ಎಸ್ಕೇಪ್ ಆಗಲು ಯತ್ನಿಸಿದ ಕೊಲೆ ಆರೋಪಿ ಸರಗಳ್ಳನ ಮೇಲೆ ಫೈರಿಂಗ್
Team Udayavani, Jun 24, 2017, 1:44 PM IST
ಬೆಂಗಳೂರು: ಸರಗಳ್ಳತನದ ವೇಳೆ ಯುವಕನೊಬ್ಬನನ್ನು ಇರಿದು ಕೊಲೆಗೈದ ಆರೋಪದಲ್ಲಿ ಬಂಧನಕ್ಕೊಳಾಗಿದ್ದ ಆರೋಪಿಯೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಎಚ್ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರ ಪಾಳ್ಯ ದಲ್ಲಿ ಘಟನೆ ನಡೆದಿದ್ದು, ಜೂನ್ 10 ರಂದು ನಡೆದ ಸಾಯಿಚರಣ್ ಕೊಲೆ ಆರೋಪಿಯಾಗಿದ್ದ ಜಾನ್ಸನ್ ಎಂಬಾತ ಪೊಲೀಸರ ಬಳಿ ಬಹಿರ್ದೆಸೆಗೆ ಹೋಗಬೇಕೆಂದು ಕೇಳಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಎಷ್ಟೇ ಹೇಳಿದರು ಕೇಳದ ಆತ ಕಲ್ಲುಗಳನ್ನು ಪೊಲೀಸರತ್ತ ತೂರಿದ್ದಾನೆ. ಸ್ವರಕ್ಷಣೆಗಾಗಿ ಇನ್ಸ್ಪೆಕ್ಟರ್
ಸಾದಿಕ್ ಪಾಷಾ ಅವರು ಒಂದು ಸುತ್ತು ಗುಂಡು ಹಾರಿಸಿದ್ದು ,ಗುಂಡು ಕಾಲನ್ನು ಹೊಕ್ಕಿ ಜಾನ್ಸನ್ ಕುಸಿದು ಬಿದ್ದಿದ್ದಾನೆ.
ಕೂಡಲೇ ಜಾನ್ಸನ್ನನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸಾಯಿಚರಣ್ ಕೊಲೆಯಾದ ಸ್ಥಳ ಪಂಚನಾಮೆಗೆ ಕರೆದೊಯ್ಯುವಾಗ ಜಾನ್ಸನ್ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ