ಎಕ್ಸ್ಪ್ರೆಷನ್ ಅಮೂರ್ತ ಕಲಾಕೃತಿಗಳ ಪ್ರದರ್ಶನ
Team Udayavani, May 18, 2018, 12:02 PM IST
ಬೆಂಗಳೂರು: ರಾಜ್ಯದ ಯುವ ಚಿತ್ರ ಕಲಾವಿದ ರಮೇಶ್ ತೆರದಾಳ ಅವರ ಇತ್ತೀಚಿನ ಕಲಾಕೃತಿಗಳ ಪ್ರದರ್ಶನವನ್ನು ವಸಂತ ನಗರದ ಆರ್ಟ್ ಹೌಜ್ ಕಲಾ ಗ್ಯಾಲರಿ ಆಯೋಜಿಸಿದೆ.
ಸದಾ ಸ್ಪಷ್ಟರೂಪಗಳನ್ನೇ ಆಧರಿಸಿದ ಕಲಾಕೃತಿಗಳನ್ನು ರಚಿಸುತ್ತಾ ಬಂದಿದ್ದ ರಮೇಶ್ ಅವರು ಈ ಪ್ರದರ್ಶನದಲ್ಲಿ ಅಮೂರ್ತ ಕಲಾಕೃತಿಗಳನ್ನು ಇಟ್ಟಿದ್ದು, ತಮಗೆ ಸದಾ ಕಾಡುತ್ತಿದ್ದ ಅಕ್ವೇರಿಯಂ, ಪಕ್ಷಿ, ಪ್ರಾಣಿಗಳನ್ನೇ ವಿಷಯಗಳನ್ನಾಗಿ ಬಳಸಿಕೊಂಡಿರುವುದು ಗಮನ ಸೆಳೆಯುವಂತಿವೆ.
ತಮ್ಮ ಕಲಾಕೃತಿಗಳ ಬಗ್ಗೆ ಗದಗ ಮೂಲದವರಾದ ರಮೇಶ್ ಅವರು ಪ್ರತಿಕ್ರಿಯಿಸಿದ್ದು ಹೀಗೆ, “ಪಾಶ್ಚಾತ್ಯ ಕಲಾವಿದರಾದ ಜಾಕ್ಸನ್ ಪೊಲಾಕ್ ಮತು ಆ್ಯಂಟೆನಿಯೊ ತಾಪಿಸ್ ಅವರ ಕಲಾಕೃತಿಗಳು ಕಳೆದ ಹದಿನೆಂಟು ವರ್ಷಗಳಿಂದಲೂ ಕಾಡುತ್ತಲೇ ಇತ್ತು.
ಅವರ ಅನೇಕ ಕಲಾಕೃತಿಗಳಿಂದ ಪ್ರಭಾವಿತನಾಗಿ ಇತ್ತೀಚಿಗೆ ಹೊಸ ಶೈಲಿಯಲ್ಲಿ ಅಸ್ಪಷ್ಟವಾದ ಆಕೃತಿಗಳನ್ನು ವಿಭಿನ್ನ ಮೈವಳಿಕೆಗಳೊಂದಿಗೆ ರಚಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ. ಈ ಪ್ರದರ್ಶನದ ವಿಶಿಷ್ಟತೆ ಏನೆಂದರೆ ಇದು ತಿರುಗಾಟ ಪ್ರದರ್ಶನವಾಗಿದ್ದು, ಇಲ್ಲಿ ಪ್ರದರ್ಶಿಸಲಾದ ಕಲಾಕೃತಿಗಳು ಮೇ 28ರಿಂದ ಜೂನ್ 15ರ ತನಕ ಬುದಾ ಪೆಸ್ಟ್ನಲ್ಲಿ ಪ್ರದರ್ಶನಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್