ಫಸ್ಟ್ ಓಟ್ ಬೆಸ್ಟ್ ಓಟ್
ಯುವ ಮನದಲ್ಲಿ ಫಸ್ ಮೊದಲ ಮತದಾನ ಪುಳಕ
Team Udayavani, Apr 19, 2019, 11:51 AM IST
ಮೊದಲ ಬಾರಿಗೆ ತುಂಬಾ ಉತ್ಸುಕನಾಗಿ ಓಟ್ ಮಾಡಿದೆ. ಇವಿಎಂ ಒತ್ತಿದ ನಂತರ ವಿವಿಪ್ಯಾಟ್ ನಲ್ಲಿ ತಕ್ಷಣ ಚೀಟಿ ಬರಲಿಲ್ಲ. ನಂತರ ಬಂತು. ನನಗೆ ಖುಷಿಯಾಗಿದೆ.
● ಎ.ಎಸ್.ಮೋಹನ್, ವಿದ್ಯಾರ್ಥಿ.
ಮೊದಲ ಬಾರಿಗೆ ಇವಿಎಂ ನೋಡಿದಾಗ ಯಾರಿಗೆ ಓಟ್ ಮಾಡಬೇಕೆಂದು ತಿಳಿಯಲಿಲ್ಲ. ಒಂದು ಸೆಕೆಂಡ್ ಯೋಚಿಸಿ ಸೂಕ್ತ ಅಭ್ಯರ್ಥಿಗೆ ಇವಿಎಂ ಗುಂಡಿ ಒತ್ತಿದೆ.
●ಡಿ.ಸಾಧ್ವಿಕಾ, ವಿದ್ಯಾರ್ಥಿನಿ.
ಮೊದಲ ಬಾರಿಗೆ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವಾಗುತ್ತಿದೆ. ಕುಟುಂಬದವರೊಂದಿಗೆ ಹೋಗಿ ಹಕ್ಕು ಚಲಾವಣೆ ಮಾಡಿದ ಸಂಭ್ರಮವಿದೆ.
●ಕೆ.ಎಸ್.ಸಿಂಚನ, ವಿದ್ಯಾರ್ಥಿನಿ.
ಮತಗಟ್ಟೆಗೆ ಹೋಗುವವರೆಗೂ ಗೊಂದಲವಿತ್ತು. ಅಭ್ಯರ್ಥಿಗಳು ಮತ್ತು ಅವರ ಪಕ್ಷ, ಚಿಹ್ನೆ ಎಲ್ಲವೂ ಇವಿಎಂನಲ್ಲಿ ಹೇಗೆ ಜೋಡಿಸಿ ದ್ದಾರೆ, ನೋಡಿ ನನಗೆ ಖುಷಿಯಾಯಿತು.
●ಅಮೋಘ…, ವಿದ್ಯಾರ್ಥಿ
ಮೊಟ್ಟ ಮೊದಲು ಓಟ್ ದೇಶಕ್ಕಾಗಿ ಹಾಕಿದ್ದು ನನ್ನಲ್ಲಿ ಹೆಮ್ಮೆ ಮೂಡಿಸಿದೆ. ಹಕ್ಕು ಚಲಾವಣೆ ರಾಜ್ಯ, ದೇಶದ ಭವಿಷ್ಯ ಉತ್ತಮ ಗೊಳಿಸುವ ನಂಬಿಕೆ ಜನರಲ್ಲಿ ಬರಬೇಕಿದೆ.
●ನಿತಿನ್, ವಿದ್ಯಾರ್ಥಿ.
ನೋಟ ಆಯ್ಕೆ ಇವಿಎಂನಲ್ಲಿ ಹೇಗೆ ನಮೂದಿಸಿರುತ್ತಾರೆ ಎಂದು ತಿಳಿಯುವ ಕುತೂಹಲ ಪೂರ್ಣಗೊಂಡಿತು. ಮೊದಲ ಬಾರಿಗೆ ಮತ ಚಲಾಯಿಸಿ ಪುನೀತನಾದೆ.
●ಭರತ್, ವೈದ್ಯಕೀಯ ವಿದ್ಯಾರ್ಥಿ.
ತಂಗಿಯೊಂದಿಗೆ ಹೋಗಿ ತೋರು ಬೆರಳಿಗೆ ಮೊದಲ ಬಾರಿಗೆ ಮಸಿ ಬಳಿದುಕೊಂಡು ಖುಷಿಪಟ್ಟೆ. ಆಧಾರ್
ಕಾರ್ಡ್ ಮತ್ತು ಓಟರ್ ಐಡಿ ತೆಗೆದುಕೊಂಡು ಹೋಗುವುದು ತಿಳಿಯದೆ ಗೊಂದಲವಾಯಿತು.
●ದೀಕ್ಷಿತ್, ವಿದ್ಯಾರ್ಥಿ.
ಮತ ಚಲಾಯಿಸುವುದರ ಬಗ್ಗೆ ಬಹಳ ದಿನಗಳಿಂದ ಕುತೂಹಲವಿತ್ತು. ಕಳೆದ ಒಂದುವಾರದಿಂದ ಮತದಾನ ಮಾಡುವುದರ ಬಗ್ಗೆ ಮನೆಯವರನ್ನು ಕೇಳಿ ತಿಳಿದು ಕೊಂಡಿದ್ದೆ. ಈಗ ಸಂತಸವಾಗಿದೆ.
●ಎಚ್.ಎನ್.ರಮೇಶ್, ವಿದ್ಯಾರ್ಥಿ
ಮೊದಲ ಬಾರಿ ಮತದಾನ ಮಾಡುತ್ತಿರುವುದರಿಂದ ಸಹಜವಾಗೇ ಗೊಂದಲವಿತ್ತು. ಹೇಗೆ ಮತದಾನ
ಮಾಡುವುದು ಎನ್ನುವುದು ಗೊತ್ತಿರಲಿಲ್ಲ. ಮತದಾನ ಮಾಡಿದ್ದು ಖುಷಿಯಾಗಿದೆ.
●ನರಸಿಂಹ ಮೂರ್ತಿ, ವಿದ್ಯಾರ್ಥಿ
ನಮ್ಮ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಕುತೂಹಲವಿತ್ತು.
ಅತ್ಯಂತ ಜಾಣ್ಮೆಯಿಂದ ಆಯ್ಕೆ ಮಾಡಿದ್ದೀನಿ ಎನ್ನುವ ವಿಶ್ವಾಸವಿದೆ.
●ಮಂಜುನಾಥ್, ವಿದ್ಯಾರ್ಥಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ