ಸಾಲ ಕೊಡಿಸುವ ನೆಪ: ಕೋಟ್ಯಂತರ ರೂ. ವಂಚನೆ


Team Udayavani, May 7, 2021, 1:57 PM IST

Crores Rs. Fraud

ಬೆಂಗಳೂರು: ರಾಜ್ಯದ ಉದ್ಯಮಿಗಳಿಗೆ ಕಡಿಮೆ ಬಡ್ಡಿಗೆ ಕೋಟ್ಯಂತರ ರೂ. ಸಾಲ ಕೊಡಿಸುವುದಾಗಿ ವಂಚಿಸಿದ ತಮಿಳುನಾಡು ಮೂಲದ ರಿಯಲ್‌ಎಸ್ಟೇಟ್‌ ಉದ್ಯಮಿ ಸೇರಿ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಮೂಲದ ಎ.ಹರಿನಾಡರ್‌ ಅಲಿಯಾಸ್‌ ಹರಿ ಗೋಪಾಲಕೃಷ್ಣ ನಾಡರ್‌ಮತ್ತು ಕೇರಳ ಮೂಲದ ರಂಜಿತ್‌ ಪಣಿಕ್ಕರ್‌ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಕೆಲಸಹಚರರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವ ಆಮೀಷ:ಆರೋಪಿಗಳು ಬೆಂಗಳೂರಿನ ಉದ್ಯಮಿ ವೆಂಕಟಮಣಿ ಎಂಬುವರಿಗೆ 360 ಕೋಟಿ ರೂ. ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಶೇ.6ರಷ್ಟು ಬಡ್ಡಿಯಂತೆ ಲೋನ್‌ಕೊಡಿಸುವುದಾಗಿ ನಂಬಿಸಿದ್ದಾರೆ. ಬಳಿಕ ಕೇರಳದ ಪಂಚತಾರ ಹೋಟೆಲ್‌ಗ‌ಳಿಗೆ ಕರೆಯಿಸಿಕೊಂಡು ಸಭೆನಡೆಸಿ ಲೋನ್‌ ಮಂಜೂರಾಗಿರುವ ಬಗ್ಗೆ  360ಕೋಟಿ ರೂ. ಗಳ ನಕಲಿ ಡಿ.ಡಿ. ತೋರಿಸಿದ್ದಾರೆ.

ಬಳಿಕ ಈ ಡಿ.ಡಿ. ಬೇಕಾದಲ್ಲಿ ಲೋನ್‌ ಸರ್ವೀಸ್‌ ಚಾರ್ಜ್‌ ಆಗಿ ಲೋನ್‌ ಮೊತ್ತದ ಶೇ.2ರಷ್ಟು ಹಣ ನೀಡುವಂತೆ ಒತ್ತಾಯ ಮಾಡಿ 7.20 ಕೋಟಿ ರೂ. ಅನ್ನು ಅವರ ಖಾತೆಯಿಂದ ಆರೋಪಿ ಹರಿ ನಾಡರ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಆ ಡಿ.ಡಿ.ಬ್ಯಾಂಕ್‌ಗೆ ಕಳುಹಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.

ಹತ್ಯೆ ಮಾಡುವುದಾಗಿ ಬೆದರಿಕೆ: ಈ ಬಗ್ಗೆಆರೋಪಿಗಳನ್ನು ಪ್ರಶ್ನಿಸಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ವೆಂಕಟರಮಣಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರುಪ್ರಮುಖ ಆರೋಪಿ ತಮಿಳುನಾಡಿನ ಹರಿ ನಾಡರ್‌ಅನ್ನು ಕೇರಳದ ಕೋವಲಂನಲ್ಲಿ ಬಂಧಿಸಲಾಗಿತ್ತು. ಈತನಿಂದ ಎರಡು ಕೋಟಿ ರೂ. ಮೌಲ್ಯದ 3.893ಗ್ರಾಂ ತೂಕದ ಚಿನ್ನಾಭರಣಗಳು, 8,76 ಲಕ್ಷ ರೂ.ನಗದು ಹಾಗೂ ಇನೋವಾ ಕಾರು ಅನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೂಬ್ಬ ಆರೋಪಿ ಸೆರೆ: ಮತ್ತೂಬ್ಬ ಆರೋಪಿ ರಂಜಿತ್‌ ಪಣಿಕ್ಕರ್‌ ಅಲಿಯಾಸ್‌ ರಂಜಿತ್‌ ಎಸ್‌ಪಣಿಕ್ಕರ್‌ ಅನ್ನು ಸಹ ಬಂಧಿಸಿದ್ದು, 10 ಲಕ್ಷ ರೂ.ಮೌಲ್ಯದ 140 ಗ್ರಾಂ ತೂಕದ ಚಿನ್ನಾಭರಣ, ವಜ್ರದ ಉಂಗುರಗಳು, ಒಂದು ಕಾರು, 96 ಸಾವಿರ ರೂ.ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಯಖಾತೆಯಲ್ಲಿದ್ದ 38,85 ಲಕ್ಷ ರೂ. ಜಪ್ತಿ ಮಾಡಲಾಗಿದೆಎಂದು ಪೊಲೀಸರು ಹೇಳಿದರು.

ಸಾಲ ಕೊಡಿಸುವುದಾಗಿ ವಂಚನೆ: ಆರೋಪಿ ಹರಿನಾಡರ್‌ ಈತ ತನ್ನ ಸಹಚರರ ಜತೆ ಸೇರಿಕೊಂಡುಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ,ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳ ಉದ್ಯಮಿಗಳಿಗೆ ಕೋಟ್ಯಂತರ ರೂ. ಹಣವನ್ನು ಕಡಿಮೆಬಡ್ಡಿಗೆ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಡಿ.ಡಿತೋರಿಸಿ ಅವರಿಂದ ಸರ್ವೀಸ್‌ ಜಾರ್ಜ್‌ ಆಗಿಕೋಟ್ಯಂತರ ರೂ. ಹಣ ಪಡೆದು ಸಾಲ ಕೊಡಿಸದೆ ವಂಚಿಸಿದ್ದಾನೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಾಗೂ ಆರೋಪಿಗಳ ಖಾತೆಯಿಂದ ಹಣವರ್ಗಾವಣೆಯಾಗಿರುವ ಪಲಾನುಭವಿಗಳ ಖಾತೆಗಳ ಪರಿಶೀಲನೆ ಹಾಗೂ ವಂಚನೆ ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಡ್ರಗ್ಸ್‌ ದಂಧೆ: ವಿದೇಶಿ ಪ್ರಜೆ ಬಂಧನ

ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದವಿದೇಶಿ ಪ್ರಜೆಯನ್ನು ಕೇಂದ್ರ ಅಪರಾಧವಿಭಾಗ(ಸಿಸಿಬಿ) ಪೊಲೀಸರು ಪಿಟ್‌ ಎನ್‌ ಡಿಪಿಎಸ್‌ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.ನೈಜೀರಿಯಾ ಮೂಲದ ನೊನ್ಸೋ ಜೋಚಿನ್‌(27) ಬಂಧಿತ. ಆರೋಪಿ ಕೆಲ ದಿನಗಳ ಹಿಂದಷ್ಟೆಜೈಲಿನಿಂದ ಹೊರ ಬಂದಿದ್ದ. ಬಳಿಕ ಮತ್ತೆ ತನ್ನಸ್ನೇಹಿತರ ಜತೆ ಸೇರಿಕೊಂಡು ಅಕ್ರಮ ಚಟುವಟಿಕೆ ಆರಂಭಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. 2013ರಲ್ಲಿ ವ್ಯಾಪಾರಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿ, ಬೆಂಗಳೂರಿಗೆ ಬಂದು ಬಾಣಸವಾಡಿ ಸಮೀಪದಲ್ಲಿ ಕುಟುಂಬ ಸಮೇತವಾಸವಾಗಿದ್ದ. ವೀಸಾದ ಅವಧಿ ಮುಗಿದ ಬಳಿಕಅಕ್ರಮವಾಗಿ ಹಣ ಸಂಪಾದಿಸಿದಲು ಆರೋಪಿಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾನೆ.

2017ರಿಂದ2020ರವರೆಗೆ ಸಿಸಿಬಿ ಪೊಲೀಸರೇ 4 ಬಾರಿ ಬಂಧಿಸಿದ್ದಾರೆ.ಬಳಿಕ ಬಿಡುಗಡೆಯಾಗಿ ಬಂದು ತನ್ನ ವಾಸ ಸ್ಥಳಬದಲಾವಣೆ ಮಾಡಿಕೊಂಡು ಮತ್ತೆ ಡ್ರಗ್ಸ್‌ದಂಧೆಯಲ್ಲಿ ತೊಡಗಿದ್ದಾನೆ. ಹೀಗಾಗಿ ಈತನನ್ನುಮಾದಕ ವಸ್ತು ಮಾರಾಟದಂತಹ ಕಾನೂನುಬಾಹಿರ ಚಟುಟಿಕೆಗಳನ್ನು ನಿಯಂತ್ರಿಸುವ ಪಿಐಟಿಎನ್‌ ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.