ಅಂಚೆ ಕಚೇರಿಯಲ್ಲೇ ನಕಲಿ ಅಂಚೆ ಚೀಟಿ ಮಾರಾಟ
Team Udayavani, May 10, 2019, 10:46 AM IST
ಬೆಂಗಳೂರು: ಕೋಟಿ, ಲಕ್ಷಗಟ್ಟಲೇ ಅವ್ಯವಹಾರ ವಂಚನೆಗಳು ನಡೆದಾಗಲೂ ಪ್ರಕರಣ ದಾಖಲಾಗುವುದು ಕೆಲವೊಮ್ಮೆ ಕಷ್ಟ. ಆದರೆ, ಸರ್ಕಾರದ ಬೊಕ್ಕಸಕ್ಕೆ ಕೇವಲ 40 ರೂ. ನಷ್ಟ ಮಾಡಿದ ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ಧ ಕೋರ್ಟ್ ಸೂಚನೆ ಮೇರೆಗೆ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮೂಲಕ ನಗರದಲ್ಲಿ ನಕಲಿ ಅಂಚೆಚೀಟಿ ಪ್ರಕರಣ ಬಯಲಾಗಿದ್ದು, ಅಂಚೆ ಕಚೇರಿಯಲ್ಲೇ ನಕಲಿ ಪೋಸ್ಟ್ ಸ್ಟಾಂಪ್ಗ್ಳು ಹೇಗೆ ಬಂದವು? ಈ ದಂಧೆಯ ಹಿಂದಿನ ರೂವಾರಿಗಳು ಯಾರೆಂಬುದು ಪೊಲೀಸರಿಗೆ ತಲೆನೋವಾ ಗಿದೆ. ಅಲ್ಲದೆ, ನಗರದ ಇತರೆ ಅಂಚೆ ಕಚೇರಿಯಲ್ಲೂ ಈ ನಕಲಿ ಸ್ಟಾಂಪ್ಗ್ಳ ಮಾರಾಟ ಆಗುತ್ತಿವೆಯೇ? ಎಂಬ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ನಕಲಿ ಸ್ಟಾಂಪ್ಗ್ಳ ಮುದ್ರಣ ನಗರದಲ್ಲೇ ನಡೆಯುತ್ತಿದೆಯೇ? ಅಥವಾ ನೆರೆ ರಾಜ್ಯ ಅಥವಾ ಜಿಲ್ಲೆಗಳಲ್ಲಿ ಮುದ್ರಣ ಮಾಡಲಾಗುತ್ತಿ ದೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.
ನಗರದ ಪೂರ್ವ ಉಪ ವಿಭಾಗದ ಅಂಚೆ ಕಚೇರಿ ಸಹಾಯಕ ಅಧೀಕ್ಷಕರಾಗಿರುವ ಲತಾ ಎಸ್. ಗೋಕಾವಿ ಎಂಬವರು, ಅದೇ ಕಚೇರಿಯಲ್ಲಿ ಪೋಸ್ಟ್ಸ್ಟಾಂಪ್ ವಿತರಣೆ ಮಾಡುತ್ತಿದ್ದ ಎ.ಜಿ.ಅಭಿಜಿತ್ ಹಾಗೂ ಎಸ್.ಎನ್. ವಾದಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
2018ರ ಅ.13ರಂದು ಆರೋಪಿಗಳಾದ ಅಭಿಜಿತ್ ಹಾಗೂ ವಾದಿರಾಜ್ ನಕಲಿ ಪೋಸ್ಟ್ಸ್ಟಾಂಪ್ಗ್ಳನ್ನು ವಿತರಣೆ ಮಾಡಿದ್ದರು. ಈ ವಿಚಾರ ಕೆಲ ಸಮಯದ ಬಳಿಕ ಲತಾ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಕಚೇರಿಯಲ್ಲೇ ಆತಂರಿಕ ತನಿಖೆ ನಡೆಸಿದಾಗ ಆರೋಪಿಗಳ ಅವ್ಯವಹಾರ ಬಯಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 40 ರೂ. ನಷ್ಟ ಆಗಿರುವುದು ಕಂಡು ಬಂದಿದೆ. ಈ ಬಗ್ಗೆ ಲತಾ ಅವರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
Crime: ಅನೈತಿಕ ಸಂಬಂಧ; ವ್ಯಕ್ತಿ ಕೊಲೆಗೆ ಸುಪಾರಿ!
MUST WATCH
ಹೊಸ ಸೇರ್ಪಡೆ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್
Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್