ಅಸೈನ್ ಮೆಂಟ್ ಆಧಾರದ ಮೌಲ್ಯ ಮಾಪನಕ್ಕೆ ಇಲಾಖೆ ಸೂಚನೆ; ಕಾಲೇಜುಗಳಿಂದ ಪರೀಕ್ಷೆ
ಎರಡು ಮಾದರಿ ಪ್ರಶ್ನೆ ಪತ್ರಿಕೆ ಗೊಂದಲ
Team Udayavani, Jun 14, 2021, 7:00 AM IST
ಬೆಂಗಳೂರು : ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅಸೈನ್ಮೆಂಟ್ ಆಧಾರದಲ್ಲಿ ಮೌಲ್ಯ ಮಾಪನ ಮಾಡಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದರೆ ಕಾಲೇಜುಗಳು ಮಾತ್ರ ಪರೀಕ್ಷೆ ನಡೆ ಸಲು ಎರಡೆರಡು ಮಾದರಿ ಪ್ರಶ್ನೆ ಪತ್ರಿಕೆ ನೀಡಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿವೆ.
ಎರಡು ಪ್ರಶ್ನೆ ಪತ್ರಿಕೆ ಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಪಡೆದು ಮೌಲ್ಯಾಂಕನ ಮಾಡು ವಂತೆ ಪ.ಪೂ. ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಆದರೆ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡುವ ನಿರ್ಧಾರ ಪ್ರಕಟಿಸಿದ ಮೇಲೂ ಪರೀಕ್ಷೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಇಲಾಖೆ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಲ್ಲ. ಹೀಗಾಗಿ ಕಾಲೇಜುಗಳು ಪೂರ್ಣ ಪ್ರಮಾಣ ಪರೀಕ್ಷೆ ನಡೆಸುತ್ತಿವೆ.
ಇಲಾಖೆ ಹೇಳಿದ್ದೇನು?
ಪ್ರಯೋಗ ರಹಿತ ವಿಷಯಗಳಿಗೆ ತಲಾ 35 ಅಂಕ ನೀಡಬೇಕು. ಎರಡು ಪ್ರಶ್ನೆಪತ್ರಿಕೆ ನೀಡಿ, 30+30 ಸೇರಿಸಿ 60 ಅಂಕಗಳಿಗೆ ಪರಿವರ್ತಿಸಬೇಕು. ಉಳಿದ ಐದು ಅಂಕಗಳನ್ನು ಆಂತರಿಕ ಮೌಲ್ಯಮಾಪನವೆಂದು ನೀಡಿ, 35+30+30+5 ಒಟ್ಟು ನೂರು ಅಂಕಕ್ಕೆ ನಡೆಸಬೇಕು. ಪ್ರಯೋಗ ಸಹಿತ ವಿಷಯಕ್ಕೆ 21 ಅಂಕ, ಪ್ರಾಯೋಗಿಕಕ್ಕೆ 10 ಅಂಕ ಸೇರಿಸಿ 31 ಅಂಕಕ್ಕೆ ಅಸೈನ್ಮೆಂಟ್ ನೀಡಬೇಕು. 31+22+22+5+20 ಈ ಮಾದರಿ ಅಂಕ ನೀಡಲು ಹೇಳಿದೆ.
ಕಾಲೇಜುಗಳ ಕ್ರಮ ಏನು?
ಪಿಯು ಕಾಲೇಜುಗಳು ಮಾತ್ರ ಅಸೈನ್ಮೆಂಟ್ ಹೆಸರಿನಲ್ಲಿ ಪರೀಕ್ಷೆಯನ್ನೇ ನಡೆಸು ತ್ತಿವೆ. 70 ಅಂಕಗಳ 2 ಮಾದರಿ ಪ್ರಶ್ನೆಪತ್ರಿಕೆ ನೀಡು ತ್ತಿವೆ. ಅದರಲ್ಲಿ 1, 2, 3, 4 ಅಂಕಗಳ ಪ್ರಶ್ನೆ ಗಳನ್ನು ಪ್ರತ್ಯೇಕ ವಾಗಿ ನೀಡಿ ಪರೀಕ್ಷೆ ಬರೆಸು ತ್ತಿವೆ. ವಿದ್ಯಾರ್ಥಿಗಳು ತಲಾ 70 ಅಂಕ ಗಳ ಎರಡು ಪರೀಕ್ಷೆ ಗಳನ್ನು ಅನಿವಾರ್ಯವಾಗಿ ಉತ್ತರಿಸಬೇಕಾದ ಪರಿಸ್ಥಿತಿಯನ್ನು ಪ.ಪೂ. ಕಾಲೇಜುಗಳು ನಿರ್ಮಾಣ ಮಾಡಿವೆ.
ದ್ವಿತೀಯ ಪಿಯುಸಿಗೆ ದಾಖಲಾತಿ ಮತ್ತು ವಿದ್ಯಾರ್ಥಿ ಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನ ಸೌಲಭ್ಯಕ್ಕೆ ಅನು ಕೂಲ ಆಗುವಂತೆ ಅಸೈನ್ಮೆಂಟ್ ನಡೆಸಿ, ಅಂಕ ನಮೂದಿಸಲು ನಿರ್ದಿಷ್ಟ ಮಾನದಂಡ ನೀಡಿದ್ದು, ಅದರಂತೆ ಮೌಲ್ಯಾಂ ಕನ ಪ್ರಕ್ರಿಯೆ ನಡೆಯು ತ್ತಿದೆ. ಎರಡು ಮಾದರಿ ಪ್ರಶ್ನೆಪತ್ರಿಕೆ ಅಸೈನ್ಮೆಂಟ್ಗಾಗಿ ನೀಡಿರುವುದು.
-ಆರ್. ಸ್ನೇಹಲ್, ನಿರ್ದೇಶಕಿ, ಪದವಿಪೂರ್ವ ಶಿಕ್ಷಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್