ವೃದ್ಧೆಗೆ ಡ್ರಾಪ್ ನೀಡಿ ಸರ ಕದ್ದು ಪರಾರಿ
Team Udayavani, Mar 7, 2019, 6:23 AM IST
ಬೆಂಗಳೂರು: ಅಂಚೆ ಕಚೇರಿಗೆ ನಡೆದು ಹೋಗುತ್ತಿದ್ದ ವೃದ್ಧೆ ಒಬ್ಬರಿಗೆ ಬೈಕ್ನಲ್ಲಿ ಡ್ರಾಪ್ ನೀಡಿದ ದುಷ್ಕರ್ಮಿ, ಡಿಸೈನ್ ನೋಡಿ ಕೊಡುವುದಾಗಿ ಅವರ ಚಿನ್ನದ ಸರ ಪಡೆದು ಪರಾರಿಯಾದ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಸರ ಕಳೆದುಕೊಂಡ
ಪ್ರಮೀ ಳಾ ಬಾಯಿ (72) ಎಂಬುವವರು ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಕ್ಷ್ಮೀಪುರ ನಿವಾಸಿ ಪ್ರಮೀಳಾಬಾಯಿ, ಮಂಗಳವಾರ (ಮಾ.5) ಬೆಳಗ್ಗೆ 10.30ರ ಸುಮಾರಿಗೆ ತಮ್ಮ ವೃದ್ಧಾಪ್ಯ ವೇತನ ಪಡೆಯುವ ಸಂಬಂಧ ಅಶೋಕನಗರ ಅಂಚೆಕಚೇರಿಗೆ ನಡೆದು ಹೋಗುತ್ತಿದ್ದರು.
ಈ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿ, “ಎಲ್ಲಿಗೆ ನಡೆದುಕೊಂಡು ಹೋಗುತ್ತೀದ್ದೀರಿ, ಸಾಕಷ್ಟು ಬಿಸಿಲಿದೆ. ನಾನು ಹನುಮಂತನಗರದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದೇನೆ’ ಎಂದು ಮಾತನಾಡಿಸಿದ್ದಾನೆ. ಬಳಿಕ ನಿಮ್ಮನ್ನು ಅಂಚೆ ಕಚೇರಿಗೆ ಬಿಡುತ್ತೇನೆ ಬನ್ನಿ ಎಂದಿದ್ದಾನೆ. ಆತನ ಮಾತು ನಂಬಿದ ಪ್ರಮೀಳಾ ಬಾಯಿ ಬೈಕ್ನಲ್ಲಿ ಕುಳಿತುಕೊಂಡಿದ್ದಾರೆ. ಗಣಪತಿ ದೇವಾಲಯ ಸಮೀಪದ 8ನೇ ಕ್ರಾಸ್ನಲ್ಲಿ ಬೈಕ್ ನಿಲ್ಲಿಸಿದ ಆರೋಪಿ, ಪ್ರಮೀಳಾ
ಅವರನ್ನು ಇಳಿಸಿದ್ದಾನೆ. ಬಳಿಕ ನೀವು ಹಾಕಿಕೊಂಡಿರುವ ಚಿನ್ನದ ಸರದ ಡಿಸೈನ್ ಚೆನ್ನಾಗಿದೆ. ನಮ್ಮ ಅಂಗಡಿಗೆ ಬರುವ ಗ್ರಾಹಕರಿಗೂ ಇದೇ ರೀ ತಿ ಮಾಡಿಸಿಕೊಡಬೇಕು. ಸರ ಕೊಡಿ ನೋಡಿಕೊಡು ತ್ತೇನೆ ಎಂದು ಹೇಳಿ ಅವರಿಂದ ಸರ ಪಡೆದಿದ್ದಾನೆ. ಬಳಿಕ ಮಾತನಾಡುತ್ತಲೇ ತನ್ನಮೊಬೈಲ್ನಲ್ಲಿ ಸರದ ಫೋಟೋ ತೆಗೆಯುವಂತೆ ನಾಟಕವಾಡಿದ ಆರೋಪಿ, ಇದ್ದಕ್ಕಿದ್ದಂತೆ ಬೈಕ್ ಸ್ಟಾರ್ಟ್ ಮಾಡಿ ಕೊಂಡು ಪರಾರಿಯಾಗಿದ್ದಾನೆ. ಆರೋಪಿಯ ವರ್ತನೆಯಿಂದ ಕಂಗಾಲದ ಪ್ರಮೀಳಾ ಅವರು ಕೂಗಿ ಕೊಂಡಿದ್ದು, ಸಾರ್ವಜನಿಕರು ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ