ದೀಪಾವಳಿ: ಈ ಬಾರಿ ಗ್ರಾಹಕರ ಕೈ ಸುಡುವ ಪಟಾಕಿಗಳು!

ತೈಲ ಬೆಲೆ ಏರಿಕೆ, ಸಾಗಣಿಕೆ ವೆಚ್ಚ ಅಧಿಕ, ಮತ್ತಿತರ ಕಾರಣಗಳಿಂದ ದರ ಏರಿಕೆ | ಬೇಕಾದಷ್ಟು ಪಟಾಕಿ ಸಿಗುವುದು ಅನುಮಾನ?

Team Udayavani, Nov 2, 2021, 11:38 AM IST

ದೀಪಾವಳಿ

ಬೆಂಗಳೂರು: ಬೆಳಕಿನ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ಪಟಾಕಿಗಳು ಮಾರುಕಟ್ಟೆಗೇನೋ ಲಗ್ಗೆ ಇಟ್ಟಿವೆ. ಆದರೆ ಈ ಬಾರಿ ನಿಮಗೆ ಬೇಕಾದಷ್ಟು ಪಟಾಕಿಗಳು ಸಿಗುವುದು ಅನುಮಾನ; ಒಂದು ವೇಳೆ ಸಿಕ್ಕರೂ ಅವು ನಿಮ್ಮ ಕೈಸುಡಲಿವೆ! ಕಳೆದ ವರ್ಷ ಕೊನೆಯ ಕ್ಷಣದಲ್ಲಿ ಹಸಿರು ಪಟಾಕಿಗೆ ಅನುಮತಿ ನೀಡಲಾಯಿತು.

ಈ ಮಧ್ಯೆ ಕೊರೊನಾ ಹಾವಳಿಯಿಂದ ವೇತನ ಕಡಿತ, ಬೋನಸ್‌ ಸಿಗದಿರುವುದು ಸೇರಿದಂತೆ ಹಲವು ಕಾರಣಗಳು ಸಂಭ್ರಮದ ಆಚರಣೆಗೆ ಕೊಕ್ಕೆ ಹಾಕಿದವು. ಆದರೆ, ಈ ಸಲ ವೇತನದಿಂದ ಹಿಡಿದು ಎಲ್ಲವೂ ಬಹುತೇಕ ಸಹಜಸ್ಥಿತಿಗೆ ಮರಳಿದೆ. ಭರ್ಜರಿ ಆಚರಣೆಗೆ ಜನ ಸಜ್ಜು ಕೂಡ ಆಗಿದ್ದಾರೆ. ಆದರೆ, ಪಟಾಕಿಗಳ ಪೂರೈಕೆ ಪ್ರಮಾಣ ಕಡಿಮೆ ಆಗಿದೆ. ಜತೆಗೆ ಅವುಗಳ ದರದಲ್ಲಿ ಕೂಡ ಏರಿಕೆ ಆಗಿದೆ. ಇದರ ಪರಿಣಾಮ ಗ್ರಾಹಕರ ಮೇಲೆ ಆಗಲಿದ್ದು, ಇಲ್ಲಿಯೂ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಕೋವಿಡ್‌-19 ಮೊದಲ ಮತ್ತು 2ನೇ ಅಲೆ ಮುಗಿಯುತ್ತಿದ್ದಂತೆ ಮೂರನೇ ಅಲೆಯ ಭೀತಿ ಎಲ್ಲೆಡೆ ಸೃಷ್ಟಿಯಾಯಿತು. ಇದರಿಂದ ಪಟಾಕಿ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳ ಪೂರೈಕೆ ಸಮರ್ಪಕವಾಗಿ ಆಗಿಲ್ಲ. ಮತ್ತೂಂದೆಡೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹಾಗಾಗಿ, ಉತ್ಪಾದನಾ ವೆಚ್ಚದಲ್ಲಿ ಶೇ. 20-30ರಷ್ಟು ಹೆಚ್ಚಳ ಆಗಿದೆ. ಇದರ ನಡುವೆ ಪಟಾಕಿ ಹೊಡೆಯಲು ಅನುಮತಿ ಸಿಗುತ್ತದೆಯೋ ಇಲ್ಲವೋ ಎಂಬುದು ಕೂಡ ಅನುಮಾನ ಆಗಿತ್ತು. ಇದೆಲ್ಲವೂ ಪೂರೈಕೆ ಖೋತಾ ರೂಪದಲ್ಲಿ ಪರಿಣಮಿಸಿದೆ. ಲಭ್ಯತೆ ಕಡಿಮೆ;

ಗ್ರಾಹಕರು ಹೆಚ್ಚು: “ನಾನು ವಿವಿಧ ಪ್ರಕಾರದ ಪಟಾಕಿಗಳ 500 ಕೇಸ್‌ಗಳಿಗೆ ಬೇಡಿಕೆ ಇಟ್ಟಿದ್ದೆ. ಆದರೆ, ಪೂರೈಕೆ ಆಗಿದ್ದು ಇದರರ್ಧದಷ್ಟು. ಅದೂ ಶೇ. 10-15ರಷ್ಟು ಹೆಚ್ಚು ದರ ವಿಧಿಸಲಾಗಿದೆ. ಅದರಲ್ಲೂ ಲಾರಾಗಳು (ಸಾವಿರ, ಹತ್ತುಸಾವಿರದ ಪಟಾಕಿ ಸರಗಳು) ತುಂಬಾ ಕಡಿಮೆ ಪೂರೈಕೆ ಆಗಿವೆ. ಸಗಟುದಾರರೇ ಹೆಚ್ಚಿನ ಬೆಲೆಗೆ ಖರೀದಿಸಿದ್ದರಿಂದ, ಚಿಲ್ಲರೆ ವ್ಯಾಪಾರಿಗಳಿಗೂ ಇದು ವರ್ಗಾವಣೆ ಆಗುತ್ತದೆ. ಕೊನೆಗೆ ಗ್ರಾಹಕರಿಗೆ ಸಹಜವಾಗಿ ದುಬಾರಿ ಆಗುತ್ತದೆ.

ಇದನ್ನೂ ಓದಿ;- ಎರಡೇ ದಿನದಲ್ಲಿ ಹೊಸ ನಾಯಕನ ಆಯ್ಕೆ: ಅಚ್ಚರಿ ಘೋಷಣೆ ಸಾಧ್ಯತೆ ಎಂದ ಬಿಸಿಸಿಐ ಮೂಲಗಳು

ಆದರೆ, ಇದು ನಮಗೂ ಅನಿವಾರ್ಯವಾಗಿದೆ’ ಎಂದು ಹೊಸೂರು ರಸ್ತೆಯ ಎಸ್‌ಎಲ್‌ವಿ ಕ್ರ್ಯಾಕರ್ನ ರಾಮಸ್ವಾಮಿ ನರಳೂರು ತಿಳಿಸುತ್ತಾರೆ. “ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ, ಈ ಸಲ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಆದರೆ, ಪೂರೈಕೆ ಕಡಿಮೆ ಇದೆ. ಬೇಡಿಕೆ ಇಟ್ಟಿದ್ದಕ್ಕಿಂತ ಶೇ. 30ರಿಂದ 40ರಷ್ಟು ಕಡಿಮೆ ಲಭ್ಯವಾಗುತ್ತಿದೆ. ಇದಕ್ಕೆ ಮುಖ್ಯವಾಗಿ ಕಚ್ಚಾ ವಸ್ತು ಗಳು ಸಮ ರ್ಪಕ ವಾಗಿ ಸಕಾಲದಲ್ಲಿ ಲಭ್ಯವಾ ಗಿಲ್ಲ. ಇನ್ನು ಹಸಿರು ಪಟಾಕಿಗೆ ಮಾತ್ರ ಅವಕಾಶ ಇದ್ದುದರಿಂದ ಉತ್ಪಾದನಾ ಮಳಿಗೆಗಳಲ್ಲಿ ಕೆಲವರು ಪರವಾನಗಿ ಪಡೆಯದಿದ್ದರಿಂದ ಉತ್ಪಾದನೆ ಸಾಧ್ಯವಾಗಿಲ್ಲ. ಈ ಮಧ್ಯೆ ಮೂರನೇ ಅಲೆಯ ಭೀತಿ ಇತ್ತು. ಮತ್ತೂಂದೆಡೆ ಬೇಡಿಕೆ ಹೆಚ್ಚಳವಾಗಿದ್ದು, ಪೂರೈಕೆ ಕಡಿಮೆ ಇರುವುದು, ತೈಲ ಬೆಲೆ ಏರಿಕೆಯಾಗಿ ದ್ದರಿಂದ ಸಾಗಾಣಿಕೆ ವೆಚ್ಚ ಅಧಿಕವಾಗಿರುವುದು ಮತ್ತಿತರ ಕಾರಣಗಳಿಂದ ಪಟಾಕಿ ದರ ಏರಿಕೆ ಆಗಿದೆ’ ಎಂದು ಶಿವಕಾಶಿಯ ಪಟಾಕಿ ವಿತರಕ ಸತೀಶ್‌ ಶರವಣ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಪೂರೈಕೆ ಕಡಿಮೆ ಒಳ್ಳೆಯದಾಯ್ತು!

“ನಾವು ಬೇಡಿಕೆ ಇಟ್ಟಿದ್ದರಲ್ಲಿ ಶೇ. 75ರಷ್ಟು ಪಟಾಕಿಗಳು ಪೂರೈಕೆ ಆಗಿವೆ. ಶೇ. 25ರಷ್ಟು ಕೊರತೆ ಆಗಿರುವುದಕ್ಕೆ ತಯಾರಕರು ಸೂಕ್ತ ಸಮಜಾಯಿಷಿಯನ್ನೂ ನೀಡಿದ್ದಾರೆ. ಖರೀದಿ ದರ ಮಾತ್ರ ಶೇ. 8ರಿಂದ 12ರಷ್ಟು ಏರಿಕೆ ಆಗಿದೆ. ಆದರೆ, ನನ್ನ ಪ್ರಕಾರ ಕಡಿಮೆ ಪೂರೈಕೆ ಆಗಿದ್ದೇ ಒಳ್ಳೆಯದಾಯಿತು ಅನಿಸುತ್ತಿದೆ. ಯಾಕೆಂದರೆ, ಇದುವರೆಗೆ ಪಟಾಕಿ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇದಕ್ಕೆ ಇನ್ನೂ ವೇತನ ಆಗಿಲ್ಲ. ಮಂಗಳವಾರ ದಿಂದ ಬಹುಶಃ ಪಿಕ್‌ಅಪ್‌ ಆಗಬಹುದು ಎಂಬ ನಿರೀಕ್ಷೆ ಇದೆ’ ಎಂದು ನಗರದ ಲಕ್ಷ್ಮೀ ಟ್ರೇಡರ್ನ ಜಯರಾಂ.

ಸಂಭ್ರಮವಿಲ್ಲ…

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಯಿಂದ ದೀಪಾವಳಿಗೆ ಆಚರಣೆಗೆ ನಗರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಂಭ್ರಮ ಇಲ್ಲ. ಪುನೀತ್‌ ಅವರಿಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅದರಲ್ಲೂ ಯುವಕರ ಸಂಖ್ಯೆ ಅತ್ಯಧಿಕವಾಗಿದೆ. ದೀಪಾವಳಿ ಹೊಸ್ತಿಲಲ್ಲಿ ಇದ್ದಾಗಲೇ ತಮ್ಮ ನೆಚ್ಚಿನ ನಾಯಕ ಅಗಲಿದ್ದರಿಂದ ಬಹುತೇಕರು ಪಟಾಕಿ ಹೊಡೆದು, ದೀಪಾವಳಿ ಸಂಭ್ರಮ ಆಚರಣೆಗೆ ಮುಂದಾಗುತ್ತಿಲ್ಲ.

  • – ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.