ಆಹಾರ ಪೂರೈಕೆ; ಹಲವೆಡೆ ಏರಿಕೆ, ಕೆಲವೆಡೆ ಇಳಿಕೆ!
Team Udayavani, Oct 2, 2017, 1:03 PM IST
ಬೆಂಗಳೂರು: ಇಂದಿರಾ ಕ್ಯಾಂಟೀನ್ಗಳಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ಸಂಖ್ಯೆ ಹೆಚ್ಚಿಸಿ, ರಾತ್ರಿ ಊಟದ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಿರುವ ಬಿಬಿಎಂಪಿ, ಆಹಾರ ವಿತರಣೆ ಪಟ್ಟಿ ಪರಿಷ್ಕರಿಸುತ್ತಿದೆ.
ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಇದರಿಂದ ಆಹಾರ ಬೇಗ ಖಾಲಿಯಾಗುತ್ತಿದ್ದು, ಹಲವರು ಹಸಿದೇ ವಾಪಸಾಗುತ್ತಿದ್ದಾರೆ. ಕೆಲವೆಡೆ ರಾತ್ರಿ ಆಹಾರ ಹಾಗೆ ಉಳಿಯುತ್ತಿದೆ. ಈ ಅಸಮತೋಲನ ಸರಿದೂಗಿಸಲು ಪಾಲಿಕೆ ಅಧಿಕಾರಿಗಳು ಪರಿಷ್ಕರಣೆಗೆ ಮುಂದಾಗಿದ್ದಾರೆ.
ಅಧ್ಯಯನ ನಡೆಸಿ ಸೂಚನೆ: ಇಂದಿರಾ ಕ್ಯಾಂಟೀನ್ ಆರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಪ್ರಸ್ತುತ ಒಂದು ಹೊತ್ತಿಗೆ 300 ಜನರಿಗೆ ಊಟ ವಿತರಿಸುತ್ತಿದ್ದರೂ ಆಹಾರದ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಿರುವ ಅಧಿಕಾರಿಗಳು, 101 ವಾರ್ಡ್ಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಎಷ್ಟು ಜನರಿಗೆ ಆಹಾರ ವಿತರಿಸಬೇಕು ಎಂಬ ಪಟ್ಟಿ ಸಿದ್ಧಪಡಿಸಿ, ಅದರಂತೆ ಆಹಾರ ವಿತರಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಆಹಾರದ ಗುಣಮಟ್ಟ ಹಾಗೂ ರುಚಿ ಬಗ್ಗೆ ಜನ ತೃಪ್ತರಾಗಿದ್ದಾರೆ. ಆದರೆ, ವಿತರಣೆ ಆರಂಭವಾದ ಅರ್ಧ ಗಂಟೆಯಲ್ಲೇ ಆಹಾರ ಖಾಲಿಯಾಗುವ ಬಗ್ಗೆ ದೂರುಗಳಿವೆ. ಕಾರಣ, ಕ್ಯಾಂಟೀನ್ಗಳಿಗೆ ಭೇಟಿ ನೀಡುವ ಜನಸಂಖ್ಯೆಗೆ ಅನುಗುಣವಾಗಿ ಊಟದ ಸಂಖ್ಯೆ ನಿಗದಿಪಡಿಸುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಯಾವ ವಾರ್ಡ್ನ ಕ್ಯಾಂಟೀನ್ನಲ್ಲಿ ಯಾವ ಹೊತ್ತಿಗೆ ಎಷ್ಟು ಆಹಾರ ವಿತರಿಸಬೇಕು ಎಂಬ ಹೊಸ ಪಟ್ಟಿ ಭಾನುವಾರದಿಂದಲೇ ಜಾರಿಗೆ ಬಂದಿದೆ. ಪಾಲಿಕೆಯಿಂದ 101 ಕ್ಯಾಂಟೀನ್ಗಳಿಗೆ ನೇಮಿಸಿರುವ ನೋಡಲ್ ಅಧಿಕಾರಿಗಳು ಒಂದೂವರೆ ತಿಂಗಳಿನಿಂದ ಆಯಾ ಕ್ಯಾಂಟೀನಗಳಲ್ಲಿ ವಿತರಣೆಯಾದ, ಉಳಿಕೆಯಾದ ಹಾಗೂ ಕೊರತೆಯಾದ ಊಟದ ಸಂಖ್ಯೆಗಳ ಮಾಹಿತಿ ಕಲೆಹಾಕಿದ್ದಾರೆ.
ಹಲವು ಕ್ಯಾಂಟೀನ್ಗಳಲ್ಲಿ ತಿಂಡಿ-ಊಟ ಬೇಗ ಖಾಲಿಯಾಗುತ್ತಿದ್ದು, ವಿತರಿಸುವ ಪ್ಲೇಟ್ ಆಹಾರದ ಸಂಖ್ಯೆ ಹೆಚ್ಚಿಸಬೇಕು ಎಂಬ ಮನವಿಗಳು ಬಂದಿವೆ. ಇದಕ್ಕೆ ಪೂರಕವಾಗಿ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಅದಕ್ಕನುಗುಣವಾಗಿ ಆಹಾರ ಪೂರೈಸಲು ಗುತ್ತಿಗೆ ಸಂಸ್ಥೆಗಳಿಗೆ ಆದೇಶಿಸಲಾಗಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಈ ಕ್ಯಾಂಟೀನ್ಗಳಿಗಿನ್ನು ಆಹಾರ ಪೂರೈಕೆ ಕಡಿಮೆ
ವಾರ್ಡ್ ತಿಂಡಿ ಮಧ್ಯಾಹ್ನ ಊಟ
-ಕೆ.ಜಿ.ಹಳ್ಳಿ 250 250
-ಈಜೀಪುರ 300 300
-ಕರಿಸಂದ್ರ 300 300
-ಮಾರುತಿಸೇವಾನಗರ 300 400
-ಹೊಯ್ಸಳನಗರ 300 300
ಇಲ್ಲಿ ರಾತ್ರಿ ಊಟದ ಸಂಖ್ಯೆ ಇಳಿಕೆ
-ಆರ್.ಆರ್.ನಗರ 100
-ಉಳ್ಳಾಲ 150
-ಚಂದ್ರ ಲೇಔಟ್ 200
-ಕೊಟ್ಟಿಗೆಪಾಳ್ಯ 200
-ಬಸವನಗುಡಿ 200
ಆಹಾರ ಪೂರೈಕೆ ಏರಿಕೆಯಾದ ಕ್ಯಾಂಟೀನ್ಗಳು
ವಾರ್ಡ್ ತಿಂಡಿ ಮಧ್ಯಾಹ್ನ ಊಟ ರಾತ್ರಿ ಊಟ
-ಮಹಾಲಕ್ಷ್ಮೀಪುರ 600 600 400
-ಜಯನಗರ 600 600 300
-ಸುಭಾಷ್ನಗರ 600 600 400
-ಕೊಡಿಗೆಹಳ್ಳಿ 500 500 400
-ಕೆಂಪೇಗೌಡನಗರ 500 500 400
-(ಸಂಖ್ಯೆ ಪ್ಲೇಟ್ಗಳಲ್ಲಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು