ದುಬಾರಿ ತೆರಿಗೆ: ಬಡವರಿಗೆ ಕಷ್ಟ
Team Udayavani, Apr 14, 2021, 11:17 AM IST
ಯಲಹಂಕ: ಕೇಂದ್ರ ಸರ್ಕಾರದ ದುಬಾರಿ ತೆರಿಗೆ ಮತ್ತು ಕೊರೊನಾದಿಂದದುಡಿಯುವ ವರ್ಗವಾದ ಬಡವರು,ಆಟೋ-ಟ್ಯಾಕ್ಸಿ ಚಾಲಕರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇಲ್ಲಿಗೆ ಸಮೀಪದ ಜಕ್ಕೂರಿನಲ್ಲಿ ಯುಗಾದಿ ಪ್ರಯುಕ್ತ ಬ್ಯಾಟರಾಯನಪುರ ಕಾಂಗ್ರೆಸ್ ಘಟಕದಿಂದಸಾವಿರಾರು ಆಟೋ-ಟ್ಯಾಕ್ಸಿ ಚಾಲಕರಿಗೆಹೊಸ ಬಟ್ಟೆಗಳನ್ನು ವಿತರಿಸಿ ಮಾತನಾಡಿ,ಶ್ರೀಮಂತರ ಮೇಲೆ ತೆರಿಗೆ ಹಾಕಿ ಅದನ್ನುತೆಗೆದುಕೊಂಡು ಬಡವರಿಗೆ ಸಹಾಯಮಾಡಬೇಕು. ಈ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಉಲ್ಟಾ, ಬಡವರುಆಟೋ-ಟ್ಯಾಕ್ಸಿಗಳಿಗೆ ಬೇಕಾದ ಡೀಸಲ್,ಪೆಟ್ರೋಲ್, ಗ್ಯಾಸ್ ಮೇಲೆ ತೆರಿಗೆಹಾಕುವ ಮೂಲಕ ದುಡಿದುದೆಲ್ಲವನ್ನುತೆರಿಗೆ ಕಟ್ಟುತ್ತಿದ್ದಾರೆ. ಆದರೆ, ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಈ ಸರ್ಕಾರ ಮಾಡಿದೆ ಎಂದು ಹೇಳಿದರು.
ಶ್ರೀಮಂತರು 3ನೇಸ್ಥಾನ, ಸಾಮಾನ್ಯರು 141ನೇಸ್ಥಾನ: ಭಾರತದ ಶ್ರೀಮಂತರು ಪ್ರಪಂಚದಲ್ಲಿ ಮೂರನೆ ಸ್ಥಾನದಲ್ಲಿದ್ದಾರೆ. ಆದರೆ, ದುಡಿವ ವರ್ಗದವರು 141ನೇ ಸ್ಥಾನದಲ್ಲಿದ್ದಾರೆ. ಅಂದರೆ ಶ್ರೀಮಂತರುತುಂಬಿ ತುಳುಕುತ್ತಿದ್ದಾರೆ, ಆಟೋ-ಟ್ಯಾಕ್ಸಿ, ಸೇರಿದಂತೆ ದುಡಿಯುವ ವರ್ಗಪ್ರತಿದಿನ ದುಡಿದುಕೊಂಡು ಟ್ಯಾಕ್ಸ್ಕಟ್ಟುತ್ತಿದ್ದಾರೆ. ಶ್ರೀಮಂತರು ಅತೀಶ್ರೀಮಂತರಾಗುತ್ತಿದ್ದಾರೆ ಎಂದರು.
ಚಾಲಕರ ಕಾಂಗ್ರೆಸ್ ಘಟಕ: ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಘಟಕವು ಇದೇ ಮೊದಲ ಭಾರಿಗೆಆಟೋ ಮತ್ತು ಟ್ಯಾಕ್ಸಿ ಚಾಲಕರಸಮಸ್ಯೆಗಳನ್ನು ಬಗೆ ಹರಿಸಲು ಅವರಿಗೆಸ್ಪಂದಿಸಿ ಅವರ ಕಷ್ಟ ಸುಖಗಳನ್ನು ತಿಳಿಯಲು ವಾರ್ಡ್ ಮತ್ತುಕ್ಷೇತ್ರಮಟ್ಟದಲ್ಲಿ ಚಾಲಕರ ಕಾಂಗ್ರೆಸ್ ಘಟಕವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ