ಕೊರೊನಾಜನಕ ಕಥೆಗಳು: ಪುಟ್ಟ ಹೆಣ್ಣು ಮಕ್ಕಳ ತಂದೆ ಬಲಿ ಪಡೆದ ಕೋವಿಡ್ ..
Team Udayavani, Apr 27, 2021, 10:59 AM IST
ಬೆಂಗಳೂರು: “ಕೋವಿಡ್ ಸೋಂಕಿನಿಂದ ಮೃತಪಟ್ಟ ಇಬ್ಬರು ಪುಟ್ಟ ಹೆಣ್ಣು ಮಕ್ಕಳ ತಂದೆ. ತಂದೆಯ ಮೃತದೇಹ ಬರುವಿಕೆಗಾಗಿ ತಾಯಿ ಮತ್ತು ಅಜ್ಜಿಯ ಜತೆಗೆ ಚಿತಾಗಾರದ ಬಳಿ ಕಾಯುತ್ತಿದ್ದ ಕಂದಮ್ಮಗಳು.ಆ್ಯಂಬುಲೆನ್ಸ್ನಲ್ಲಿ ತಂದೆಯ ಮೃತದೇಹ ಬಂದ ಕೂಡಲೇ, ಗಂಡನನ್ನು ನೆನೆದು ಆಕ್ರಂದಿಸಿದ ತಾಯಿ. ತಾಯಿ ದುಃಖೀಸುತ್ತಿದ್ದನ್ನೇ ನೋಡುತ್ತಾ ಕಣ್ಣೀರಿಡುತ್ತಿದ್ದ ಕಂದಮ್ಮಗಳು’ ಹೀಗೆ.. ತನ್ನ ತಂದೆಯ ಹೆಗಲ ಮೇಲೆ ಕುಳಿತು ಆಡಿ ಬೆಳೆಯಬೇಕಿದ್ದ ಇಬ್ಬರು ಪುಟಾಣಿ ಮಕ್ಕಳು ಹಾಗೂ ತನ್ನ ಗಂಡನನ್ನು ಕಳೆದುಕೊಂಡ ಪತ್ನಿ ನಗರದ ಸುಮನಹಳ್ಳಿ ಚಿತಾಗಾರದ ಬಳಿ ಸೋಮವಾರ ಕಣ್ಣೀರಿಟ್ಟ ದೃಶ್ಯ ಎಂಥವರ ಕಣ್ಣಂಚಲ್ಲೂ ನೀರು ತರಿಸುವಂತಿತ್ತು. ಕೋವಿಡ್ ದಿಂದ ನಿತ್ಯ ನಗರದಲ್ಲಿ ಅನೇಕ ರೀತಿಯ ಮನಕಲಕುವ ಘಟನೆ ನಡೆಯುತ್ತವೆ.
ಇದರ ನಡುವೆ ಸೋಮವಾರ ಸೂಕ್ತ ಸಮಯಕ ಬೆಡ್ ಸಿಗದೆ, ಬಿಯು ನಂಬರ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ಕೊಡದ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಇಬ್ಬರು ಪುಟಾಣಿ ಮಕ್ಕಳು ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಗಂಡನನ್ನು ನೆನೆದು ಕಣ್ಣೀರಿಟ್ಟ ಪತ್ನಿ: “ಬೆಳಗ್ಗೆಯೇ ಚಿತಾಗಾರದ ಬಳಿ ಬಂದಿದ್ದಮೃತ ವ್ಯಕ್ತಿಯ ಪತ್ನಿ ಮತ್ತು ಸಂಬಂಧಿಕರು ಮೃತದೇಹ ಬರುವವರೆಗೂ ಕಣ್ಣೀರಿಟ್ಟರು.ತಂದೆ ಮೃತಪಟ್ಟಿದ್ದಾರೆ ಎಂಬುವುದನ್ನುಅರಿಯಲಾಗದ ಐದು ವರ್ಷದ ಮಗಳುಒಮ್ಮೆ ತಾಯಿ ಬಳಿಗೆ, ಮತ್ತೂಮ್ಮೆ ಅಜ್ಜಿಬಳಿಗೆ ಹೋಗಿ ಅವರನ್ನೇ ನೋಡುತ್ತಿತ್ತು. ಇನ್ನೊಬ್ಬ ಮಗಳು, ತಾಯಿ ಅಳುತ್ತಿದ್ದನ್ನು ಕಂಡು ತಾನೂ ದುಃಖೀಸುತ್ತಿದ್ದಳು.’ ಬಿಯು ನಂಬರ್ ಇಲ್ಲವೆಂದು
ಚಿಕಿತ್ಸೆ ಕೊಡಲಿಲ್ಲ: “ನಮ್ಮ ಭಾವನಿಗೆ 38 ವರ್ಷ. ಅವರಿಗೆ ಕೋವಿಡ್ದೃಢವಾಗಿದ್ದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಬಿಬಿಎಂಪಿಯಿಂದ ಬಿಯು ನಂಬರ್ ಕೊಡುವವರೆಗೂ ಯಾವುದೇ ರೋಗಿಗೆ ವೈದ್ಯರು ಚಿಕಿತ್ಸೆ ಕೊಡಲು ಮುಂದೆಬರುವುದಿಲ್ಲ. ಎಷ್ಟೇ ಅಲೆದರೂ ಬೆಡ್ಸಿಗುತ್ತಿಲ್ಲ. ಅವರು ಮಾಡಿದ ಕೆಲಸದಿಂದನಮ್ಮ ಅಕ್ಕನ ಮಕ್ಕಳು ಇಂದುಅನಾಥರಾಗಿದ್ದಾರೆ’ ಎಂದು ಮೃತ ವ್ಯಕ್ತಿಯಪತ್ನಿ ಸಹೋದರ ಮಕ್ಕಳ ಮುಂದಿನ ಭವಿಷ್ಯ ನೆನೆದು ಕಣ್ಣೀರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ