ಅವಸಾನದತ್ತ ಪ್ರಜಾಪ್ರಭುತ್ವ
Team Udayavani, May 21, 2018, 11:30 AM IST
ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ಬಿಜೆಪಿ ದೊಡ್ಡ ಆತಂಕ ಎಂದುಕೊಂಡರೂ, ಉಳಿದವರು ಸಾಚಾ ಅಲ್ಲ. ಆದ್ದರಿಂದ ಆ ಪಕ್ಷಗಳ ಬಗ್ಗೆಯೂ ಎಚ್ಚರದಿಂದ ಇರಬೇಕು ಎಂದು ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದರು.
ನಗರದ ಗಾಂಧಿ ಭವನದಲ್ಲಿ ಕ್ರಿಯಾ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ “ಮಾರ್ಕ್ಸ್ 200- ಕ್ಯಾಪಿಟಲ್ 150′ ಮಾಲಿಕೆಯ ಮೊದಲ ಕಂತಿನ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಆವರು, ರಾಜ್ಯದ ಈಗಿನ ಪರಿಸ್ಥಿತಿ ನೋಡಿದರೆ, ಪ್ರಜಾಪ್ರಭುತ್ವ ಅವಸಾನದ ಅಂಚಿನತ್ತ ಸಾಗಿದೆ ಎಂಬ ಆತಂಕ ಕಾಡುತ್ತದೆ ಎಂದು ಹೇಳಿದರು.
ಮಹಾತ್ಮ ಗಾಂಧಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ರಾಮಮನೋಹರ ಲೋಹಿಯಾ ಅವರ ಕುರಿತ ಸಮಗ್ರ ಕೃತಿಗಳು ಬಂದಿವೆ. ಅದೇ ರೀತಿ, ಕಾರ್ಲ್ಮಾರ್ಕ್ಸ್ ಅವರ ಬಗೆಗಿನ ಸಮಗ್ರ ಕೃತಿಗಳೂ ಬರಬೇಕು. ಹಾಗೂ ಬಿಡುಗಡೆಯಾದ ಕೃತಿಗಳನ್ನು ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಬೇಕು ಎಂದರು.
ವಿಮರ್ಶಕ ಡಾ.ಜಿ.ರಾಮಕೃಷ್ಣ ಮಾತನಾಡಿ, ಮಾರ್ಕ್ಸ್ವಾದ ಅಧ್ಯಯನ ಮಾಡಿದವರೆಲ್ಲರೂ ಕಮ್ಯುನಿಸ್ಟ್ ಆಗಿರುವುದಿಲ್ಲ. ಮೊದಲು ಕಮ್ಯುನಿಸ್ಟ್ ಅನ್ನು ಅಧ್ಯಯನ ಮಾಡಿ, ನಂತರ ಮಾರ್ಕ್ಸ್ವಾದ ಓದಿ ಅಳವಡಿಸಿಕೊಳ್ಳಬೇಕು. ಈಗಲೂ ಮಾರ್ಕ್ಸ್ವಾದ ಗೊತ್ತಿಲ್ಲದ ಅನೇಕರು ವೈಚಾರಿಕವಾಗಿ ತಮ್ಮ ಬದುಕಿನಲ್ಲಿ ಮಾರ್ಕ್ಸ್ವಾದಿಗಳಾಗಿದ್ದಾರೆ. ಅಷ್ಟರಮಟ್ಟಿಗೆ ಮಾರ್ಕ್ಸ್ವಾದ ವೈಜ್ಞಾನಿಕವಾಗಿದೆ ಎಂದು ಹೇಳಿದರು.
ಇದೇ ವೇಳೆ “ಫ್ರಾನ್ಸಿನಲ್ಲಿ ಅಂತರಯುದ್ಧ’ ಮತ್ತು “ತತ್ವಶಾಸ್ತ್ರದ ದಾರಿದ್ರé’ ಅನುವಾದಿತ ಕೃತಿಗಳು ಬಿಡುಗಡೆಗೊಳಿಸಲಾಯಿತು. ಡಾ.ಬಿ.ಆರ್. ಮಂಜುನಾಥ್, ಪ್ರೊ.ವಿ.ಎನ್. ಲಕ್ಷ್ಮೀನಾರಾಯಣ್ ಕೃತಿ ಪರಿಚಯಿಸಿದರು. ಲೇಖಕರಾದ ವಿಶ್ವ ಕುಂದಾಪುರ, ಕೆ.ಪಿ. ವಾಸುದೇವನ್, ಕೆ.ಎಸ್. ಪಾರ್ಥಸಾರಥಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್