಕ್ಕಾಗಿವರದಿ ನೀಡಲು ಸರ್ಕಾರ ಕಾರ್ಯಪಡೆಯನ್ನುರಚಿಸಿದೆ. ಅದು ವರದಿ ನೀಡುವವರೆಗೆ ಮತ್ತುಸರ್ಕಾರ ಆ ಕುರಿತು ನಿರ್ಧಾರಗಳನ್ನುಕೈಗೊಳ್ಳುವವರೆಗೆ ಯಾವುದೇ ಕೋವಿಡ್ ಆರೈಕೆಕೇಂದ್ರ ಮತ್ತು ಟ್ರಯಾಜ್ ಸೆಂಟರ್ಗಳನ್ನುಮುಚ್ಚಬಾರದು ಅಥವಾ ಸ್ಥಗಿತಗೊಳಿಸಬಾರದುಎಂದು ರದ್ದುಗೊಳಿಸಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.
ಪಾಲಿಕೆ ಪರ ವಾದ ಮಂಡಿಸಿದ ವಕೀಲರಾದವಿ.ಶ್ರೀನಿಧಿ,ಯಾವುದೇ ಕೋವಿಡ್ ಆರೈಕೆಕೇಂದ್ರಗಳನ್ನೂ ಪಾಲಿಕೆ ಮುಚ್ಚಿಲ್ಲ, ಮೂರನೇಅಲೆ ಎದುರಿಸಲು ಪಾಲಿಕೆ ಎಲ್ಲ ರೀತಿಯಲ್ಲೂಸಜ್ಜಾಗಿದೆ ಎಂದು ನ್ಯಾಯಾಲಯಕ್ಕೆ ಭರವಸೆನೀಡಿದರು. ಪ್ರಕರಣದಲ್ಲಿ ನ್ಯಾಯಾಲಯಕ್ಕೆಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ವಕೀಲ ವಿಕ್ರಂ ಹುಯಿಲಗೋಳ,ಮೊದಲನೇ ಅಲೆಯ ನಂತರ ಬಿಳಿಯಾನೆಯಂತಾಗಿದ್ದ ಕೆಲವು ಕೋವಿಡ್ ಆರೈಕೆ ಕೇಂದ್ರಗಳನ್ನುಮುಚ್ಚಲಾಗಿತ್ತು. ಆನಂತರ ಎರಡನೇ ಅಲೆವೇಳೆ ಹೊಸ ಕೋವಿಡ್ ಕೇಂದ್ರಗಳನ್ನು ಸೃಷ್ಟಿಸಲಾಯಿತು. ಹಾಗಾಗಿ ಇದೀಗ ಸಮತೋಲಿತವಾದನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ