ಸಾಲ ಮನ್ನಾ: ಸಿಎಂರನ್ನು ಅಭಿನಂದಿಸಬೇಕು
Team Udayavani, Sep 27, 2017, 11:40 AM IST
ದೇವನಹಳ್ಳಿ: ರಾಜ್ಯ ಸರ್ಕಾರ 599 ಸದಸ್ಯರ 2.52 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸಂಘದ ಪರವಾಗಿ ಅಭಿನಂದಿಸಬೇಕು ಎಂದು ವಿಶ್ವನಾಥಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿ.ವಿಜಯ್ ಕುಮಾರ್ ತಿಳಿಸಿದರು.
ತಾಲೂಕಿನ ವಿಶ್ವನಾಥಪುರ ಗ್ರಾಪಂ ಆವರಣದಲ್ಲಿ ವಿಶ್ವನಾಥಪುರ ವ್ಯವಸಾಯ ಸಹಕಾರ ಸಂಘದ 2016-17ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 19 ಗ್ರಾಮಗಳ ಆಡಳಿತ ವ್ಯಾಪ್ತಿಗೆ ಸೀಮಿತವಾಗಿದ್ದು, 3,192 ಸದಸ್ಯರಿದ್ದಾರೆ. 2,285 ಎಕರೆ ಸಾಗುವಳಿಯಲ್ಲಿ ಆಲೂಗಡ್ಡೆ, ಟೊಮೊಟೋ, ದ್ರಾಕ್ಷಿ, ಬಾಳೆ, ತರಕಾರಿ, ರೇಷ್ಮೆ ಬೆಳೆಗಳಿಗೆ ಪ್ರಸ್ತುತವಾಗಿ ಸಂಘ ಆರ್ಥಿಕ ಸುಸ್ಥಿತಿಯಲ್ಲಿದೆ.
ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಇತರೆ ರೈತರಿಗೆ ಸಾಲ ನೀಡಲು ಅನುಕೂಲವಾಗಲಿದೆ. ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು. 2016-17ನೇ ಸಾಲಿನಲ್ಲಿ ವ್ಯವಸಾಯ ಸೇವಾ ಸಂಘ ನಾಲ್ಕು ಲಕ್ಷ ಎಪ್ಪತ್ತು ಸಾವಿರ ನಿವ್ವಳ ಲಾಭ ಗಳಿಸಿದೆ.
ಅಲ್ಪಾವಧಿ ಬೆಳೆ ಸಾಲ 26 ಕೋಟಿ ರೂ., ಸ್ವಸಾಹಾಯ ಗುಂಪಿನ ಸಾಲ 1.43 ಕೋಟಿ ರೂ. ವಿತರಿಸಲಾಗಿದೆ. 45 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಲಾಗಿದೆ ಎಂದು ಹೇಳಿದರು. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣಮೂರ್ತಿ ವಾರ್ಷಿಕ ವರದಿ ಮಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ